ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್​ಗಳಲ್ಲಿ 15 ಖುಲಾಸೆಯಾಗಿವೆ, ಸರ್ಕಾರ ದಿಕ್ಕುತಪ್ಪಿಸಿದೆ: ಮಹೇಶ್ ಟೆಂಗಿನಕಾಯಿ

| Updated By: ಗಣಪತಿ ಶರ್ಮ

Updated on: Jan 05, 2024 | 12:37 PM

ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್​ಗಳಲ್ಲಿ, 15 ರಲ್ಲಿ ಅವರು ಖುಲಾಸೆಯಾಗಿದ್ದಾರೆ. ಖುಲಾಸೆಯಾಗಿರುವ ವ್ಯಕ್ತಿಯನ್ನು ಅಪರಾಧಿ ಎಂದು ಹೇಳುವುದು ತಪ್ಪು ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್​ಗಳಲ್ಲಿ 15 ಖುಲಾಸೆಯಾಗಿವೆ, ಸರ್ಕಾರ ದಿಕ್ಕುತಪ್ಪಿಸಿದೆ: ಮಹೇಶ್ ಟೆಂಗಿನಕಾಯಿ
ಮಹೇಶ್​ ಟೆಂಗಿನಕಾಯಿ
Image Credit source: ANI
Follow us on

ಹುಬ್ಬಳ್ಳಿ, ಜನವರಿ 5: ಮೂವತ್ತು ವರ್ಷಗಳ ಹಿಂದಿನ ಹುಬ್ಬಳ್ಳಿ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ (Srikanth Poojari) ಬಗ್ಗೆ ಸರ್ಕಾರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಗಂಭೀರ ಆರೋಪ ಮಾಡಿದ್ದಾರೆ. ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್​ಗಳಲ್ಲಿ, 15 ರಲ್ಲಿ ಅವರು ಖುಲಾಸೆಯಾಗಿದ್ದಾರೆ. ಖುಲಾಸೆಯಾಗಿರುವ ವ್ಯಕ್ತಿಯನ್ನು ಅಪರಾಧಿ ಎಂದು ಹೇಳುವುದು ತಪ್ಪು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಖುಲಾಸೆಯಾಗಿ ಬಿಡುಗಡೆ ಆಗಿರುವ ವ್ಯಕ್ತಿಯನ್ನು ಅಪರಾಧಿ ಎನ್ನುವುದು ತಪ್ಪು. ಸರ್ಕಾರ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿಲ್ವಾ? ಅವರನ್ನು ಅಪರಾಧಿ ಎನ್ನಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಮುಂದಿನ ಹೋರಾಟದ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಅದರಂತೆ ಮುಂದಿನ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.

ರಾಮ ಭಕ್ತನಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತಾರೆಯೇ: ಟೆಂಗಿನಕಾಯಿ ಪ್ರಶ್ನೆ

ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಬಿಜೆಪಿ ಟಿಕೆಟ್ ನೀಡಲಿ ಎಂಬ ಕಾಂಗ್ರೆಸ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಟೆಂಗಿನಕಾಯಿ, ಹಾಗಿದ್ದರೆ ಇವತ್ತು ಕಾಂಗ್ರೆಸ್​ನ ನಿಲುವೇನು? ಅವರು ಮಾಡಿರುವ ತಪ್ಪಿಗೆ ಅವರು ರಾಮ ಭಕ್ತನಿಗೆ ಟಿಕೆಟ್ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ, ಗೃಹ ಸಚಿವರು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ಇದಕ್ಕೆ ಯಾರ ತಲೆದಂಡವಾಗಲಿದೆ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ವಿರುದ್ಧದ ಕೇಸ್ ಲಿಸ್ಟ್​​ನಲ್ಲಿ ಟ್ವಿಸ್ಟ್; ಪೊಲೀಸ್ ಕಾರ್ಯವೈಖರಿ ಮೇಲೆ ಸಂಶಯ

ಬಿಜೆಪಿಯವರ ವಿರುದ್ಧ ದೂರು ನೀಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೀವು (ಕಾಂಗ್ರೆಸ್​ನವರು) ಸತ್ಯವನ್ನು ಮುಚ್ಚಿಟ್ಟೀದ್ದೀರಿ‌. ನಾವೂ ನಾವು ನಿಮ್ಮ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಮಾಡುತ್ತೇವೆ. ನಿರಪರಾಧಿಯನ್ನು ಅಪರಾಧಿ ಅನ್ನೋ ಸತ್ಯ ಮುಚ್ಚಿಟ್ಟಿದ್ದಕ್ಕೆ ನಾವು ಎಲ್ಲರೂ ಸೇರಿ ದೂರು ನೀಡುತ್ತೇವೆ. ಒಂದು ಕಡೆ ಕೋಮು ಗಲಭೆ ಮಾಡಿದವರ ಪರ ಮಾತಾಡ್ತೀರಿ ಎಂದು ಟೆಂಗಿನಕಾಯಿ ಟೀಕಿಸಿದರು.

ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಪ್ರಕರಣಗಳು

ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಪ್ರಕರಣಗಳ ಬಗ್ಗೆ ಟೆಂಗಿನಕಾಯಿ ಮಾಹಿತಿ ನೀಡಿದ್ದಾರೆ. ಆ ವಿವರ ಇಲ್ಲಿದೆ;

  1. ಹುಬ್ಬಳ್ಳಿ ಶಹರ ಠಾಣೆ – FIR ನಂಬರ್ 252/92 – IPC ಸೆಕ್ಷನ್ 143/417/427/149 – ವಿಚಾರಣೆ ಹಂತದಲ್ಲಿದೆ
  2. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ- FIR ನಂಬರ್​ 231/98 -IPC 34 ಕರ್ನಾಟಕ ಅಬಕಾರಿ ಕಾಯ್ದೆ – 6/10/2000 ಬಿಡುಗಡೆ
  3. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 21/99 -IPC 324- 4/1/2001 ಬಿಡುಗಡೆ
  4. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 232/99-IPC ಕಲಂ 41(1)CRPC 109-18-1-2001 ಬಿಡುಗಡೆ
  5. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 80/2001-IPC 323/324/504/506 ಸಹಕಲಂ 34-7-2-2002 ರಾಜಿ ಬಿಡುಗಡೆ
  6. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 36/2002-34 ಕಲಂ ಕರ್ನಾಟಕ ಅಬಕಾರಿ ಕಾಯ್ದೆ -30-10-2002 ಬಿಡುಗಡೆ
  7. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 236/2002 KP ACT 78/3 -23-12-2002 ದಂಡ
  8. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 137/2002 KP ACT 78/3 -16-9-2003 ದಂಡ
  9. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 165/2003 KP ACT 78/3-22-11-2003 ದಂಡ
  10. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 199/2006 ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32 ,34 ಪ್ರಕರಣ ಖುಲಾಸೆ ಹಾಗೂ ಬಿಡುಗಡೆ
  11. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 170/2013 34,38 ಕರ್ನಾಟಕ ಅಬಕಾರಿ ಕಾಯ್ದೆ 16/09/2019 ರಂದು ಬಿಡುಗಡೆ
  12. ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ-FIR ನಂಬರ್ 250/2014 ಕಲಂ 323,324,341,504,506, ಸಹ ಕಲಂ34 IPC 21/12/2015 ಬಿಡುಗಡೆ
  13. ಕಸಬಾಪೇಟ ಪೊಲೀಸ್ ಠಾಣೆ-FIR ನಂಬರ್30/2004 ಕಲಂ 107 ಸಿಅರ್​​ಪಿಸಿ 20/06/2004 ಬಾಂಡೋವರ್​ ಆಗಿದೆ
  14. ಕಸಬಾಪೇಟ ಪೊಲೀಸ್ ಠಾಣೆ-FIR ನಂಬರ್-17/2009 ಕಲಂ 107 ಸಿಅರ್​​ಪಿಸಿ ಬಾಂಡೋವರ್​ ಆಗಿದೆ ದಿನಾಂಕ ನಿಗದಯಾಗಿಲ್ಲ
  15. ಕಸಬಾಪೇಟ ಪೊಲೀಸ್ ಠಾಣೆ-FIR ನಂಬರ್ 18/2018 ಕಲಂ 107 23/02/2018 ಬಾಂಡೋವರ್​ ಆಗಿದೆ
  16. ವಿದ್ಯಾನಗರ ಪೊಲೀಸ್ ಠಾಣೆ-FIR ನಂಬರ್-235/1998 ಕಲಂ 34 ಕರ್ನಾಟಕ ಅಬಕಾರಿ ಕಾಯ್ದೆ ಪ್ರಕರಣ ಖುಲಾಸೆಗೊಂಡು ಬಿಡುಗಡೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Fri, 5 January 24