AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಬಂದ್ರೆ ಅರ್ಧ ಎಕರೆ ಜಮೀನು ಢಮಾರ್ -ಶಿವಲಿಂಗೇಗೌಡರ ‘ವೈರಸ್​’ ಬಾತ್​!

ಬೆಂಗಳೂರು: ಲಾಕ್‌ಡೌನ್‌ಗೆ ಕರೆ ಕೊಟ್ಟಾಗ ಹಾಸನ ಜಿಲ್ಲೆಯಲ್ಲಿ ಒಂದೇ ಒಂದು ಕೊವಿಡ್​ ಕೇಸ್ ಇರಲಿಲ್ಲ. ಆಗ ಮುಂಬೈನಿಂದ ಬರುವವರನ್ನು ಟೆಸ್ಟ್ ಮಾಡಬೇಕೆಂದಿದ್ದೆ. ಆದರೆ, ಆಗ ಕೊರೊನಾ ಮಹತ್ವ ಕಳೆದುಕೊಂಡಿದೆ ಅಂದಿದ್ದರು ಎಂದು ವಿಧಾನಸಭೆಯಲ್ಲಿ ಅರಸೀಕೆರೆ JDS ಶಾಸಕ ಶಿವಲಿಂಗೇಗೌಡ ಹೇಳಿದರು. ಮಹಾರಾಷ್ಟ್ರದಿಂದ ಜನ ಬರುತ್ತಿದ್ದಂತೆ ಸೋಂಕು ಹೆಚ್ಚಾಯಿತು. ಬಳಿಕ ನನ್ನ ಪತ್ನಿಗೆ ಕೊರೊನಾ ಸೋಂಕು ಬಂದಿದೆ ಎಂದು ಹೇಳಿದ್ದರು. ಆಗ ಲ್ಯಾಬ್‌ಗೆ ಹೋಗಿ ಕೊರೊನಾ ವೈರಸ್ ಹೇಗಿದೆ ತೋರಿಸು ಅಂತಾ ಕೇಳಿದ್ದೆ. ಆಮೇಲೆ, ನನಗೆ ಕೊರೊನಾ ಬಂದಾಗಲೇ […]

ಕೊರೊನಾ ಬಂದ್ರೆ ಅರ್ಧ ಎಕರೆ ಜಮೀನು ಢಮಾರ್ -ಶಿವಲಿಂಗೇಗೌಡರ ‘ವೈರಸ್​’ ಬಾತ್​!
KUSHAL V
|

Updated on: Sep 22, 2020 | 7:48 PM

Share

ಬೆಂಗಳೂರು: ಲಾಕ್‌ಡೌನ್‌ಗೆ ಕರೆ ಕೊಟ್ಟಾಗ ಹಾಸನ ಜಿಲ್ಲೆಯಲ್ಲಿ ಒಂದೇ ಒಂದು ಕೊವಿಡ್​ ಕೇಸ್ ಇರಲಿಲ್ಲ. ಆಗ ಮುಂಬೈನಿಂದ ಬರುವವರನ್ನು ಟೆಸ್ಟ್ ಮಾಡಬೇಕೆಂದಿದ್ದೆ. ಆದರೆ, ಆಗ ಕೊರೊನಾ ಮಹತ್ವ ಕಳೆದುಕೊಂಡಿದೆ ಅಂದಿದ್ದರು ಎಂದು ವಿಧಾನಸಭೆಯಲ್ಲಿ ಅರಸೀಕೆರೆ JDS ಶಾಸಕ ಶಿವಲಿಂಗೇಗೌಡ ಹೇಳಿದರು. ಮಹಾರಾಷ್ಟ್ರದಿಂದ ಜನ ಬರುತ್ತಿದ್ದಂತೆ ಸೋಂಕು ಹೆಚ್ಚಾಯಿತು. ಬಳಿಕ ನನ್ನ ಪತ್ನಿಗೆ ಕೊರೊನಾ ಸೋಂಕು ಬಂದಿದೆ ಎಂದು ಹೇಳಿದ್ದರು. ಆಗ ಲ್ಯಾಬ್‌ಗೆ ಹೋಗಿ ಕೊರೊನಾ ವೈರಸ್ ಹೇಗಿದೆ ತೋರಿಸು ಅಂತಾ ಕೇಳಿದ್ದೆ. ಆಮೇಲೆ, ನನಗೆ ಕೊರೊನಾ ಬಂದಾಗಲೇ ಅದು ಏನೆಂದು ಗೊತ್ತಾಯಿತು. ಚಿಕ್ಕವಯಸ್ಸಿನಲ್ಲಿ ಬಿದ್ದಿದ್ದ ಹಳೇ ನೋವೆಲ್ಲಾ ನೆನಪಿಗೆ ಬಂತು ಎಂದು ತಮಗಾದ ಅನುಭವವನ್ನು ಹಂಚಿಕೊಂಡರು.

ಭಗವಂತನೇ ಮೆಡಿಸಿನ್ ಕಂಡುಹಿಡಿಯುವಂತೆ ಮಾಡ್ಬೇಕು. ಜನರ ಕಷ್ಟಕ್ಕೆ ಶಾಸಕರು ಸ್ಪಂದಿಸಬೇಕು. ಕೊರೊನಾ ಬಂದರೆ ಅರ್ಧ ಎಕರೆ ಜಮೀನು ಮಾರಬೇಕಾಗುತ್ತದೆ. ಅದರಲ್ಲೂ ಖಾಸಗಿ ಆಸ್ಪತ್ರೆಗೆ ಹೋದರೇ ಚಿಕಿತ್ಸೆಯ ಖರ್ಚಿಗೆ ಜಮೀನು ಮಾರಲೇಬೇಕು. ಕೊರೊನಾ ಬರೋದು ಒಂದೇ, ಅರ್ಧ ಎಕರೆ ಢಮಾರ್ ಆಗೋದು ಒಂದೇ ಎಂದು ಶಿವಲಿಂಗೇಗೌಡರು ಹೇಳಿದರು.

‘ಮತ್ಯಾಕೆ ನನ್ನಿಂದ 1.60 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡ್ರು’ ಪಾಪ ನರ್ಸ್‌ಗಳು, ಡಾಕ್ಟರ್‌ಗಳು ಕೆಲಸ ಮಾಡುತ್ತಿದ್ದಾರೆ. ನಾನು ಬಿಬಿಎಂಪಿ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಹಾಗಾಗಿ, ಆಸ್ಪತ್ರೆಯವರು ಅರ್ಧ ಬಿಲ್ ಮಾತ್ರ ತೆಗೆದುಕೊಂಡರು. ಆಸ್ಪತ್ರೆ ಫುಲ್ ಬಿಲ್ ನೋಡಿದ್ರೇ ನನಗೆ ಭಯ ಆಗುತ್ತಿತ್ತು ಎಂದು ವಿಧಾನಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅರ್ಧ ಬಿಲ್ ಅಂದ್ರಲ್ಲ ಏನದು ಎಂದು ಪ್ರಶ್ನಿಸಿದರು. ಬಿಬಿಎಂಪಿ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋದರೆ ಸರ್ಕಾರವೇ ಪೂರ್ತಿ ಹಣ ಪಾವತಿಸುತ್ತದೆ ಎಂದು ಸುಧಾಕರ್ ಹೇಳಿದರು.

ಸಚಿವರ ಮಾತಿಗೆ ಶಾಸಕ ಶಿವಲಿಂಗೇಗೌಡ ಮತ್ಯಾಕೆ ಆಸ್ಪತ್ರೆಯವರು ನನ್ನಿಂದ 1.60 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡ್ರು ಅಂತಾ ಪ್ರಶ್ನಿಸಿದರು. ಈ ನಡುವೆ ಡಾ.ಕೆ.ಸುಧಾಕರ್ ಮಾತಿಗೆ ವಿಪಕ್ಷಗಳ ಶಾಸಕರು ತಮ್ಮ ಆಕ್ರೋಶ ಹೊರಹಾಕಿದರು. ನಿಮ್ಮ ಆದೇಶಗಳು ಕೇವಲ ಪೇಪರ್‌ಗಷ್ಟೇ ಸೀಮಿತ. ನಾವೂ ದುಡ್ಡು ಪಾವತಿಸಿ ಚಿಕಿತ್ಸೆ ಪಡೆದಿದ್ದೇವೆಂದು ಸದಸ್ಯರು ಆಗ ತಮ್ಮ ಅಳಲನ್ನು ಸಹ ತೋಡಿಕೊಂಡರು.

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?