ಪಬ್‌ಜಿ ಗೇಮ್​ ಹುಚ್ಚಿಗೆ ಬಲಿಯಾದ ನಾಲ್ವರು ಸ್ನೇಹಿತರು

ಧಾರವಾಡ: ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ನಿನ್ನೆ ಸಂಜೆ ನಾಲ್ವರು ಯುವಕರು ನೀರುಪಾಲಾದ ಪ್ರಕರಣ​ ಟ್ವಿಸ್ಟ್​ ಪಡೆದಿದೆ. ಪಬ್‌ಜಿ ಗೇಮ್ ಆಡುತ್ತಿದ್ದವನ ರಕ್ಷಣೆಗೆ ಹೋಗಿ ನಾಲ್ವರು ನೀರುಪಾಲಾಗಿದ್ದಾರೆಂದು ಉಳಿದ ಸ್ನೇಹಿತರು ಬಾಯ್ಬಿಟ್ಟಿದ್ದಾರೆ. ಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು 9 ಜನ ಸ್ನೇಹಿತರು ತೆರಳಿದ್ದರು. ಈ ವೇಳೆ ಪಾರ್ಟಿ ಮಾಡಲು ಹೋಗಿದ್ದವರಲ್ಲಿ ಸೋಹೆಲ್ ಸಯ್ಯದ್ ಎಂಬುವನು ಪಬ್‌ಜಿ ಗೇಮ್ ಆಡುತ್ತಾ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ಗೆಳೆಯ ಮುಂದಾಗಿದ್ದಾನೆ. ಹೀಗೆ ಒಬ್ಬರಂತೆ ಒಟ್ಟು ನಾಲ್ವರು ಸ್ನೇಹಿತರು […]

ಪಬ್‌ಜಿ ಗೇಮ್​ ಹುಚ್ಚಿಗೆ ಬಲಿಯಾದ ನಾಲ್ವರು ಸ್ನೇಹಿತರು
ಸಾಧು ಶ್ರೀನಾಥ್​

Updated on: Nov 14, 2019 | 10:19 AM

ಧಾರವಾಡ: ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ನಿನ್ನೆ ಸಂಜೆ ನಾಲ್ವರು ಯುವಕರು ನೀರುಪಾಲಾದ ಪ್ರಕರಣ​ ಟ್ವಿಸ್ಟ್​ ಪಡೆದಿದೆ. ಪಬ್‌ಜಿ ಗೇಮ್ ಆಡುತ್ತಿದ್ದವನ ರಕ್ಷಣೆಗೆ ಹೋಗಿ ನಾಲ್ವರು ನೀರುಪಾಲಾಗಿದ್ದಾರೆಂದು ಉಳಿದ ಸ್ನೇಹಿತರು ಬಾಯ್ಬಿಟ್ಟಿದ್ದಾರೆ.

ಗುಡಿಹಾಳ ಗ್ರಾಮಕ್ಕೆ ಪಾರ್ಟಿ ಮಾಡಲು 9 ಜನ ಸ್ನೇಹಿತರು ತೆರಳಿದ್ದರು. ಈ ವೇಳೆ ಪಾರ್ಟಿ ಮಾಡಲು ಹೋಗಿದ್ದವರಲ್ಲಿ ಸೋಹೆಲ್ ಸಯ್ಯದ್ ಎಂಬುವನು ಪಬ್‌ಜಿ ಗೇಮ್ ಆಡುತ್ತಾ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ಗೆಳೆಯ ಮುಂದಾಗಿದ್ದಾನೆ. ಹೀಗೆ ಒಬ್ಬರಂತೆ ಒಟ್ಟು ನಾಲ್ವರು ಸ್ನೇಹಿತರು ನೀರುಪಾಲಾಗಿದ್ದಾರೆ ಎಂದು ಉಳಿದ ಸ್ನೇಹಿತರು ಪೊಲೀಸರೆದುರು ಹೇಳಿದ್ದಾರೆ.

ಗಣೇಶ ಪೇಟೆಯ ಮಚ್ಚಿಮಾರ್ಕೆಟ್ ನಿವಾಸಿಗಳು ನಿನ್ನೆ ಈಜಲು ತೆರಳಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಈ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Published On - 9:57 am, Tue, 12 November 19

Loading...
Unable to load recommendations.
Follow Us