AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸಿಗರನ್ನು ಸೆಳೆಯುತ್ತಿರುವ ದಕ್ಷಿಣ ಕಾಶಿ ಕ್ಷೇತ್ರ ‘ಅಂತರಗಂಗೆ ಬೆಟ್ಟ’ ಇಲ್ಲಿದೆ ಕೆಲವು ವಿಶೇಷತೆಗಳು

Antara Gange Hill: ಕೋಲಾರ ಜಿಲ್ಲೆಯಲ್ಲಿರುವ ಅಂತರಗಂಗೆ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನಿರಂತರ ಮಳೆಯಿಂದ ಕಿರು ಜಲಪಾತಗಳು ಹರಿಯುತ್ತಿದ್ದು, ಇದನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.

ಪ್ರವಾಸಿಗರನ್ನು ಸೆಳೆಯುತ್ತಿರುವ ದಕ್ಷಿಣ ಕಾಶಿ ಕ್ಷೇತ್ರ 'ಅಂತರಗಂಗೆ ಬೆಟ್ಟ' ಇಲ್ಲಿದೆ ಕೆಲವು ವಿಶೇಷತೆಗಳು
ಅಂತರ ಗಂಗೆ ಬೆಟ್ಟ
TV9 Web
| Edited By: |

Updated on:Sep 14, 2022 | 5:58 PM

Share

ಕೋಲಾರ: ಜಿಲ್ಲೆಯಲ್ಲಿರುವ ಅಂತರಗಂಗೆ ಬೆಟ್ಟವು ಸ್ಥಳೀಯರನ್ನು ಮಾತ್ರವಲ್ಲದೆ ನೂರಾರು ಸಂಖ್ಯೆಯಲ್ಲಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದಕ್ಷಿಣ ಕಾಶಿ ಕ್ಷೇತ್ರವೆಂದೇ ಹೇಳಲಾಗುವ ಅಂತರಗಂಗೆ ಬೆಟ್ಟದಲ್ಲಿನ ದೇವಾಲಯದ ಬಳಿ ನಿರಂತರವಾಗಿ ನೀರು ಚಿಮ್ಮುತ್ತಿರುತ್ತದೆ. ಹಚ್ಚ ಹಸಿರು ಬಣ್ಣದಿಂದ ಕೂಡಿರುವ ಈ ಪ್ರದೇಶ ಪೈರು ಪಚ್ಚೆಗಳು, ಮರ ಗಿಡಗಳು ಹಾಗೂ ಸಣ್ಣ-ದೊಡ್ಡ ಗಾತ್ರದ ಬಂಡೆಗಲ್ಲಿನಿಂದ ಕೂಡಿ ಕಂಗೊಳಿಸುತ್ತಿದೆ. ಅನೇಕ ನಿಗೂಢಗಳನ್ನು ಹೊಂದಿರುವ ಪುಣ್ಯ ಕ್ಷೇತ್ರವೂ ಹೌದು. ಸದ್ಯ ಈ ಕ್ಷೇತ್ರಕ್ಕೆ ನಿತ್ಯ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರಂತರ ಮಳೆಯಿಂದ ಅಲ್ಲಿರುವ ಕಿರು ಜಲಪಾತಗಳು ಹರಿಯುತ್ತಿರುವುದೇ ಇದಕ್ಕೆ ಕಾರಣ.

ಅಂತರಗಂಗೆಯ ವಿಶೇಷತೆ

ಅಂತರಗಂಗೆಯು ವಿಶಿಷ್ಟವಾದ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಬೆಟ್ಟ ಶ್ರೇಣಿಯಾಗಿದೆ. ಬೆಂಗಳೂರಿನಿಂದ ಸರಿಸುಮಾರು 70 ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1226 ಮೀಟರ್ ಎತ್ತರದಲ್ಲಿ ಇದೆ. ಅಂತರಗಂಗೆಯ ಪ್ರಮುಖ ಆಕರ್ಷಣೆಗಳೆಂದರೆ ಬಂಡೆಗಳಿಂದ ರೂಪುಗೊಂಡ ನೈಸರ್ಗಿಕ ಗುಹೆಗಳ ಸರಣಿ. ಅಂತರಗಂಗೆ ಎಂಬ ಹೆಸರು ಗುಡ್ಡಗಾಡು ಪ್ರದೇಶದ ಕಾಶಿ ವಿಶ್ವೇಶ್ವರ ದೇವಸ್ಥಾನದ ಬಳಿ ಕಂಡುಬರುವ ದೀರ್ಘಕಾಲಿಕ ಚಿಲುಮೆಯನ್ನು ಸೂಚಿಸುತ್ತದೆ. ಗುಡ್ಡಗಾಡು ಪ್ರದೇಶವು ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಆಶ್ರಯ ತಾಣವಾಗಿದೆ. ಕೆಲವು ಹಳೆಯ ದೇವಾಲಯಗಳು ಕಾಣಸಿಗುವುದು ಅಂತರಗಂಗೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಚಿಲುಮೆಯು ಬಂಡೆಯ ಸಣ್ಣ ಸಂದಿಯಿಂದ ಹೊರಬಂದು ವರ್ಷವಿಡೀ ಹರಿಯುತ್ತದೆ. ಇದರ ಮೂಲವು ಎಲ್ಲರಿಗೂ ತಿಳಿದಿಲ್ಲ. ಅದಾಗ್ಯೂ ಚಿಲುಮೆಯಿಂದ ಹೊರಡುವ ನೀರು ದೇಶದ ಪೂರ್ವ ಭಾಗದಲ್ಲಿ ಹರಿಯುವ ಪವಿತ್ರ ಗಂಗಾ ನದಿಯ ಮೂಲವಾಗಿದೆ ಎಂದು ನಂಬಲಾಗಿದೆ. ಅಂತರಗಂಗೆ ಎಂದರೆ ಒಳ ಹೊಳೆ ಅಥವಾ ಆಳದಿಂದ ಬಂದ ಗಂಗೆ ಎಂಬೂದಾಗಿದೆ. ನೀರಿನ ಹರಿವು ಹತ್ತಿರದ ಕೊಳಕ್ಕೆ ಹರಿಯುತ್ತದೆ. ಈ ಅಂತರಗಂಗೆಯ ಚಿಲುಮೆಯ ನೀರನ್ನು ಸ್ಥಳೀಯ ಜನರು ಮತ್ತು ಪ್ರವಾಸಿಗರು ಆಧ್ಯಾತ್ಮಿಕ ಮನಸ್ಸಿನಿಂದ ಪವಿತ್ರವೆಂದು ಪರಿಗಣಿಸುತ್ತಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Wed, 14 September 22

Follow Us
‘ದರ್ಶನ’ ಸಿನಿಮಾ ಮುಹೂರ್ತ: ತಬಲಾ ನಾಣಿ ಮಾತಿಗೆ ನಕ್ಕು ಸುಸ್ತಾದ ಜನ
‘ದರ್ಶನ’ ಸಿನಿಮಾ ಮುಹೂರ್ತ: ತಬಲಾ ನಾಣಿ ಮಾತಿಗೆ ನಕ್ಕು ಸುಸ್ತಾದ ಜನ
VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!
VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!
ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ 7ನೇ ವೇತನ ಆಯೋಗ ಜಾರಿ: ಮೋದಿ
ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ 7ನೇ ವೇತನ ಆಯೋಗ ಜಾರಿ: ಮೋದಿ
ಬಾಗಲಕೋಟೆ ಬೈ ಎಲೆಕ್ಷನ್​​: ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​?
ಬಾಗಲಕೋಟೆ ಬೈ ಎಲೆಕ್ಷನ್​​: ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​?
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ