AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Mysuru Expressway: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು

ದಶಪಥ ಹೆದ್ದಾರಿಯೇ ಬೇಡ, ಬೇರೆಯೇ ಮಾರ್ಗದಲ್ಲಿ ಮೈಸೂರಿಗೆ ಅಥವಾ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇವೆ ಎನ್ನುವುದಾದರೆ ಯಾವೆಲ್ಲ ಮಾರ್ಗಗಳಿವೆ? ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Bengaluru Mysuru Expressway: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇ
ಗಣಪತಿ ಶರ್ಮಾ
|

Updated on: Mar 24, 2023 | 8:20 AM

Share

ಮುಖ್ಯಾಂಶಗಳು

  • ಮೈಸೂರು - ಬೆಂಗಳೂರು ಮಧ್ಯೆ ದಶಪಥ ಹೆದ್ದಾರಿ ಬಿಟ್ಟು ಬೇರೆ ಯಾವೆಲ್ಲ ಮಾರ್ಗಗಳಿವೆ?
  • ಪರ್ಯಾಯ ಮಾರ್ಗಗಳಲ್ಲೂ ಟೋಲ್ ಪಾವತಿಸಬೇಕಾಗುವುದಿಲ್ಲವೇ?
  • ಬೆಂಗಳೂರಿನಿಂದ ಕನಕಪುರ, ಮಳವಳ್ಳಿ, ಬನ್ನೂರು ಮೂಲಕ ಮೈಸೂರಿಗೆ ತೆರಳಬಹುದಾಗಿದೆ, ಆದರೆ ತಗಲುವ ಸಮಯವೆಷ್ಟು?

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ (Bengaluru-Mysuru Expressway) ಅನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದಾರೆ. ಅದರ ಬೆನ್ನಲ್ಲೇ ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹವೂ (Toll Collection) ಆರಂಭವಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ. ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೆ ಟೋಲ್ ಸಂಗ್ರಹ ಸರಿಯಲ್ಲ, ಸೂಕ್ತ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡದೇ ಟೋಲ್ ಸಂಗ್ರಹ ಮಾಡಬಾರದು ಎಂಬ ಕೂಗುಗಳೂ ಕೇಳಿಬಂದಿವೆ. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ. ಆದರೆ, ಎಕ್ಸ್​ಪ್ರೆಸ್​ ವೇ ಪರಿಕಲ್ಪನೆಯಲ್ಲಿ ಸರ್ವೀಸ್ ರಸ್ತೆಯೂ ಸೇರಿಕೊಂಡಿರುತ್ತದೆ. ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇಯ ಆರು ಲೇನ್​ಗಳು ಪ್ರಮುಖವಾದದ್ದಾಗಿದ್ದು, ಎರಡೂ ಬದಿಯ ತಲಾ ಎರಡು ಲೇನ್​ಗಳನ್ನು ಸರ್ವೀಸ್ ರಸ್ತೆ ಎಂದು ಪರಿಗಣಿಸಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ದಶಪಥ ಹೆದ್ದಾರಿಯೇ ಬೇಡ, ಬೇರೆಯೇ ಮಾರ್ಗದಲ್ಲಿ ಮೈಸೂರಿಗೆ ಅಥವಾ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇವೆ ಎನ್ನುವುದಾದರೆ ಯಾವೆಲ್ಲ ಮಾರ್ಗಗಳಿವೆ? ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಕನಕಪುರ ಮಾರ್ಗವಾಗಿ ಹೋಗುವುದು ಹೇಗೆ?

ಬೆಂಗಳೂರಿನಿಂದ ಕನಕಪುರ, ಹಲಗೂರು, ಮಳವಳ್ಳಿ, ಕಿರುಗಾವಲು, ಬನ್ನೂರು ಮೂಲಕ ಮೈಸೂರಿಗೆ ತೆರಳಬಹುದಾಗಿದೆ. ಹೀಗೆ ಪ್ರಯಾಣಿಸಲು ಒಟ್ಟು 164 ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ. ಗೂಗಲ್​ ಮ್ಯಾಪ್ಸ್​ ಪ್ರಕಾರ ಈ ಮಾರ್ಗದ ಪ್ರಯಾಣಕ್ಕೆ ಸುಮಾರು 4 ತಾಸು ಬೇಕಾಗಲಿದೆ.

ಬೆಳ್ಳೂರು ಕ್ರಾಸ್ ಮೂಲಕವೂ ಹೋಗಬಹುದು, ಆದರೆ ಟೋಲ್ ಇದೆ!

ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್, ನೆಲಮಂಗಲ ಮೂಲಕವೂ ಬೆಂಗಳೂರಿಗೆ ಸಂಚರಿಸಬಹುದಾಗಿದೆ. ಆದರೆ, ಇದು ತುಂಬಾ ದೂರದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದಾದರೆ 195 ಕಿಲೋಮೀಟರ್ ದೂರ ಕ್ರಮಿಸಬೇಕಾಗಿದ್ದು, ಗೂಗಲ್​ ಮ್ಯಾಪ್ಸ್​ ಪ್ರಕಾರ ಸುಮಾರು 4 ತಾಸು ಬೇಕಾಗಲಿದೆ. ಆದರೆ, ಮತ್ತೆ ಈ ಮಾರ್ಗದಲ್ಲಿಯೂ ನೆಲಮಂಗಲದಿಂದ ಬೆಳ್ಳೂರು ಕ್ರಾಸ್ ನಡುವೆ ಟೋಲ್ ಪಾವತಿಸಿ ಸಂಚರಿಸಬೇಕಾಗುತ್ತದೆ. ಹೀಗಾಗಿ ಇದಕ್ಕಿಂತ ಎಕ್ಸ್​ಪ್ರೆಸ್​ ವೇ ಸಂಚಾರವೇ ಉತ್ತಮವಾಗಿದೆ.

ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುವುದಾದರೆ ಯಾವುದು ಬೆಸ್ಟ್?

ಇನ್ನು, ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಹೋಗುವುದಾದರೆ ಸಮಯದ ದೃಷ್ಟಿಯಿಂದ ನೋಡಿದರೆ ದಶಪಥ ಹೆದ್ದಾರಿಯೇ ಸೂಕ್ತ ಎಂಬುದು ಗೂಗಲ್ ಮ್ಯಾಪ್ಸ್​ನಿಂದ ತಿಳಿದುಬರುತ್ತದೆ. ಆದರೆ, ನೆಲಮಂಗಲ – ಯಡಿಯೂರು, ನಾಗಮಂಗಲ, ಶ್ರೀರಂಗಪಟ್ಟಣ ಮೂಲಕವೂ ಮೈಸೂರಿಗೆ ತೆರಳಬಹುದಾಗಿದೆ.

ಆದರೆ, ಪರ್ಯಾಯ ಮಾರ್ಗಗಳೆಲ್ಲವೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಹಾಗೂ ಇದಕ್ಕಾಗಿ ಹೆಚ್ಚು ಇಂಧನವನ್ನೂ ವ್ಯಯಿಸಬೇಕಾಗುತ್ತದೆ ಎಂಬುದು ಗಮನಾರ್ಹ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಥವಾ ಬೆಂಗಳೂರು ನಗರದ ಹೊರವಲಯಗಳಿಂದ ಮೈಸೂರನ್ನು ಸಂಪರ್ಕಿಸುವ ಸಂದರ್ಭ ಬಂದಾಗಲಷ್ಟೇ ಈ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಬಹುದು.

ದಶಪಥವೇ ಹೆದ್ದಾರಿಯೇ ಬೆಸ್ಟ್

ಪರ್ಯಾಯ ಮಾರ್ಗಗಳಿಗೆ ಹೋಲಿಸಿದರೆ ಉಭಯ ನಗರಗಳ ನಡುವಣ ಸಂಚಾರಕ್ಕೆ ಎಕ್ಸ್​ಪ್ರೆಸ್​​ ವೇ ಹೆದ್ದಾರಿಯೇ ಉತ್ತಮ ಆಯ್ಕೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸಮಯದ ಅವಧಿ, ಇಂಧನ ಉಳಿತಾಯ ಇತ್ಯಾದಿ ವಿಚಾರಗಳನ್ನು ಗಣನೆಗೆ ತೆಗೆದುಕೊಂಡರೆ ಎಕ್ಸ್​ಪ್ರೆಸ್​ ವೇ ಸಂಚಾರವೇ ಸುಗಮ. ಟೋಲ್ ದರ ತುಸು ದುಬಾರಿ ಎಂಬುದು ಬಿಟ್ಟರೆ ಅತಿ ಕಡಿಮೆ ಅವಧಿಯಲ್ಲಿ, ಅಂದರೆ ಸುಮಾರು ಒಂದೂಕಾಲು ತಾಸಿನಿಂದ ಒಂದೂವರೆ ತಾಸಿನ ಒಳಗಾಗಿ ಗಮ್ಯ ತಲುಪಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!