AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10X10 ಪುಟ್ಟ ರೂಮ್​ನಲ್ಲಿದ್ದ ಆತ, ಇಂದು 1000 ಕೋಟಿ ರೂ. ಒಡೆಯ! ಯಾರದು?

ಬದುಕಲ್ಲಿ ಯಶಸ್ಸಿನ ಹಾದಿ ಬಲು ದುರ್ಗಮ. ಆದರೆ, ಸಾಧಿಸುವ ಛಲವೊಂದಿದ್ದರೆ ಎಂಥದ್ದೇ ಕಠಿಣ ಪರಿಸ್ಥಿತಿಯನ್ನ ಎದುರಿಸಿ ಗೆಲ್ಲಬಹುದು. ಇದಕ್ಕೆ ತಕ್ಕ ಉದಾಹರಣೆ ಹನುಮಂತ್​ ರಾಮದಾಸ್​ ಗಾಯ​ಕ್​ವಾಡ್​. 10×10 ವಿಸ್ತೀರ್ಣದ ಪುಟ್ಟ ರೂಮ್​ನ ಬಾಡಿಗೆದಾರನಾಗಿದ್ದ ಈತ ಇದೀಗ 1,000 ಕೋಟಿ ಮೌಲ್ಯದ ಕಂಪನಿಯ ಒಡೆಯ. ಈತನ ಯಶೋಗಾಥೆಯೇ ಬಲು ರೋಚಕ. ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋರೆಗಾವ್​ ಗ್ರಾಮದವರಾದ ಹನುಮಂತ್​ ಗಾಯಕ್​ವಾಡ್ ತೀರ ಬಡಕುಟುಂಬದಲ್ಲಿ ಜನಿಸಿದವರು. ಸ್ಥಳೀಯ ಕೋರ್ಟ್​ನಲ್ಲಿ ಗುಮಾಸ್ತನಾಗಿದ್ದ ತಂದೆಯ ಸಂಬಳದಲ್ಲೇ ಕುಟುಂಬ ಬದುಕು ಸಾಗಿಸಬೇಕಿತ್ತು. ಆದರೆ, […]

10X10 ಪುಟ್ಟ ರೂಮ್​ನಲ್ಲಿದ್ದ ಆತ, ಇಂದು 1000 ಕೋಟಿ ರೂ. ಒಡೆಯ! ಯಾರದು?
KUSHAL V
| Edited By: |

Updated on:Nov 23, 2020 | 11:51 AM

Share

ಬದುಕಲ್ಲಿ ಯಶಸ್ಸಿನ ಹಾದಿ ಬಲು ದುರ್ಗಮ. ಆದರೆ, ಸಾಧಿಸುವ ಛಲವೊಂದಿದ್ದರೆ ಎಂಥದ್ದೇ ಕಠಿಣ ಪರಿಸ್ಥಿತಿಯನ್ನ ಎದುರಿಸಿ ಗೆಲ್ಲಬಹುದು. ಇದಕ್ಕೆ ತಕ್ಕ ಉದಾಹರಣೆ ಹನುಮಂತ್​ ರಾಮದಾಸ್​ ಗಾಯ​ಕ್​ವಾಡ್​. 10×10 ವಿಸ್ತೀರ್ಣದ ಪುಟ್ಟ ರೂಮ್​ನ ಬಾಡಿಗೆದಾರನಾಗಿದ್ದ ಈತ ಇದೀಗ 1,000 ಕೋಟಿ ಮೌಲ್ಯದ ಕಂಪನಿಯ ಒಡೆಯ. ಈತನ ಯಶೋಗಾಥೆಯೇ ಬಲು ರೋಚಕ.

ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋರೆಗಾವ್​ ಗ್ರಾಮದವರಾದ ಹನುಮಂತ್​ ಗಾಯಕ್​ವಾಡ್ ತೀರ ಬಡಕುಟುಂಬದಲ್ಲಿ ಜನಿಸಿದವರು. ಸ್ಥಳೀಯ ಕೋರ್ಟ್​ನಲ್ಲಿ ಗುಮಾಸ್ತನಾಗಿದ್ದ ತಂದೆಯ ಸಂಬಳದಲ್ಲೇ ಕುಟುಂಬ ಬದುಕು ಸಾಗಿಸಬೇಕಿತ್ತು. ಆದರೆ, ಮಗನ ಓದಿನ ಮೇಲೆ ಇದರ ಪರಿಣಾಮ ಬೀರದಂತೆ ಹನುಮಂತ್​ ತಂದೆ ನೋಡಿಕೊಂಡರು.

10X10 ರೂಮ್​ನಲ್ಲೇ ಬದುಕು ಸಾಗಿಸಿದ ಕುಟುಂಬ ಅಂತೆಯೇ ಹನುಮಂತ್​ ಕೂಡ ಒಳ್ಳೆಯ ವಿದ್ಯಾರ್ಥಿಯಾಗಿದ್ದು ಶಿಷ್ಯವೇತನ ಗಿಟ್ಟಿಸಿಕೊಂಡು ತಂದೆಯ ಮೇಲೆ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದರು. 10X10 ವಿಸ್ತೀರ್ಣದ, ಕರೆಂಟ್​ ಸೌಕರ್ಯ ಇಲ್ಲದ ಪುಟ್ಟ ರೂಮ್​ನಲ್ಲಿ ಇಡೀ ಕುಟುಂಬ ವಾಸವಿದ್ದರೂ ಅವರಿಗೆ ಅದೇ ಸ್ವರ್ಗ. ಆದರೆ, ಅದೃಷ್ಟ ಅವರ ಕೈ ಹಿಡಿಯಲಿಲ್ಲ.

ಕೆಲಸದ ನಿಮಿತ್ತ ಗಾಯಕ್​ವಾಡ್​ ತಂದೆಗೆ ಮುಂಬೈಗೆ ವರ್ಗಾವಣೆಯಾಯ್ತು. ಆದರೆ, ಅಲ್ಲಿನ ಹವಾಮಾನಕ್ಕೆ ಒಗ್ಗದ ಅವರ ತಂದೆ ಬಲು ಬೇಗ ಕಾಯಿಲೆಗ್ರಸ್ಥರಾಗಿ ಕೊನೆಯುಸಿರೆಳೆದರು. ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬದ ಪರಿಸ್ಥಿತಿ ದುಸ್ತರವಾಯ್ತು. ಆದರೆ ಇದ್ಯಾವುದಕ್ಕೂ ಎದೆಗುಂದದ ಹನುಮಂತ್​ ಛಲಬಿಡದೆ ಓದು ಮುಂದುವರೆಸಿದರು.

ಮಕ್ಕಳಿಗೆ ಟ್ಯೂಷನ್​ ಕಲಿಸಿ ಹಾಗೂ ತಮ್ಮ ತಾಯಿ ಹೊಲಿದ ಬಟ್ಟೆಗಳನ್ನ ಮಾರಿ ಬಂದ ಹಣದಲ್ಲೇ ಇಂಜಿನಿಯರಿಂಗ್​ ಪದವಿ ಗಳಿಸಿದರು. ನಂತರ 1994ನಲ್ಲಿ ಪುಣೆಯ ಟಾಟಾ ಮೋಟರ್ಸ್​ನಲ್ಲಿ ಟ್ರೈನಿಯಾಗಿ ಸೇರಿಕೊಂಡ ಹನುಮಂತ್​ ತಮ್ಮ ಶ್ರದ್ಧೆ ಹಾಗೂ ನಿಷ್ಠೆಯಿಂದ ಬಹುಬೇಗ ಕಂಪನಿಯಲ್ಲಿ ಗುರುತಿಸಿಕೊಂಡರು.

ಛಲವಾದಿಗೆ ದೊರಕಿತು ಟಾಟಾ ಸಂಸ್ಥೆಯ ನೆರವು ಈ ಮಧ್ಯೆ ಅವರ ಗ್ರಾಮಸ್ಥರು ಟಾಟಾ ಕಂಪನಿಯಲ್ಲಿ ನೌಕರಿ ಕೊಡಿಸಲು ಮನವಿ ಮಾಡಲಾರಂಭಿಸಿದರು. ಆದರೆ, ಕಂಪನಿಯ ನಿಯಮಾವಳಿಯಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ತಾನೇ ಯಾಕೆ ಇವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬಾರದು ಎಂಬ ಆಲೋಚನೆ ಹುಟ್ಟಿತು. ಇವರ ಈ ಯೋಚನೆಗೆ ಸಾಥ್​ ನೀಡಿದ ಟಾಟಾ ಮೋಟರ್ಸ್​ ತಮ್ಮದೇ ಫೈನಾನ್ಸ್​ ಸಂಸ್ಥೆಯಿಂದ 60 ಲಕ್ಷ ರೂಪಾಯಿ ಸಾಲ ಸಹ ಕೊಡಿಸಿತು. ಅಲ್ಲಿಂದ ಶುರುವಾಯ್ತು ಹನುಮಂತ್​ರ ಯಶೋಮಾರ್ಗ. 65 ಸಾವಿರ ಜನರಿಗೆ ಉದ್ಯೋಗಾವಕಾಶ 2000ದಲ್ಲಿ ಭಾರತ್​ ವಿಕಾಸ್​ ಪ್ರತಿಷ್ಠಾನ ಎಂಬ ಸಂಸ್ಥೆಯನ್ನ ಹುಟ್ಟುಹಾಕಿದ ಹನುಮಂತ್​ ಯುವಕರಲ್ಲಿ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂಥ ವ್ಯವಸ್ಥೆ ಕಲ್ಪಿಸಿದರು. ಕೇವಲ 8 ಸಿಬ್ಬಂದಿಯಿಂದ ಶುರುವಾದ ಸಂಸ್ಥೆ ಇದೀಗ ಸುಮಾರು 65 ಸಾವಿರ ಜನಕ್ಕೆ ಉದ್ಯೋಗ ನೀಡಿದೆ.

700 ಕಸ್ಟಮರ್​ಗಳನ್ನು ಹೊಂದಿರುವ ಭಾರತ್​ ವಿಕಾಸ್​ ಗ್ರೂಪ್​ ಇದೀಗ ರಾಷ್ಟ್ರಪತಿ ಭವನ, ಲೋಕಸಭೆ, ಪ್ರಧಾನಿ ಮೋದಿ ನಿವಾಸ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳ ನಿರ್ವಹಣೆ ಮತ್ತು ಹೌಸ್​ಕೀಪಿಂಗ್​ನ ಗುತ್ತಿಗೆ ಪಡೆದಿದೆ. ಜೊತೆಗೆ ಏಷಿಯಾದಲ್ಲೇ ಅತಿ ದೊಡ್ಡ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕಂಪನಿಯೆಂಬ ಖ್ಯಾತಿ ಸಹ ಪಡೆದಿದೆ.

ಅಂದ ಹಾಗೆ, ತನ್ನ ಸ್ವಂತ ಪರಿಶ್ರಮದಿಂದ ಇಷ್ಟೆಲ್ಲಾ ಗಳಿಸಿರುವ ಹನುಮಂತ್​ ಗಾಯಕ್​ವಾಡ್​ರ ಕಂಪನಿಯ ನಿವ್ವಳ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 1,000 ಕೋಟಿ ರೂಪಾಯಿಗಳು.

Published On - 4:54 pm, Wed, 15 July 20

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ