ಇನ್ಸ್ಟಾಗ್ರಾಮ್ ರೀಲ್ಸ್​ನಲ್ಲಿ ವೈರಲ್ ಆಗ್ತಿರುವ ಲಡ್ಡು ಮುತ್ಯಾ ಯಾರು? ಅಸಲಿ ಪವಾಡ ಪುರುಷನ ಕಥೆ ಇಲ್ಲಿದೆ

"ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ" ಎಂಬ ಹಾಡಿನೊಂದಿಗೆ ಫ್ಯಾನ್ ನಿಲ್ಲಿಸಿ ಭಕ್ತರನ್ನು ಆಶೀರ್ವಾದ ಮಾಡುವ ವಿಕಲಚೇತನ ವ್ಯಕ್ತಿ ಫೇಮಸ್ ಆಗಿದ್ದಾರೆ. ಆದರೆ ಅವರು ನಿಜವಾದ ಪವಾಡ ಪುರುಷರಲ್ಲ. ಬಾಗಲಕೋಟೆ ತಾಲೂಕಿನ ‌ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ‌ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಸದ್ಯ ರೀಲ್ಸ್ ವೈರಲ್ ಆಗುತ್ತಿದ್ದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ಸ್ಟಾಗ್ರಾಮ್ ರೀಲ್ಸ್​ನಲ್ಲಿ ವೈರಲ್ ಆಗ್ತಿರುವ ಲಡ್ಡು ಮುತ್ಯಾ ಯಾರು? ಅಸಲಿ ಪವಾಡ ಪುರುಷನ ಕಥೆ ಇಲ್ಲಿದೆ
ಲಡ್ಡು ಮುತ್ಯಾ
Follow us
| Updated By: ಆಯೇಷಾ ಬಾನು

Updated on:Oct 03, 2024 | 9:52 AM

ಬಾಗಲಕೋಟೆ, ಅ.03: ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಹತ್ತಾರು ಲಡ್ಡು ಮುತ್ಯಾನ (Laddu Mutya) ರೀಲ್ಸ್​ಗಳು ಸಾಲು ಸಾಲಾಗಿ ಬರುತ್ತವೆ. ಇತ್ತೀಚೆಗೆ ಇನ್ಸ್ಟಾಗ್ರಾಮ್​ನಲ್ಲಿ (Instagram Reels), ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾನ ರೀಲ್ಸ್​ಗಳು ಹರಿದಾಡುತ್ತಿವೆ. ವಿಕಲಚೇತನನೋರ್ವ ಮಾಡಿದ ಈ ರೀಲ್ಸ್ ಭಾರೀ ವೈರಲ್ ಆಗಿದ್ದು ಹತ್ತಾರು ಜನ ಅದನ್ನು ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ. ಆದರೆ ಯಾರು ಈ ಲಡ್ಡು ಮುತ್ಯಾ, ಅವರು ಮಾಡಿದ ಪವಾಡವೇನು? ಲಡ್ಡು ಮುತ್ಯಾನ ಹಾಡಿಗೆ ರೀಲ್ಸ್ ಮಾಡಿದ ವಿಕಲಚೇತನ ವ್ಯಕ್ತಿ ಪವಾಡ ಪುರುಷನಾ ಎಂಬ ಬಗ್ಗೆ ಹಲವರಿಗೆ ಹಲವು ಅನುಮಾನಗಳು ಮೂಡಿವೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಬಾಗಲಕೋಟೆಯ ಪವಾಡ ಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ಅವರ ಹೆಸರಲ್ಲಿ ನಕಲಿ‌ ಲಡ್ಡು ಮುತ್ಯಾ ಎಂದು ವಿಕಲಚೇತನ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಎಂಬ ಹಾಡಿನೊಂದಿಗೆ ವಿಕಲಚೇತನ ವ್ಯಕ್ತಿ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಇಬ್ಬರು ವ್ಯಕ್ತಿಗಳು ಚೇರ್​ನಲ್ಲಿ ಕುಳಿತ ನಕಲಿ ಲಡ್ಡು‌ ಮುತ್ಯಾನ ಎತ್ತಿ ಹಿಡಿಯುತ್ತಾರೆ. ಆಗ ನಕಲಿ ಮುತ್ಯಾ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೆ ಭಸ್ಮದ ರೀತಿ ಲೇಪಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಟ್ರೆಂಡಿಂಗ್ ನಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ದೇಶದಾದ್ಯಂತ, ವಿದೇಶದಲ್ಲೂ ಯುವಕರು, ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ವಿಡಿಯೊ ಪೋಸ್ಟ್ ಮಾಡ್ತಿದ್ದಾರೆ.

ನಕಲಿ‌ ಲಡ್ಡು ಮುತ್ಯಾನ ರೀಲ್ಸ್​ಗೆ ನೈಜ ಲಡ್ಡು ಮುತ್ಯಾನ ಭಕ್ತರ ಆಕ್ರೋಶ

ಲಡ್ಡು‌ ಮುತ್ಯಾನ ಈ ಅನುಕರಣೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅಲ್ಲದೆ ಈ ವಿಡಿಯೋಗಳು ಟ್ರೋಲ್ ಕೂಡ ಆಗುತ್ತಿವೆ. ಹೀಗಾಗಿ ತಮ್ಮ ಜಿಲ್ಲೆಯ ಪವಾಡ ಪುರುಷ ಲಡ್ಡು ಮುತ್ಯಾನ ಅವಮಾನ ಸಹಿಸಲಾಗದ ಜನರು ಆಕ್ರೋಶ ಹೊರ ಹಾಕಿದ್ದಾರೆ. ನಕಲಿ‌ ಲಡ್ಡು ಮುತ್ಯಾನ ರೀಲ್ಸ್ ಬಗ್ಗೆ ನೈಜ ಲಡ್ಡು ಮುತ್ಯಾನ ಭಕ್ತರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉಡುಪಿಯ ಈ ಪಟ್ಟಣದಲ್ಲಿದೆ ಮಹಿಷ ದೇವಸ್ಥಾನ: ಇಲ್ಲಿ ನಿತ್ಯವೂ ನೆರವೇರುತ್ತೆ ಮಹಿಷಾಸುರನಿಗೆ ಪೂಜೆ!

ಯಾರು ಈ ಪವಾಡ ಪುರುಷ ಲಡ್ಡು ಮುತ್ಯಾ?

ಬಾಗಲಕೋಟೆ ತಾಲೂಕಿನ ‌ಸೀಮಿಕೇರಿ ಬಳಿ ಲಡ್ಡು ಮುತ್ಯಾನ ನೈಜ ‌ಮಠವಿದೆ. ಲಡ್ಡು ಮುತ್ಯಾ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು. ಇವರು ತಲೆಗೆ ಮೈಗೆ ಗೋಣಿ ಚೀಲದ ತಟ್ಟು ಸುತ್ತಿಕೊಳ್ತಿದ್ದರು. ತಟ್ಟಿಗೆ ಲಡ್ ಅಂತ ಕೂಡ ಇವರನ್ನು ಕರೆಯಲಾಗುತ್ತಿತ್ತು. ಈ‌ ಕಾರಣಕ್ಕೆ ಲಡ್ಡು ಮುತ್ಯಾ ಎಂಬ ಹೆಸರು ಬಂತು. ಲಡ್ಡು ಮುತ್ಯಾ ಅವರ ಮೂಲ ಹೆಸರು ಮಲ್ಲಯ್ಯ. 1970-1990ರ ದಶಕದಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಡ್ಡು ಮುತ್ಯಾ ಅವರನ್ನು ಪವಾಡ ಪುರುಷ ಎಂದು ಪೂಜಿಸುತ್ತಿದ್ದರು. ಇವರು ಮದುವೆಯಾದ ಬಳಿಕ ಪತ್ನಿ ತ್ಯಜಿಸಿ ವಿರಾಗಿಯಾಗಿದ್ದರು.

who is instagram reels laddu mutya swamiji what is his real story bagalkote kannada news

ಮೈಮೇಲೆ‌ ಬರಿ ಗೋಣಿ ಚೀಲದ ತಟ್ಟು ಸುತ್ತಿಕೊಳ್ಳುತ್ತಿದ್ದರು. ಇವರು ಆಡಿದ ಮಾತುಗಳು ನಿಜವಾಗ್ತಿದ್ದವು. ಅವರು ಯಾವ ಅಂಗಡಿಗೆ ಬಂದು ಹೋಗ್ತಾರೆ ಅವರಿಗೆ ಭಾರಿ ಲಾಭವಾಗ್ತಿತ್ತು. ಅವರ ಭಾಗ್ಯದ ಬಾಗಿಲು ತೆರೆಯುತ್ತಿತ್ತು. ಅವರು ಯಾರ ಮನೆಗೆ ಕಾಲಿಡ್ತಾರೆ ಅವರಿಗೆ ಅದೃಷ್ಟ ದೇವತೆ ಒಲಿಯುತ್ತಿದ್ದಳು. ಅವರ ಕುಟುಂಬ ಅಭಿವೃದ್ಧಿ ಆಗ್ತಿತ್ತು ಎಂಬ ನಂಬಿಕೆ ಇತ್ತು.

ನಕಲಿ‌ ಲಡ್ಡು ಮುತ್ಯಾಗೂ ಮೂಲ ಲಡ್ಡು‌ ಮುತ್ಯಾಗೂ ಸಂಬಂಧವಿಲ್ಲ

ಲಡ್ಡು‌ ಮುತ್ಯಾ ಮಠ ಇರೋದು ಸೀಮಿಕೇರಿಯಲ್ಲಿ ಮಾತ್ರ. ಬೇರೆ ಎಲ್ಲೂ ಇಲ್ಲ. ಯಾವುದೇ ಶಾಖಾ ಮಠವಿಲ್ಲ. ಇತರೆ ಮಠದಿಂದ ಯಾವ ಸ್ವಾಮೀಜಿಗಳನ್ನು ನೇಮಕ ಮಾಡಿಲ್ಲ. ಸೀಮಿಕೇರಿಯಲ್ಲಿ ಲಡ್ಡು ಮುತ್ಯಾ ಗದ್ದುಗೆ ಇದೆ. ಅಲ್ಲಿ ಅವರ ಮೂರ್ತಿ ಕೂಡ ಇದೆ. ಅಲ್ಲೇ ಬಂದು ಭಕ್ತರು ದರ್ಶನ ಪಡೆಯಬಹುದು. ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಇಲ್ಲಿ ಪ್ರಸಾದ ಹಂಚಲಾಗುತ್ತದೆ. ರೀಲ್ಸ್ ನಲ್ಲಿ ಬರುವ ನಕಲಿ ಲಡ್ಡು‌ ಮುತ್ಯಾನಿಂದ ಯಾರೂ ಮೋಸ ಹೋಗಬಾರದು. ನಕಲಿ‌ ಲಡ್ಡು ಮುತ್ಯಾ ಹಾಗೂ ಸಹಚರರು ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಅವರಿದ ಲಡ್ಡು‌ ಮುತ್ಯಾನ ಭಕ್ತರಿಗೆ ಬೇಸರವಾಗಿದೆ. ಇದು ಲಿಂಗೈಕ್ಯ ಲಡ್ಡು ಮುತ್ಯಾರಿಗೆ ಮಾಡುತ್ತಿರುವ ಅವಮಾನ ಅಂತ ಭಕ್ತರು, ಲಡ್ಡು ಮುತ್ಯಾ ಮಠದ ಆಡಳಿತ ‌ಮಂಡಳಿ ಆಕ್ರೋಶ ಹೊರ ಹಾಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:17 am, Thu, 3 October 24

‘ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ’; ಪಣ ತೊಟ್ಟ ಜಗದೀಶ್
‘ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ’; ಪಣ ತೊಟ್ಟ ಜಗದೀಶ್
Video: ಟೆಕ್ಕಿ ದಂಪತಿ ಇದ್ದ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ
Video: ಟೆಕ್ಕಿ ದಂಪತಿ ಇದ್ದ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ
ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ
ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ವರ್ತೂರು-ತನಿಷಾ ಕುಪ್ಪಂಡ ಮದುವೆ ಆಗ್ತಾರಾ? ನೇರವಾಗಿ ಉತ್ತರಿಸಿದ ಸಂತೋಷ್
ವರ್ತೂರು-ತನಿಷಾ ಕುಪ್ಪಂಡ ಮದುವೆ ಆಗ್ತಾರಾ? ನೇರವಾಗಿ ಉತ್ತರಿಸಿದ ಸಂತೋಷ್
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..