ಪಬ್‌ಜಿ ಗೇಮ್​ ಹುಚ್ಚಿಗೆ ಬಲಿಯಾದ ನಾಲ್ವರು ಸ್ನೇಹಿತರು

ಧಾರವಾಡ: ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ನಿನ್ನೆ ಸಂಜೆ ನಾಲ್ವರು ಯುವಕರು ನೀರುಪಾಲಾದ ಪ್ರಕರಣ​ ಟ್ವಿಸ್ಟ್​ ಪಡೆದಿದೆ. ಪಬ್‌ಜಿ ಗೇಮ್ ಆಡುತ್ತಿದ್ದವನ ರಕ್ಷಣೆಗೆ ಹೋಗಿ ನಾಲ್ವರು ನೀರುಪಾಲಾಗಿದ್ದಾರೆಂದು ಉಳಿದ ಸ್ನೇಹಿತರು ಬಾಯ್ಬಿಟ್ಟಿದ್ದಾರೆ. ಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು 9 ಜನ ಸ್ನೇಹಿತರು ತೆರಳಿದ್ದರು. ಈ ವೇಳೆ ಪಾರ್ಟಿ ಮಾಡಲು ಹೋಗಿದ್ದವರಲ್ಲಿ ಸೋಹೆಲ್ ಸಯ್ಯದ್ ಎಂಬುವನು ಪಬ್‌ಜಿ ಗೇಮ್ ಆಡುತ್ತಾ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ಗೆಳೆಯ ಮುಂದಾಗಿದ್ದಾನೆ. ಹೀಗೆ ಒಬ್ಬರಂತೆ ಒಟ್ಟು ನಾಲ್ವರು ಸ್ನೇಹಿತರು […]

ಪಬ್‌ಜಿ ಗೇಮ್​ ಹುಚ್ಚಿಗೆ ಬಲಿಯಾದ ನಾಲ್ವರು ಸ್ನೇಹಿತರು
ಸಾಧು ಶ್ರೀನಾಥ್​

Updated on: Nov 14, 2019 | 10:19 AM

ಧಾರವಾಡ: ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ನಿನ್ನೆ ಸಂಜೆ ನಾಲ್ವರು ಯುವಕರು ನೀರುಪಾಲಾದ ಪ್ರಕರಣ​ ಟ್ವಿಸ್ಟ್​ ಪಡೆದಿದೆ. ಪಬ್‌ಜಿ ಗೇಮ್ ಆಡುತ್ತಿದ್ದವನ ರಕ್ಷಣೆಗೆ ಹೋಗಿ ನಾಲ್ವರು ನೀರುಪಾಲಾಗಿದ್ದಾರೆಂದು ಉಳಿದ ಸ್ನೇಹಿತರು ಬಾಯ್ಬಿಟ್ಟಿದ್ದಾರೆ.

ಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು 9 ಜನ ಸ್ನೇಹಿತರು ತೆರಳಿದ್ದರು. ಈ ವೇಳೆ ಪಾರ್ಟಿ ಮಾಡಲು ಹೋಗಿದ್ದವರಲ್ಲಿ ಸೋಹೆಲ್ ಸಯ್ಯದ್ ಎಂಬುವನು ಪಬ್‌ಜಿ ಗೇಮ್ ಆಡುತ್ತಾ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ಗೆಳೆಯ ಮುಂದಾಗಿದ್ದಾನೆ. ಹೀಗೆ ಒಬ್ಬರಂತೆ ಒಟ್ಟು ನಾಲ್ವರು ಸ್ನೇಹಿತರು ನೀರುಪಾಲಾಗಿದ್ದಾರೆ ಎಂದು ಉಳಿದ ಸ್ನೇಹಿತರು ಪೊಲೀಸರೆದುರು ಹೇಳಿದ್ದಾರೆ.

ಗಣೇಶ ಪೇಟೆಯ ಮಚ್ಚಿಮಾರ್ಕೆಟ್ ನಿವಾಸಿಗಳು ನಿನ್ನೆ ಈಜಲು ತೆರಳಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಈ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Published On - 9:57 am, Tue, 12 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us