AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ

ಮಾತಾ ವೈಷ್ಣೋದೇವಿ ಚಿತ್ರ ಹೊಂದಿದ 10 ರೂಪಾಯಿ ನೋಟು ಇದ್ದರೆ ಅದಕ್ಕೆ ಲಕ್ಷಗಟ್ಟಲೆ ಹಣ ನೀಡಿ ಖರೀದಿಸುವವರು ಇದ್ದಾರಂತೆ. 1977ರಿಂದ 1979ರ ನಡುವಿನ ಒಂದು ರೂಪಾಯಿ ನೋಟು ಇದ್ದಲ್ಲಿ ಅದು 45 ಸಾವಿರ ರೂಪಾಯಿ ತನಕವೂ ಬಿಕರಿಯಾಗುತ್ತದೆಯಂತೆ.

Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ
ಹಳೇ ನೋಟು, ನಾಣ್ಯಗಳಿಂದ ಹಣ ಗಳಿಸಿ
TV9 Web
| Edited By: |

Updated on: Jul 05, 2021 | 8:45 AM

Share

ದೆಹಲಿ: ಕೆಲವರಿಗೆ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಎಷ್ಟೋ ವರ್ಷಗಳ ಹಿಂದಿನ ಅಂಚೆ ಚೀಟಿ, ಗಡಿಯಾರ, ಪೆನ್ನು, ನಾಣ್ಯ, ನೋಟಿನಿಂದ ಹಿಡಿದು ಬೈಕು, ಕಾರುಗಳ ತನಕ ತರಹೇವಾರಿ ವಸ್ತುಗಳು ಕೆಲವರ ಸಂಗ್ರಹದಲ್ಲಿರುತ್ತವೆ. ಒಮ್ಮೊಮ್ಮೆ ಅಂತಹ ವಸ್ತುಗಳಿಗೆ ಭಾರೀ ಬೇಡಿಕೆಯೂ ಸೃಷ್ಟಿಯಾಗುತ್ತದೆ. ಇದೀಗ ಅಪರೂಪದ ಹಳೇ ನಾಣ್ಯ, ನೋಟುಗಳನ್ನು ಸಂಗ್ರಹಿಸುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಹಳೆಯ ಹಾಗೂ ಅತ್ಯಪರೂಪದ 1 ರೂಪಾಯಿ, 2 ರೂಪಾಯಿ ಮುಖಬೆಲೆಯ ನಾಣ್ಯ ಮತ್ತು 1 ರೂಪಾಯಿ, 2 ರೂಪಾಯಿ, 5 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಅವುಗಳನ್ನು ಅಧಿಕ ಮೊತ್ತಕ್ಕೆ ಖರೀದಿಸಲಾಗುತ್ತಿದೆ.

ಈ ಅಪರೂಪದ ನೋಟು, ನಾಣ್ಯಗಳನ್ನು ಆನ್​ಲೈನ್ ಮೂಲಕ ಹರಾಜು ಹಾಕಬಹುದಾಗಿದ್ದು, ಕಾಯಿನ್​ಬಜಾರ್​ (CoinBazzar) ಎಂಬ ವೆಬ್​ಸೈಟ್​ ಮೂಲಕ ಹರಾಜಿಗೆ ಇಡಬಹುದಾಗಿದೆ. ಅದಕ್ಕಾಗಿ ನಿಮ್ಮ ಹೆಸರು, ಇಮೇಲ್​ ಐಡಿ, ಪೂರ್ಣ ವಿಳಾಸ ನೀಡಬೇಕಾಗಿದ್ದು, ನಿಮ್ಮ ಬಳಿ ಇರುವ ಅಪರೂಪದ ನೋಟು, ನಾಣ್ಯಗಳ ವಿವರ ತಿಳಿಸಿ ಅದಕ್ಕೆ ಎಷ್ಟು ಬೆಲೆ ಬಯಸುತ್ತೀರಿ ಎನ್ನುವುದನ್ನೂ ತಿಳಿಸಬೇಕಾಗುತ್ತದೆ. ಒಂದುವೇಳೆ ಆಸಕ್ತರು ಯಾರಾದರೂ ಇದ್ದಲ್ಲಿ ನಿಮ್ಮನ್ನು ನೇರವಾಗಿ ಸಂಪರ್ಕಿಸಿ, ಅವುಗಳಿಗೆ ತಕ್ಕ ಮೌಲ್ಯ ನೀಡಿ ಖರೀದಿ ಮಾಡುತ್ತಾರೆ.

ಒಂದುವೇಳೆ ಯಾರ ಬಳಿಯಾದರೂ ಮಾತಾ ವೈಷ್ಣೋದೇವಿ ಚಿತ್ರ ಹೊಂದಿದ 10 ರೂಪಾಯಿ ನೋಟು ಇದ್ದರೆ ಅದಕ್ಕೆ ಲಕ್ಷಗಟ್ಟಲೆ ಹಣ ನೀಡಿ ಖರೀದಿಸುವವರು ಇದ್ದಾರಂತೆ. 1977ರಿಂದ 1979ರ ನಡುವಿನ ಒಂದು ರೂಪಾಯಿ ನೋಟು ಇದ್ದಲ್ಲಿ ಅದು 45 ಸಾವಿರ ರೂಪಾಯಿ ತನಕವೂ ಬಿಕರಿಯಾಗುತ್ತದೆಯಂತೆ. ಆದರೆ, ಅದಕ್ಕೂ ಒಂದು ಕಂಡೀಷನ್​ ಇದ್ದು, ಆ ನೋಟಿನಲ್ಲಿ ಅಂದಿನ ವಿತ್ತ ಸಚಿವ ಹೀರೂಭಾಯ್ ಎಂ ಪಟೇಲ್​ ಅವರ ಸಹಿ ಇರಬೇಕಂತೆ.

ಅಂತೆಯೇ, ಒಎನ್​ಜಿಸಿ (Oil and Natural Gas Corporation) ಸ್ಮರಣಾರ್ಥ ಹೊರತಂದ 5ರೂಪಾಯಿ ಬೆಲೆಯ 10 ನಾಣ್ಯಗಳು ಒಟ್ಟು 200ರೂಪಾಯಿಗೆ ಬಿಕರಿಯಾಗುತ್ತಿದ್ದು, ಆರ್​ಬಿಐ ಗವರ್ನರ್​ ಡಿ.ಸುಬ್ಬರಾವ್​ ಅವರ ಸಹಿ ಇರುವ ವಿಶೇಷ ಸರಣಿ ಸಂಖ್ಯೆಯುಳ್ಳ 100 ರೂಪಾಯಿ ನೋಟುಗಳನ್ನು 1,999ರೂಪಾಯಿಗೆ ಕೊಳ್ಳಲಾಗುತ್ತಿದೆ. ಇನ್ನು ಕೆಲ ವಿಶೇಷ ನೋಟು, ನಾಣ್ಯಗಳು 40 ಸಾವಿರ ರೂಪಾಯಿ ತನಕವೂ ಹರಾಜಾಗುತ್ತಿದ್ದು ಭಾರೀ ಗಮನ ಸೆಳೆಯುತ್ತಿವೆ.

1943ರಲ್ಲಿ ಬ್ರಿಟೀಷ್​ ಆಡಳಿತ ಕಾಲದಲ್ಲಿ ಮುದ್ರಣಗೊಂಡ ಒಂದು ಬದಿ ಅಶೋಕ ಸ್ತಂಭ ಹಾಗೂ ಇನ್ನೊಂದು ಬದಿ ಬೋಟ್​ ಚಿತ್ರವುಳ್ಳ 10 ರೂಪಾಯಿ ನೋಟಿಗೆ 25 ಸಾವಿರ ರೂಪಾಯಿ ತನಕವೂ ಬೇಡಿಕೆ ಇದೆಯಂತೆ. ಆದರೆ, ಆ ನೋಟಿನಲ್ಲಿ ಅಂದಿನ ಆರ್​ಬಿಐ ಗವರ್ನರ್ ಸಿಡಿ ದೇಶ್​ಮುಖ್​ ಸಹಿ ಜತೆಗೆ 10 ರೂಪಾಯಿ ಎಂದು ನೋಟಿ ಎರಡೂ ಕಡೆ ಆಂಗ್ಲ ಅಕ್ಷರದಲ್ಲಿ ಬರೆದಿರಬೇಕು ಎನ್ನಲಾಗಿದೆ.

ಕಾಯಿನ್​ಬಜಾರ್​ ವೆಬ್​ಸೈಟ್​ನಲ್ಲಿ ಇಂತಹ ಹಲವು ವ್ಯವಹಾರಗಳಿಗೆ ಅವಕಾಶವಿದ್ದು, ಮಾರ್ಚ್​ 2015ರಿಂದ ಸಕ್ರಿಯವಾದ ಈ ಜಾಲತಾಣ ಹಳೇ ನೋಟು, ನಾಣ್ಯಗಳನ್ನು ಮಾರಲು, ಕೊಳ್ಳಲು ಉತ್ತಮ ವೇದಿಕೆಯಾಗಿದೆ. ಕಾಯಿನ್​ಬಜಾರ್​ನಂತೆಯೇ ಇಂಡಿಯಾಮಾರ್ಟ್​.ಕಾಂ ಎಂಬ ವೆಬ್​ಸೈಟ್​ ಒಂದಿದ್ದು ಅದರಲ್ಲಿ ಹಳೆಯ 25ಪೈಸೆ ಮುಖಬೆಲೆಯ ನಾಣ್ಯ, 1.5ಲಕ್ಷ ರೂಪಾಯಿ ತನಕ ಬಿಕರಿಯಾಗುತ್ತಿದೆಯಂತೆ. ಕ್ವಿಕರ್ ಜಾಲತಾಣದಲ್ಲೂ ಇದಕ್ಕೆ ಅವಕಾಶವಿದ್ದು ಹಳೇ ಕಾಲದ ನೋಟು, ನಾಣ್ಯ ಹೊಂದಿದವರು ಉತ್ತಮ ಹಣಗಳಿಸಬಹುದಾಗಿದೆ.

ಆದರೆ, ಈ ಎಲ್ಲಾ ವಹಿವಾಟಿನಲ್ಲೂ ಎಚ್ಚರಿಕೆ ಅತ್ಯವಶ್ಯಕವಾಗಿದ್ದು, ಯಾವುದೇ ಕಾರಣಕ್ಕೂ ಕ್ಯೂ ಆರ್​ ಕೋಡ್​ ಸ್ಕ್ಯಾಮ್​ನಂತಹ ಮೋಸಗಳಿಗೆ ಒಳಗಾಗದಂತೆ ಹೆಜ್ಜೆ ಇರಿಸಬೇಕಿದೆ. ಹೆಚ್ಚು ಲಾಭದ ಆಸೆ ತೋರಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಜಾಗರೂಕರಾಗಿ ವ್ಯವಹಾರ ಮಾಡಬೇಕಿದೆ.

ಇದನ್ನೂ ಓದಿ: 1 ರೂ. ನಾಣ್ಯಕ್ಕೆ 1 ಕೋಟಿ ರೂ. ಸಿಗಲಿದೆ ಎಂದು ನಂಬಿ 1 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಬೆಂಗಳೂರಿನ ಶಿಕ್ಷಕಿ 

Coin Auction: ಆ ಒಂದು ಚಿನ್ನದ ನಾಣ್ಯ ಹರಾಜಾಗಿದ್ದು 138 ಕೋಟಿ ರೂಪಾಯಿಗೆ; ಏನಿತ್ತು ಅಂಥ ವಿಶೇಷ ಅಂತೀರಾ?

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು