ಗುರುವಾರದಿಂದ BBMP ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 6ಕ್ಕೆ ಕೆಲಸಕ್ಕೆ ಹಾಜರ್!

ಬೆಂಗಳೂರು: ನಗರದ ಕಸದ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್ ರೂಪುಗೊಂಡಿದೆ. ಮೇಯರ್ ಹಾಗೂ ಕಮಿಷನರ್ ಸೇರಿ ಈ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ. ಬದಲಾಗಲಿದೆ ಅಧಿಕಾರಿ, ಸಿಬ್ಬಂದಿ ಕೆಲಸದ ಸಮಯ: ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕೆಲಸದ ಸಮಯವನ್ನು ಬದಲಾಯಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಆರಂಭವಾಗಲಿದೆ. ಇದು ಕೇವಲ ಬಿಬಿಎಂಪಿ ಸಿಬ್ಬಂದಿಗೆ ಮಾತ್ರವಲ್ಲ. ಅಧಿಕಾರಿಗಳಿಗೂ ಅನ್ವಯ. ಪ್ರತಿ ವಾರ್ಡ್ ನ ಹೆಲ್ತ್ ಇನ್ಸ್ಪೆಕ್ಟರ್, ಎಇ, ಎಇಇ, ಚೀಫ್ ಇಂಜಿನಿಯರ್, ಜಂಟಿ […]

ಗುರುವಾರದಿಂದ BBMP ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 6ಕ್ಕೆ ಕೆಲಸಕ್ಕೆ ಹಾಜರ್!
ಸಾಧು ಶ್ರೀನಾಥ್​

Updated on: Nov 19, 2019 | 10:50 AM

ಬೆಂಗಳೂರು: ನಗರದ ಕಸದ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್ ರೂಪುಗೊಂಡಿದೆ. ಮೇಯರ್ ಹಾಗೂ ಕಮಿಷನರ್ ಸೇರಿ ಈ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ಬದಲಾಗಲಿದೆ ಅಧಿಕಾರಿ, ಸಿಬ್ಬಂದಿ ಕೆಲಸದ ಸಮಯ:
ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕೆಲಸದ ಸಮಯವನ್ನು ಬದಲಾಯಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಆರಂಭವಾಗಲಿದೆ. ಇದು ಕೇವಲ ಬಿಬಿಎಂಪಿ ಸಿಬ್ಬಂದಿಗೆ ಮಾತ್ರವಲ್ಲ. ಅಧಿಕಾರಿಗಳಿಗೂ ಅನ್ವಯ.

ಪ್ರತಿ ವಾರ್ಡ್ ನ ಹೆಲ್ತ್ ಇನ್ಸ್ಪೆಕ್ಟರ್, ಎಇ, ಎಇಇ, ಚೀಫ್ ಇಂಜಿನಿಯರ್, ಜಂಟಿ ಆಯುಕ್ತ, ವಿಶೇಷ ಆಯುಕ್ತರು ಸೇರಿದಂತೆ ಕಮಿಷನರ್ ಕೂಡಾ ಬೆಳಗ್ಗೆ ಆರು ಗಂಟೆಗೆ ಕೆಲಸಕ್ಕೆ ಹಾಜರಿರಬೇಕು. ಪ್ರತಿ ರಸ್ತೆ, ಬೀದಿ, ಏರಿಯಾದ ಕಸ ವಿಲೇವಾರಿ ಮಾಡಿಸಬೇಕು. ಬೆಳಗ್ಗೆ ಆರು ಗಂಟೆಗೆ ಡ್ಯೂಟಿಗೆ ಹಾಜರಾಗದಿದ್ರೆ ಪರ್ಮನೆಂಟ್ ಮನೆಗೆ ಕಳಿಸಲಾಗುತ್ತೆ.

ಇಂದೋರ್ ಪದ್ಧತಿ ಅಳವಡಿಸಿದ ಬಿಬಿಎಂಪಿ
ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೂ ನಗರದ ಸ್ವಚ್ಛತೆಯ ಕೆಲಸ ಮಾಡಬೇಕು. 11 ಗಂಟೆಯಿಂದ ರೆಗ್ಯೂಲರ್ ಡ್ಯೂಟಿ. ಗುರುವಾರದಿಂದ ಬಿಬಿಎಂಪಿಯಲ್ಲಿ ಹೊಸ ಡ್ಯೂಟಿ ಟೈಮ್ ಶುರುವಾಗಲಿದ್ದು, ಇಂದೋರ್ ಪದ್ಧತಿಯನ್ನ ಅಳವಡಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

Published On - 6:47 am, Tue, 19 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us