Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪ್ತನ ಮನೆಯಲ್ಲಿ ಕಾಲ‌ ಕಳೆಯುತ್ತಿರೋ ರಾಮುಲು: ಸಂಜೆ ಸಿಎಂ ಭೇಟಿ, ರಾಜೀನಾಮೆ?

ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು. ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ. ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು […]

ಆಪ್ತನ ಮನೆಯಲ್ಲಿ ಕಾಲ‌ ಕಳೆಯುತ್ತಿರೋ ರಾಮುಲು: ಸಂಜೆ ಸಿಎಂ ಭೇಟಿ, ರಾಜೀನಾಮೆ?
ಸಚಿವ ಬಿ.ಶ್ರೀರಾಮುಲು
Follow us
ಸಾಧು ಶ್ರೀನಾಥ್​
|

Updated on:Oct 12, 2020 | 4:19 PM

ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು.

ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ.

ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು ಉತ್ತರದತ್ತ ಮುಖ ಮಾಡಿದ ಶ್ರೀರಾಮುಲು ಚಿಕ್ಕಜಾಲ ಬಳಿಯಿರುವ ತಮ್ಮ ಆಪ್ತನ ಮನೆಗೆ ತೆರಳಿದರು. ಅಲ್ಲಿ ಸಚಿವ ಸ್ಥಾನದ ಅದಲುಬದಲು ಬೇಸರದಲ್ಲಿ ಮನೆಯಲ್ಲೇ ಕಾಲ‌ ಕಳೆಯುತ್ತಿದ್ದಾರೆ ರಾಮುಲು. ಮನೆಯ ಕೊಣೆಯಲ್ಲಿ ಒಂಟಿಯಾಗಿರೋ ರಾಮುಲು, ಆಪ್ತರು ಸೇರಿದಂತೆ ಯಾರಿಗೂ ಒಳಬಾರದಂತೆ ಸೂಚಿಸಿ ಒಂಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಸಂಜೆ ಸಿಎಂ ಭೇಟಿ, ರಾಜೀನಾಮೆ? ತಮ್ಮ ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂಪಡೆದ ಹಿನ್ನೆಲೆ ತೀವ್ರ ನಿರಾಶೆಗೊಂಡಿರುವ ಸಚಿವ ಬಿ. ಶ್ರೀರಾಮುಲು ಇಂದು ಸಂಜೆ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆ ವೇಳೆ, ಅತೃಪ್ತಿ ಶಮನವಾಗದಿದ್ದರೆ ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Published On - 3:43 pm, Mon, 12 October 20

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್