AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು

B Sriramulu: ಭಗವಂತ ನಮ್ಮ ಕಷ್ಟ ಕಾಲದಲ್ಲಿ ಓದಲು ಸಹಾಯ ಮಾಡಲಿಲ್ಲ. ದೊಡ್ಡ ಶಿಕ್ಷಣ ಪಡೆದವನು ನಾನಲ್ಲ ಎಂದು ರಾಮುಲು ಭಾವುಕರಾದರು. ಒಂದೊಂದು ಸಾರಿ ನನಗೆ ತುಂಬಾ ಮುಜುಗರ ಆಗುತ್ತದೆ. ನಮ್ಮ ಮನೆಯಲ್ಲಿ ಊಟವೂ ಇರುತ್ತಿರಲಿಲ್ಲ ಎಂದು ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಶ್ರೀರಾಮುಲು ಮತ್ತೆ ಮತ್ತೆ ಭಾವುಕರಾದರು.

ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು
ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ವೇಳೆ ಭಾವುಕರಾಗಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ಸಾರಿಗೆ ಸಚಿವ ಶ್ರೀರಾಮುಲು
TV9 Web
| Edited By: |

Updated on:Mar 26, 2022 | 8:04 PM

Share

ಬಳ್ಳಾರಿ: ಬಳ್ಳಾರಿ ನಗರದಲ್ಲಿರುವ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ(Sri Krishnadevaraya University) ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ಸಮಾರಂಭದಲ್ಲಿ ಭಾಷಣದ ವೇಳೆ ಸಾರಿಗೆ ಸಚಿವ ಬಿ. ಶ್ರೀರಾಮುಲು (Transport minister B Sriramulu) ಭಾವುಕರಾದ ಪ್ರಸಂಗ ನಡೆದಿದೆ. ಭಾವುಕರಾದ ರಾಮುಲು ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದರು. ನಾನು ತುಂಬಾ ಬಡತನ ನೋಡಿದವನು (Poor), ಕಷ್ಟಪಟ್ಟು ಬೆಳೆದವನು. ಇಂದಿನ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಮುಂದೆ ಬರಬೇಕು ಎಂದು ರಾಮುಲು ಆಶಿಸಿದರು.

ಭಗವಂತ ನಮ್ಮ ಕಷ್ಟ ಕಾಲದಲ್ಲಿ ಓದಲು ಸಹಾಯ ಮಾಡಲಿಲ್ಲ. ದೊಡ್ಡ ಶಿಕ್ಷಣ ಪಡೆದವನು ನಾನಲ್ಲ ಎಂದು ರಾಮುಲು ಭಾವುಕರಾದರು. ಒಂದೊಂದು ಸಾರಿ ನನಗೆ ತುಂಬಾ ಮುಜುಗರ ಆಗುತ್ತದೆ. ನಮ್ಮ ಮನೆಯಲ್ಲಿ ಊಟವೂ ಇರುತ್ತಿರಲಿಲ್ಲ ಎಂದು ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿ ಶ್ರೀರಾಮುಲು ಮತ್ತೆ ಮತ್ತೆ ಭಾವುಕರಾದರು.

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ: ಹಾವೇರಿ: ಕಂದಾಯ ದಾಖಲೆಗಳು ಮನೆಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಹಾವೇರಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮಾತನಾಡಿದ್ದಾರೆ. ಭ್ರಷ್ಟಾಚಾರ (Corruption ), ದಾಖಲೆಗಳ ವಿತರಣೆ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಕಂದಾಯ ಸಚಿವ ಅಶೋಕರ (R Ashoka) ನೇತೃತ್ವದಲ್ಲಿ ಕಂದಾಯ ಕ್ರಾಂತಿ ನಡೆಸಲಾಗುತ್ತಿದೆ. ದಾಖಲೆಗಳಿಗೆ ಅಧಿಕಾರಿಗಳ ಮುಂದೆ ಹೋಗಿ ಕೈಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಇತ್ತು. ಈಗ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಕೊಡುವ ಕಾರ್ಯಕ್ರಮವನ್ನು ನಮ್ಮ ಸರಕಾರ ರೂಪಿಸಿದೆ. ಸರಕಾರ ಮನೆ ಬಾಗಿಲಿಗೆ ಬರುತ್ತೆ ಎಂಬುದನ್ನು ಯಾರೂ ಯೋಚನೆ ಮಾಡಿರಲಿಲ್ಲ. ಅಂತಹ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು,ಈ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೇಂದ್ರದ ಪರಿಹಾರ ಹಣದ ಜೊತೆಗೆ ನಮ್ಮ ಬಿಜೆಪಿ ಸರಕಾರ ಕೇಂದ್ರದ ಜೊತೆ ರಾಜ್ಯದ ಹಣವನ್ನೂ ಸೇರಿಸಿ ಪರಿಹಾರ ಕೊಟ್ಟಿದ್ದೇವೆ. ಇದು ಜನಪರವಾದ, ಜೀವಂತವಾಗಿರುವ ಸರಕಾರ. ಜನರ ಅಲೆದಾಟ ತಪ್ಪಿಸಲು ಗ್ರಾಮ ಒನ್ ಕೇಂದ್ರಗಳನ್ನು ನಮ್ಮ ಸರಕಾರ ಆರಂಭಿಸಿದೆ. ನಮ್ಮ ಸರಕಾರ ಜನಪರ ಮಾತ್ರವಲ್ಲ ಜನರಿಗೋಸ್ಕರ, ಜನರಿಗೆ ಹತ್ತಿರವಿರುವ ಸರಕಾರ ಎಂಬುದನ್ನು ಮಾಡಿ ತೋರಿಸಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ಕೈಗಾರಿಕೆ, ದುಡಿಯುವ ಕೈಗಳಿಗೆ ಕೆಲಸ ಕೊಡುವ ಹೀಗೆ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವಿಶಿಷ್ಟಪೂರ್ಣವಾದ ಬಜೆಟ್ ಕೊಟ್ಟಿದ್ದೇವೆ. ಎಲ್ಲ ರಂಗದ ಜನರೂ ಬಜೆಟ್ ಅನ್ನು ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಕಂದಾಯ ಕ್ರಾಂತಿ: ಸಿಎಂ ಬೊಮ್ಮಾಯಿ ಶ್ಲಾಘನೆ ಇದನ್ನೂ ಓದಿ: ಯೂನಿವರ್ಸಿಟಿ ಕ್ಲಾಸ್​ ರೂಂನಲ್ಲೇ ನಮಾಜ್​ ಮಾಡಿದ ವಿದ್ಯಾರ್ಥಿನಿ; ತನಿಖೆ ನಡೆಸುತ್ತಿದ್ದೇವೆ ಎಂದ ಉಪ ಕುಲಪತಿ

Published On - 7:58 pm, Sat, 26 March 22