AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ‘ಶ್ವೇತ ಸುಂದರಿ’ ಕಲರವ

ಕೊಡಗು: ದಕ್ಷಿಣದ ಕಾಶ್ಮೀರ ಕೊಡಗು ಅಂದ್ರೆ, ನಿಸರ್ಗ ಸಿರಿಯ ಆಗರ.. ಯಾರ ಮುಡಿಗೂ ಏರದ.. ದೇವರ ಅಡಿಗೂ ಸೇರದ… ತನ್ನಷ್ಟಕ್ಕೆ ತಾನು ಅರಳಿ ಮರೆಯಾಗೋ ಶ್ವೇತ ವರ್ಣದ ಪುಷ್ಪಗಳ ರಾಶಿ, ತಾನಿರುವಷ್ಟು ದಿನ ತಾನಾರಿಗೆ ಕಡಿಮೆ ಎನ್ನುವಂತೆ ಅರಳಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.. ಹಸಿರು ಹೊದ್ದ ಭೂರಮೆಯ ಅಂದ… ಐಸಿರಿಯ ಇಮ್ಮಡಿಗೊಳಿಸೋ ಕುಸುಮರಾಶಿ… ಎಲ್ಲೆಲ್ಲೂ ಹರಡಿಕೊಂಡು ಕಂಗೊಳಿಸೋ ಚಳಿಗಾಲದ ಪುಷ್ಪರಾಣಿ… ಹಾಲ್ಚೆಲ್ಲಿದಂತೆ ಹರಡಿರೋ ದಕ್ಷಿಣದ ಕಾಶ್ಮೀರಕ್ಕೆ ಮೆರುಗು ತಂದ ಕಾಡು ಮಲ್ಲಿಗೆ…. ಹೌದು, ಭೂ ಲೋಕದ ಸ್ವರ್ಗ ಹೇಳಿ […]

ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ‘ಶ್ವೇತ ಸುಂದರಿ’ ಕಲರವ
ಸಾಧು ಶ್ರೀನಾಥ್​
|

Updated on:Dec 22, 2019 | 1:59 PM

Share

ಕೊಡಗು: ದಕ್ಷಿಣದ ಕಾಶ್ಮೀರ ಕೊಡಗು ಅಂದ್ರೆ, ನಿಸರ್ಗ ಸಿರಿಯ ಆಗರ.. ಯಾರ ಮುಡಿಗೂ ಏರದ.. ದೇವರ ಅಡಿಗೂ ಸೇರದ… ತನ್ನಷ್ಟಕ್ಕೆ ತಾನು ಅರಳಿ ಮರೆಯಾಗೋ ಶ್ವೇತ ವರ್ಣದ ಪುಷ್ಪಗಳ ರಾಶಿ, ತಾನಿರುವಷ್ಟು ದಿನ ತಾನಾರಿಗೆ ಕಡಿಮೆ ಎನ್ನುವಂತೆ ಅರಳಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ..

ಹಸಿರು ಹೊದ್ದ ಭೂರಮೆಯ ಅಂದ… ಐಸಿರಿಯ ಇಮ್ಮಡಿಗೊಳಿಸೋ ಕುಸುಮರಾಶಿ… ಎಲ್ಲೆಲ್ಲೂ ಹರಡಿಕೊಂಡು ಕಂಗೊಳಿಸೋ ಚಳಿಗಾಲದ ಪುಷ್ಪರಾಣಿ… ಹಾಲ್ಚೆಲ್ಲಿದಂತೆ ಹರಡಿರೋ ದಕ್ಷಿಣದ ಕಾಶ್ಮೀರಕ್ಕೆ ಮೆರುಗು ತಂದ ಕಾಡು ಮಲ್ಲಿಗೆ….

ಹೌದು, ಭೂ ಲೋಕದ ಸ್ವರ್ಗ ಹೇಳಿ ಕೇಳಿ ನಿಸರ್ಗ ಸಿರಿಯ ತವರು. ಪಶ್ಚಿಮಘಟ್ಟದ ತಪ್ಪಲಿನ ಪುಟ್ಟ ಜಿಲ್ಲೆಯ ಪ್ರಕೃತಿ ಪ್ರಿಯರ ಹಾಟ್ ಸ್ಪಾಟ್. ಚಳಿಗಾಲಕ್ಕೆ ಅತಿಥಿಗಳಾದ ಶ್ವೇತ ವರ್ಣದ ಹೂಗಳ ಸೊಬಗು ಕಣ್ಮನ ಸೆಳೆಯುತ್ತಿವೆ. ಬೆಟ್ಟ ಗುಡ್ಡಗಳಲ್ಲಿ ಅರಳಿ ನಿಂತಿರೋ ಕಾಡು ಮಲ್ಲಿಗೆ ಹೂಗಳು ಕಂಪು ಬೀರ್ತಿವೆ. ಥೇಟ್ ಮಲ್ಲಿಗೆಯಂತೆ ಅರಳಿನಿಂತಿರೋ ಈ ಹೂಗಳು ತಮ್ಮ ನೈಜ ಸೌಂದರ್ಯದಿಂದ ಎಲ್ಲರನ್ನು ಸೆಳೀತಿವೆ.

ಮಡಿಕೇರಿ ಕುಶಾಲನಗರ, ಮಡಿಕೇರಿ, ವಿರಾಜಪೇಟೆ ಸಿದ್ದಾಪುರ ರಸ್ತೆಗಳಲ್ಲಿ ಎತೇಚ್ಚವಾಗಿ ಅರಳಿರುವ ಹೂಗಳನ್ನು ನೋಡೋದೆ ಅಂದ. ಶ್ವೇತ ಸುಂದರಿಯರನ್ನು ಕಂಡ ಪುಷ್ಪಪ್ರಿಯರು ತಮ್ಮ ಮೊಬೈಲ್​ಗಳಲ್ಲಿ ಸೌಂದರ್ಯರಾಣಿಯರನ್ನು ಸೆರೆಹಿಡಿಯುತ್ತಿದ್ದಾರೆ. ಕಾಡುಮಲ್ಲಿಗೆ ಎಂದು ಕರೆಯುವ ಈ ಹೂಗಳನ್ನು ಕ್ರಿಸ್ ಮಸ್ ಫ್ಲವರ್ ಅಂತಲೂ ಕರೆಯೋದು ವಿಶೇಷ.

ಒಟ್ನಲ್ಲಿ ವರ್ಷಕ್ಕೊಮ್ಮೆ ಚಳಿಗಾಲಕ್ಕೆ ಹಾಜರಾಗೋ ಈ ಪುಷ್ಪ ರಾಣಿಯರು ಮಂಜಿನ ನಗರಿ ಅಂದವನ್ನ ಇಮ್ಮಡಿಗೊಳಿಸುತ್ತವೆ. ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವಂತಾ ಸೌಂದರ್ಯದೊಂದಿಗೆ ನಳನಳಿಸುತ್ತಿರೋ ಹೂಗಳು ಚೆಲುವೆಲ್ಲಾ ತನ್ನದೇ ಅನ್ನುತ್ತಾ ಮಡಿಕೇರಿಗೆ ಬರೋ ಪ್ರವಾಸಿಗರಿಗೆ ಮುದನೀಡ್ತಿವೆ.

Published On - 1:57 pm, Sun, 22 December 19

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ