AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧ ಶಂಕೆ: ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾದ ಕುಡುಕ ಗಂಡ

ಗಣಪತಿ ಕುಚನೂರು ತನ್ನ ಹೆಂಡತಿ ಉಮಾಶ್ರೀಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯನ್ನು ಹೊಂದಿದ್ದ. ಈ ಕಾರಣ ಮದ್ಯದ ಅಮಲಿನಲ್ಲಿದ್ದಾತ ನಿನ್ನೆ ರಾತ್ರಿ ವೇಳೆ ಮಲಗಿದ್ದ ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾನೆ.

ಅನೈತಿಕ ಸಂಬಂಧ ಶಂಕೆ: ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾದ ಕುಡುಕ ಗಂಡ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on:Dec 22, 2020 | 10:42 AM

Share

ಬಾಗಲಕೋಟೆ: ಅನೈತಿಕ ಸಂಬಂಧ ಶಂಕೆಯಿಂದ ಕುಡುಕ ಪತಿಯೊಬ್ಬ ಮಲಗಿದ್ದ ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಅಮಾನವೀಯ ಘಟನೆ ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ನಡೆದಿದೆ. ಕೊಲೆ ಆರೋಪ ಹೊತ್ತವ ಗಣಪತಿ ಕುಚನೂರು, ಉಮಾಶ್ರಿ (32) ಎಂಬಾಕೆ ಕೊಲೆಯಾದಾಕೆ.

ಗಣಪತಿ ಕುಚನೂರು ತನ್ನ ಹೆಂಡತಿ ಉಮಾಶ್ರೀಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯನ್ನು ಹೊಂದಿದ್ದ. ಈ ಕಾರಣ ಮದ್ಯದ ಅಮಲಿನಲ್ಲಿದ್ದಾತ ನಿನ್ನೆ ರಾತ್ರಿ ವೇಳೆ ಮಲಗಿದ್ದ ಹೆಂಡತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದಾನೆ.

ಇಂದು ಬೆಳಗ್ಗೆ ಮಹಿಳೆ ಕಾಣುತ್ತಿಲ್ಲವೆಂದು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಣಪತಿ ಹಾಗೂ ಉಮಾಶ್ರೀಗೆ ಮೂರು ಜನ ಮಕ್ಕಳಿದ್ದು, ತಂದೆಯ ಹೀನಕೃತ್ಯದಿಂದಾಗಿ ಮಕ್ಕಳು ತಾಯಿಯನ್ನು ಕಳೆದುಕೊಳ್ಳುವಂತಾಗಿದೆ.

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಸ್ನೇಹಿತನ ನೆರವಿನಿಂದ ಗಂಡನ ಕೊಲೆ

Published On - 8:50 pm, Mon, 21 December 20