AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಸಾಹುಕಾರ್ ಆಸ್ತಿಯಲ್ಲಿ 32ಕೋಟಿ 27ಲಕ್ಷ ಇಳಿಕೆ

ಬೆಳಗಾವಿ: ಡಿಸೆಂಬರ್ 5ರಂದು ಗೋಕಾಕ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ದಂಪತಿ ಒಟ್ಟು ಆಸ್ತಿ: ಕಳೆದ ಚುನಾವಣೆಯಲ್ಲಿ ₹122.77 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರು. ಕಳೆದ ಬಾರಿಗಿಂತ ಈ ಬಾರಿ 32.27 ಕೋಟಿ ರೂ.ನಷ್ಟು ಇಳಿಕೆಯಾಗಿದ್ದು, ರಮೇಶ್ ಒಟ್ಟು ಆಸ್ತಿ ಮೌಲ್ಯ 90 ಕೋಟಿ 50 ಲಕ್ಷ ರೂ. ರಮೇಶ್ ಜಾರಕಿಹೊಳಿ ಸ್ಥಿರಾಸ್ತಿ […]

ಬೆಳಗಾವಿ ಸಾಹುಕಾರ್ ಆಸ್ತಿಯಲ್ಲಿ 32ಕೋಟಿ 27ಲಕ್ಷ ಇಳಿಕೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 19, 2019 | 12:59 PM

Share

ಬೆಳಗಾವಿ: ಡಿಸೆಂಬರ್ 5ರಂದು ಗೋಕಾಕ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ದಂಪತಿ ಒಟ್ಟು ಆಸ್ತಿ: ಕಳೆದ ಚುನಾವಣೆಯಲ್ಲಿ ₹122.77 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರು. ಕಳೆದ ಬಾರಿಗಿಂತ ಈ ಬಾರಿ 32.27 ಕೋಟಿ ರೂ.ನಷ್ಟು ಇಳಿಕೆಯಾಗಿದ್ದು, ರಮೇಶ್ ಒಟ್ಟು ಆಸ್ತಿ ಮೌಲ್ಯ 90 ಕೋಟಿ 50 ಲಕ್ಷ ರೂ. ರಮೇಶ್ ಜಾರಕಿಹೊಳಿ ಸ್ಥಿರಾಸ್ತಿ 11 ಕೋಟಿ 29 ಲಕ್ಷ ರೂ. ರಮೇಶ್ ಹೆಸರಲ್ಲಿ ₹21 ಕೋಟಿ 14 ಲಕ್ಷ ಮೌಲ್ಯದ ಚರಾಸ್ತಿ. ರಮೇಶ್ ಪತ್ನಿ ಜಯಶ್ರೀ ಹೆಸರಲ್ಲಿ ₹9.20 ಕೋಟಿ ಸ್ಥಿರಾಸ್ತಿ, ಜಯಶ್ರೀ ಹೆಸರಲ್ಲಿ 29 ಕೋಟಿ 26 ಲಕ್ಷ ರೂಪಾಯಿ ಚರಾಸ್ತಿ ಘೋಷಿಸಿದ್ದಾರೆ.

ರಮೇಶ್ ಜಾರಕಿಹೊಳಿ ಮಕ್ಕಳ ಆಸ್ತಿ ವಿವರ: ಪುತ್ರ ಅಮರನಾಥ್ ಹೆಸರಲ್ಲಿ 9.61 ಕೋಟಿ ರೂ. ಸ್ಥಿರಾಸ್ತಿ ಹಾಗೂ 10 ಕೋಟಿ ರೂಪಾಯಿ ಚರಾಸ್ತಿ ಇದೆ. ಈ ಬಾರಿ ಮತ್ತೊಬ್ಬ ಪುತ್ರ ಸಂತೋಷ್ ಆಸ್ತಿ ಬಗ್ಗೆ ಘೋಷಣೆ ಮಾಡಿಲ್ಲ ಆದರೆ ಕಳೆದ ಬಾರಿ ಸಂತೋಷ್ ಆಸ್ತಿ ಬಗ್ಗೆ ಘೋಷಣೆ ಮಾಡಿದ್ದರು ಆಗ 15 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದರು

ಬ್ಯಾಂಕ್‌ ಸಾಲ: ರಮೇಶ್ ಜಾರಕಿಹೊಳಿ 5 ಕೋಟಿ 22 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಜಯಶ್ರೀ ಹೆಸರಿನಲ್ಲಿ 2.56 ಕೋಟಿ ಆದಾಯ ತೆರಿಗೆ ಬಾಕಿ ಇದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರಮೇಶ್ ಜಾರಕಿಹಾಳಿ, ಬೀರೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ₹7 ಕೋಟಿ 22 ಲಕ್ಷ ಸಾಲ, ಅರಿಹಂತ ಕ್ರೆಡಿಟ್ ಸೊಸೈಟಿಯಲ್ಲಿ 49.87 ಲಕ್ಷ ರೂ. ಸಾಲ, ವಿಶ್ವಕರ್ಮ ಸಹಕಾರಿ ಕ್ರೆಡಿಟ್ ಸೊಸೈಟಿಯಲ್ಲಿ ₹27 ಲಕ್ಷ ಸಾಲ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ 57,240 ರೂಪಾಯಿ, ಜಯಶ್ರೀ ₹41,441, ಪುತ್ರ 17,540 ರೂ ಹೊಂದಿದ್ದಾರೆ.

Published On - 8:05 am, Tue, 19 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು