ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಆರ್ಥಿಕ ಹಿಂಜರಿತ ಅಥವಾ ಉದ್ಯೋಗ ಕಡಿತದ ಈ ಸಂದರ್ಭದಲ್ಲಿ ಇರುವ ಕೆಲಸವನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ರಿಸೆಷನ್ ಪ್ರೂಫ್ ಜಾಬ್ ಎಂದು ಇದೆಯೇ? ಇದ್ದರೆ ಅದಕ್ಕೆ ಏನು ಮಾಡಬೇಕು? ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Nov 10, 2022 | 4:00 PM

ವಿಶ್ವದಾದ್ಯಂತ್ಯ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗುತ್ತಿದ್ದು ಆರ್ಥಿಕ ಹಿಂಜರಿತ (Global Recession), ಆರ್ಥಿಕ ಕುಸಿತ (Economic Downturn), ಆರ್ಥಿಕ ಸ್ಥಗಿತದ (Economic Stagnantion) ಭೀತಿ ಜನರನ್ನು ಕಾಡುತ್ತಿರುವುದು ಪ್ರತಿನಿತ್ಯದ ಮಾಧ್ಯಮ ವರದಿಗಳಿಂದ ತಿಳಿದುಬರುತ್ತಿದೆ. ಜತೆ-ಜತೆಗೇ ಉದ್ಯೋಗ ಕಡಿತದ ಗುಮ್ಮ ಕೂಡ ದುಡಿಯುವ ವರ್ಗವನ್ನು ಕಾಡುತ್ತಿದೆ. ಫೇಸ್​ಬುಕ್, ಇನ್​ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಅದಕ್ಕೂ ಮುನ್ನ ಟ್ವಿಟರ್ ಸುಮಾರು 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅಮೆರಿಕದ ಅನೇಕ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಕಳೆದ ಕೆಲವು ದಿನಗಳಲ್ಲಂತೂ ಐಟಿ ಕಂಪನಿಗಳ ಉದ್ಯೋಗ ಕಡಿತದ ಸುದ್ದಿ ಮಾಮೂಲಾಗಿಬಿಟ್ಟಿದೆ.

ಇತ್ತೀಚಿನ ಕಾರ್ಮಿಕ ವರದಿಯೊಂದರ ಪ್ರಕಾರ, ಸುಮಾರು 20 ಲಕ್ಷ ಜನ ಅಲ್ಪಾವಧಿಯ ಅಥವಾ ದೀರ್ಘಾವಧಿಗೆ ನಿರುದ್ಯೋಗಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 2008, 2009ರ ಆರ್ಥಿಕ ಹಿಂಜರಿತದಿಂದ ಪಾಠ ಕಲಿಯಬೇಕೆಂಬುದು ನಿಜವಾದರೂ ಉದ್ಯೋಗ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಹೀಗಾಗಿ ಆರ್ಥಿಕ ಹಿಂಜರಿತ ಅಥವಾ ಉದ್ಯೋಗ ಕಡಿತದ ಈ ಸಂದರ್ಭದಲ್ಲಿ ಇರುವ ಕೆಲಸವನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ರಿಸೆಷನ್ ಪ್ರೂಫ್ ಜಾಬ್ ಎಂದು ಇದೆಯೇ? ಇದ್ದರೆ ಅದಕ್ಕೆ ಏನು ಮಾಡಬೇಕು? ಅಮೆರಿಕದ ಉದ್ಯಮ ನಿಯತಕಾಲಿಕೆ ‘ಫಾಸ್ಟ್ ಕಂಪನಿ’ಯಲ್ಲಿ ಉದ್ಯೋಗ ತಜ್ಞೆ ಅಮಂಡಾ ಆಗಸ್ಟಿನ್ ನೀಡಿರುವ ಸಲಹೆಗಳು ಇಲ್ಲಿವೆ.

ರಿಸೆಷನ್ ಪ್ರೂಫ್ ಜಾಬ್ ಎಂದಿದೆಯೇ?

ಇದನ್ನೂ ಓದಿ
Image
Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ
Image
Meta Layoffs: ನನ್ನನ್ನು ಕ್ಷಮಿಸಿ; 11,000 ಉದ್ಯೋಗಿಗಳ ವಜಾಕ್ಕೆ ಮಾರ್ಕ್ ಝುಕರ್​ಬರ್ಗ್ ವಿಷಾದ
Image
2027ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ವರದಿ
Image
Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಸಂಪೂರ್ಣವಾಗಿ ರಿಸೆಷನ್ ಪ್ರೂಫ್ ಜಾಬ್ ಅಥವಾ ಆರ್ಥಿಕ ಹಿಂಜರಿತ ನಿರೋಧಕ ಉದ್ಯೋಗ ಎಂಬ ಪರಿಕಲ್ಪನೆ ಇಲ್ಲ. ಆದರೆ, ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೂ ಅದರ ಹೊಡೆತವನ್ನು ತಾಳಿಕೊಂಡು, ಉದ್ಯೋಗಕ್ಕೆ ತೊಂದರೆಯಾಗದಂತೆ ಕಾರ್ಯಾಚರಿಸಬಲ್ಲ ಹಲವು ಕ್ಷೇತ್ರಗಳಿವೆ ಎಂದಿದ್ದಾರೆ ಆಗಸ್ಟಿನ್. ಆರೋಗ್ಯ ಕ್ಷೇತ್ರ, ಶಿಕ್ಷಣ, ಹಣಕಾಸು ಸೇವೆಗಳು, ನ್ಯಾಯಾಂಗ ಸಂಬಂಧಿತ ಉದ್ಯೋಗಗಳು, ಯುಟಿಲಿಟಿ ಸೇವೆಗಳು ಇವುಗಳೆಲ್ಲ ಜನರ ಮೂಲ ಅವಶ್ಯಕತೆಗಳು. ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಆರ್ಥಿಕ ಹೊಡೆತವನ್ನು ತಾಳಿಕೊಂಡು ಮುನ್ನಡೆದಿವೆ. ಹೀಗಾಗಿ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತಂಥ ಕಾಲಘಟ್ಟದಲ್ಲಿ ಈ ಕ್ಷೇತ್ರಗಳ ಉದ್ಯೋಗ ಅವಲಂಬಿಸುವುದರಿಂದ ಆರ್ಥಿಕ ಹಿಂಜರಿತದ ನೇರ ಹೊಡೆತದಿಂದ ಪಾರಾಗಬಹುದು ಎನ್ನುತ್ತಾರವರು. ಉದ್ಯೋಗ ಕಡಿತಂಥ ಬೆಳವಣಿಗೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸುತ್ತಿರಬೇಕು. ಸಂದರ್ಭಕ್ಕನುಗುಣವಾಗಿ ಮೊದಲೇ ನಾವು ಬದಲಾವಣೆಗೆ ಸಿದ್ಧರಾಗಿರಬೇಕು. ಆಗ ಏಕಾಏಕಿ ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

ಇರುವ ಉದ್ಯೋಗ ಉಳಿಸಿಕೊಳ್ಳುವುದು ಹೇಗೆ?

ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಕಂಪನಿಯು ಉದ್ಯೋಗ ಕಡಿತಕ್ಕೆ ಮುಂದಾದರೆ, ನೀವು ಹೇಗೆ ಕಂಪನಿಗೆ ಅನಿವಾರ್ಯ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಜಾಣತನ ಮೆರೆಯಬೇಕು. ನಿಮ್ಮ ಕಂಪನಿಗೆ ನೀವು ಯಾವತ್ತೂ ಹೊರೆ ಎಂದು ಭಾವಿಸುವಂಥ ವಾತಾವರಣ ಸೃಷ್ಟಿಯಾಗಲು ಕಾರಣರಾಗಬಾರದು ಎಂದು ಸಲಹೆ ನೀಡಿದ್ದಾರೆ ಆಗಸ್ಟಿನ್. ನೀವು ಕಂಪನಿಗೆ ಏನು ಕೊಡುಗೆ ನೀಡುತ್ತಿದ್ದೀರಿ ಎಂಬುದನ್ನು ನಿಮ್ಮ ಮ್ಯಾನೇಜರ್​ಗೆ ಅರಿವು ಮಾಡಿಕೊಡುವತ್ತ ಗಮನಹರಿಸಬೇಕು. ಪ್ರತಿ ದಿನ ಅಲ್ಲವಾದರೂ ವಾರಕ್ಕೊಮ್ಮೆಯೋ, 15 ದಿನಗಳಿಗೊಮ್ಮೆಯಾದರೂ ಬಾಸ್ ಜತೆ ಸಮಾಲೋಚನೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Global Recssion: ಆರ್ಥಿಕ ಹಿಂಜರಿತದ ಆತಂಕದಲ್ಲಿ ಟೆಕ್ ಕಂಪನಿಗಳು, ವಿಶ್ವದಾದ್ಯಂತ ಆವರಿಸಿಕೊಂಡಿದೆ ಉದ್ಯೋಗ ಕಡಿತದ ಭೀತಿ

ಕಂಪನಿಗೆ ವೆಚ್ಚ ಕಡಿತದ ದೃಷ್ಟಿಯಿಂದ ನೀವು ಹೇಗೆ ಸಹಕಾರ ನೀಡಬಹುದು ಎಂಬುದರ ಬಗ್ಗೆಯೂ ಚಿಂತಿಸಿ. ನಿಮ್ಮ ಕಡೆಯಿಂದ ಏನು ಉಪಕರಣ, ಸಲಕರಣೆಗಳನ್ನು ಕಡಿಮೆ ಮಾಡುವ ಮೂಲಕ ಕಂಪನಿಯ ಖರ್ಚಿನಲ್ಲಿ ಕಡಿತ ಮಾಡಬಹುದು ಎಂದು ಯೋಚಿಸಿ. ಮತ್ತು ಈ ನಿಟ್ಟನಲ್ಲಿ ನೀವು ನೀಡಿದ ಕೊಡುಗೆಯನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಿ ಎಂದು ಅವರು ತಿಳಿಸಿದ್ದಾರೆ.

ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗುವುದು

ಆರ್ಥಿಕ ಹಿಂಜರಿತದಂಥ ಸಂದರ್ಭಗಳಲ್ಲಿ ಉದ್ಯೋಗ ಮಾರುಕಟ್ಟೆ ಮೇಲೆ ಸದಾ ನಿಗಾ ಇಟ್ಟಿರಬೇಕು. ನಾವು ಕೆಲಸ ಮಾಡುತ್ತಿರುವ ಉದ್ದಿಮೆ ಸುರಕ್ಷಿತವಾಗಿದೆಯೇ? ಇಲ್ಲವಾದಲ್ಲಿ ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಬೇಕು. ಬೇರೆ ಉದ್ಯೋಗ ಪಡೆಯುವುದು ಅನಿವಾರ್ಯವಾದರೆ ಅದಕ್ಕೆ ಸಿದ್ಧರಾಗಬೇಕು. ಮೊದಲೇ ತಯಾರಿ ಮಾಡಿಕೊಂಡು ಹೊಸ ಉದ್ಯೋಗದ ಹುಡುಕಾಟ ಆದಷ್ಟು ಬೇಗನೇ ಮಾಡಬೇಕು ಎಂದು ಆಗಸ್ಟಿನ್ ಸಲಹೆ ನೀಡಿದ್ದಾರೆ. ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಉದ್ದಿಮೆ ಚೆನ್ನಾಗಿದ್ದು, ಪ್ರತಿಸ್ಪರ್ಧಿಗಲು ಅದಕ್ಕಿಂತಲೂ ಚೆನ್ನಾಗಿ ನಿರ್ವಹಿಸುತ್ತಿದ್ದರೆ ಇಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆಯೂ ವಿವೇಚನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ