AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸೀಮಂತ: ಪ್ರಾಣಿ ಪ್ರೀತಿ ಮೆರೆದ ಚಿತ್ರದುರ್ಗ ಕುಟುಂಬ

ಪ್ರಾಣಿ-ಪಕ್ಷಿಗಳಿಗೆ ಮನೆ ಸದಸ್ಯ ಸ್ಥಾನ ನೀಡಿ ಪ್ರೀತಿಯಿಂದ ಸಾಕಿ ಸಲುಹಿದ ಅನೇಕ ಉದಾಹರಣೆಗಳಿವೆ. ವಿವಿಧ ಆಚರಣೆಗಳ ಮೂಲಕ ನಾಡಿನ ಗಮನ ಸೆಳೆದ ಅನೇಕ ಪ್ರಾಣಿ ಪ್ರಿಯರೂ ಇದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲೊಂದು ಕುಟುಂಬ ಒಂದು ಹೆಜ್ಜೆ ಮುಂದೆಯಿಟ್ಟಿದೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

sandhya thejappa
|

Updated on:Mar 11, 2021 | 11:45 AM

Share
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರಾಜು ಮತ್ತು ಗೀತಾ ದಂಪತಿಗೂ ಸಹ ಪ್ರಾಣಿಗಳನ್ನು ಕಂಡರೆ ಹೆತ್ತ ಮಕ್ಕಳನ್ನು ಕಂಡಷ್ಟೇ ಪ್ರೀತಿ. ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರಾಜು ಮತ್ತು ಗೀತಾ ದಂಪತಿಗೂ ಸಹ ಪ್ರಾಣಿಗಳನ್ನು ಕಂಡರೆ ಹೆತ್ತ ಮಕ್ಕಳನ್ನು ಕಂಡಷ್ಟೇ ಪ್ರೀತಿ. ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ.

1 / 7
ಮನೆಯಲ್ಲಿ ಮೂರನೇ ಮಗಳಂತೆ ಸಾಕಿದ್ದ ಪದ್ದು ಎಂಬ ಹೆಸರಿನ ಮೇಕೆ ಗರ್ಭ ಧರಿಸಿದೆ. ಮೇಕೆಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಮನೆ ಮಂದಿ ಸಂಭ್ರಮಿಸಿದ್ದಾರೆ.

ಮನೆಯಲ್ಲಿ ಮೂರನೇ ಮಗಳಂತೆ ಸಾಕಿದ್ದ ಪದ್ದು ಎಂಬ ಹೆಸರಿನ ಮೇಕೆ ಗರ್ಭ ಧರಿಸಿದೆ. ಮೇಕೆಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಮನೆ ಮಂದಿ ಸಂಭ್ರಮಿಸಿದ್ದಾರೆ.

2 / 7
ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯದ ನೆಲೆಬೀಡಾದ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಮುಖ್ಯ ಕಸುಬಾಗಿದೆ. ಇದರಿಂದ ಸಹಜವಾಗಿಯೇ ಈ ಭಾಗದ ಜನರು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯದ ನೆಲೆಬೀಡಾದ ಕೋಟೆನಾಡಿನಲ್ಲಿ ಜಾನುವಾರು ಸಾಕಣೆಯೇ ಮುಖ್ಯ ಕಸುಬಾಗಿದೆ. ಇದರಿಂದ ಸಹಜವಾಗಿಯೇ ಈ ಭಾಗದ ಜನರು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಮನೆ ಮಗಳಂತೆ ಸಾಕಿದ್ದ ಮೇಕೆಗೆ ಸಾಂಪ್ರದಾಯಿಕ ಸೀಮಂತ ಮಾಡಿ ಸಂಭ್ರಮಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

3 / 7
ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ. ಮನೆಗೆ ತುಂಬ ಬಣ್ಣಬಣ್ಣದ ಬಲೂನ್, ಹೂವು, ತಳಿರು ತೋರಣದಿಂದ ಅಲಂಕಾರ ಮಾಡಿದ್ದಾರೆ. ಮೇಕೆಗೆ ಹೊಸ ಬಟ್ಟೆ ತೊಡಿಸಿ ಹೂವಿನ ಸಿಂಗಾರ ಮಾಡಿದ್ದಾರೆ. ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.

ಮನೆ ಮಗಳ ಸೀಮಂತ ಕಾರ್ಯದಂತೆಯೇ ಇಡೀ ಮನೆ ಅಲಂಕರಿಸಿದ್ದಾರೆ. ಮನೆಗೆ ತುಂಬ ಬಣ್ಣಬಣ್ಣದ ಬಲೂನ್, ಹೂವು, ತಳಿರು ತೋರಣದಿಂದ ಅಲಂಕಾರ ಮಾಡಿದ್ದಾರೆ. ಮೇಕೆಗೆ ಹೊಸ ಬಟ್ಟೆ ತೊಡಿಸಿ ಹೂವಿನ ಸಿಂಗಾರ ಮಾಡಿದ್ದಾರೆ. ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.

4 / 7
ಕುರಿಗಾಹಿಗಳ ಮೂಲಕ ಸಿಕ್ಕಿದ್ದ ಜಿಂಕೆಯನ್ನು ಪ್ರೀತಿಯಿಂದ ಸಾಕಿದ್ದೆವು. ಕಾನೂನು ನಿರ್ಬಂಧವಿದ್ದ ಕಾರಣ ಜಿಂಕೆಯನ್ನು ಕಾಡಿಗೆ ಬಿಡಲಾಗಿತ್ತು. ಬಳಿಕ ಜಿಂಕೆ ಜಾಗಕ್ಕೆ ಈ ಮೇಕೆ ಬಂದಿದ್ದು, ನಮ್ಮ ಪಾಲಿನ ತಂಗಿಯಂತೆ ಸಾಕಿದ್ದೇವೆ. ಮೇಕೆ ಗರ್ಭ ಧರಿಸಿದ್ದು ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಕುರಿ-ಮೇಕೆ ಕೇವಲ ಮಾಂಸಕ್ಕಾಗಿ ಮಾತ್ರವಲ್ಲ ಅವುಗಳಿಗೂ ಮನೆ ಸದಸ್ಯನ ಸ್ಥಾನ ನೀಡಬೇಕೆಂಬುದು ನಮ್ಮ ಆಶಯ ಎಂದು ರಂಜನಿ ಹೇಳಿದರು.

ಕುರಿಗಾಹಿಗಳ ಮೂಲಕ ಸಿಕ್ಕಿದ್ದ ಜಿಂಕೆಯನ್ನು ಪ್ರೀತಿಯಿಂದ ಸಾಕಿದ್ದೆವು. ಕಾನೂನು ನಿರ್ಬಂಧವಿದ್ದ ಕಾರಣ ಜಿಂಕೆಯನ್ನು ಕಾಡಿಗೆ ಬಿಡಲಾಗಿತ್ತು. ಬಳಿಕ ಜಿಂಕೆ ಜಾಗಕ್ಕೆ ಈ ಮೇಕೆ ಬಂದಿದ್ದು, ನಮ್ಮ ಪಾಲಿನ ತಂಗಿಯಂತೆ ಸಾಕಿದ್ದೇವೆ. ಮೇಕೆ ಗರ್ಭ ಧರಿಸಿದ್ದು ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಕುರಿ-ಮೇಕೆ ಕೇವಲ ಮಾಂಸಕ್ಕಾಗಿ ಮಾತ್ರವಲ್ಲ ಅವುಗಳಿಗೂ ಮನೆ ಸದಸ್ಯನ ಸ್ಥಾನ ನೀಡಬೇಕೆಂಬುದು ನಮ್ಮ ಆಶಯ ಎಂದು ರಂಜನಿ ಹೇಳಿದರು.

5 / 7
ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಸಂಬಂಧಿಕರು, ಗ್ರಾಮಸ್ಥರು ಸೇರಿ ಒಟ್ಟು ಐವತ್ತು ಜನರನ್ನು ಕರೆದು ಸಿಹಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

ತೊಟ್ಟಿಲು ತೂಗಿ ಯಾವ ಸೀಮಂತಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಸಂಬಂಧಿಕರು, ಗ್ರಾಮಸ್ಥರು ಸೇರಿ ಒಟ್ಟು ಐವತ್ತು ಜನರನ್ನು ಕರೆದು ಸಿಹಿ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.

6 / 7
ಮೇಕೆಯನ್ನು ತಂದು ಮನೆ ಮಗಳಂತೆ ಸಾಕಿದ್ದರು. ಮೇಕೆ ಗರ್ಭ ಧರಿಸಿದಾಗ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದು ನಾಡಿನ ಗಮನ ಸೆಳೆದಿದ್ದಾರೆ.

ಮೇಕೆಯನ್ನು ತಂದು ಮನೆ ಮಗಳಂತೆ ಸಾಕಿದ್ದರು. ಮೇಕೆ ಗರ್ಭ ಧರಿಸಿದಾಗ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದು ನಾಡಿನ ಗಮನ ಸೆಳೆದಿದ್ದಾರೆ.

7 / 7

Published On - 10:51 am, Thu, 11 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ