ಬೆಳಗಾವಿ ರೈತರ ಪ್ರತಿಭಟನಾ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ

ಬೆಳಗಾವಿ: ಕೃಷ್ಣಾ ನದಿಯ ಪ್ರವಾಹಕ್ಕೆ ಸಿಕ್ಕಿ ಜಿಲ್ಲೆಯ ರೈತರ ಜೀವನ ಪತರಗುಟ್ಟಿದೆ. ಪರಿಹಾರವನ್ನೇ ಕಾಣದೆ ಜನ ಜೀವನ ತತ್ತರಿಸಿದೆ. ಈ ಮಧ್ಯೆ, ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಲುವಾಗಿ ರೈತನೊಬ್ಬ ತನ್ನ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಜಮಖಂಡಿಯಿಂದ ನಗರಕ್ಕೆ ನಡೆದುಬಂದಿದ್ದಾನೆ. ಪ್ರತಿಭಟನೆಯ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ ಜಮಖಂಡಿ‌ ಮೂಲದ ರೈತ ಬಾಹುಬಲಿ ನೆರೆ ಪರಿಹಾರ ಕೋರಿ ಹೀಗೆ ವಿಭಿನ್ನ ನಡಿಗೆ ಹಾಕಿದ್ದಾನೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಶಾಸಕ ಆನಂದ […]

ಬೆಳಗಾವಿ ರೈತರ ಪ್ರತಿಭಟನಾ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ
ಸಾಧು ಶ್ರೀನಾಥ್​

Updated on: Sep 24, 2019 | 11:24 AM

ಬೆಳಗಾವಿ: ಕೃಷ್ಣಾ ನದಿಯ ಪ್ರವಾಹಕ್ಕೆ ಸಿಕ್ಕಿ ಜಿಲ್ಲೆಯ ರೈತರ ಜೀವನ ಪತರಗುಟ್ಟಿದೆ. ಪರಿಹಾರವನ್ನೇ ಕಾಣದೆ ಜನ ಜೀವನ ತತ್ತರಿಸಿದೆ. ಈ ಮಧ್ಯೆ, ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಲುವಾಗಿ ರೈತನೊಬ್ಬ ತನ್ನ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಜಮಖಂಡಿಯಿಂದ ನಗರಕ್ಕೆ ನಡೆದುಬಂದಿದ್ದಾನೆ.

ಪ್ರತಿಭಟನೆಯ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ
ಜಮಖಂಡಿ‌ ಮೂಲದ ರೈತ ಬಾಹುಬಲಿ ನೆರೆ ಪರಿಹಾರ ಕೋರಿ ಹೀಗೆ ವಿಭಿನ್ನ ನಡಿಗೆ ಹಾಕಿದ್ದಾನೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಆಗಮಿಸಿದ ರೈತ ಬಾಹುಬಲ  ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದಾನೆ.

ನೆರೆ ಪರಿಹಾರಕ್ಕಾಗಿ ಆಗ್ರಹಿಸಿ, ಬಾಗಲಕೋಟೆ ಜಿಲ್ಲೆಯಿಂದ ಬೆಳಗಾವಿಗೆ ಆಗಮಿಸಿ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ನಡೆಸಿದೆ. ಬಾಗಲಕೋಟೆ ಜಿಲ್ಲೆಯೂ ಪ್ರವಾಹಕ್ಕೆ ತುತ್ತಾಗಿದ್ದು, ಶಾಸಕ‌ ಆನಂದ ನ್ಯಾಮಗೌಡರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ರ್ಯಾಲಿ, ಸೆ.21ರಂದು ಜಮಖಂಡಿಯಿಂದ ಹೊರಟಿತ್ತು. ಕಾಂಗ್ರೆಸ್ ಬಾವುಟ ಹಾಕಿಕೊಂಡು ಹಲಗಿ ಮತ್ತು ಸನಾಯಿ ಬಾರಿಸುತ್ತಾ ಸ್ಥಳೀಯ ಕೈ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಕಾಂಗ್ರೆಸ್ ರ್ಯಾಲಿಗೆ ಚುನಾವಣಾ ನೀತಿಸಂಹಿತೆ ತೊಡರುಗಾಲು
ನೆರೆ ಪರಿಹಾರ ತರುವಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯತೆಗೆ ರ್ಯಾಲಿಯಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷದ ಈ ಪ್ರತಿಭಟನಾ ರ್ಯಾಲಿಗೆ ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿದೆ. ಡಿಸಿ ಕಚೇರಿ ಮುಂದೆ ರ್ಯಾಲಿಗೆ ಅನುಮತಿ ಸಿಗದ ಹಿನ್ನೆಲೆ, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ರ್ಯಾಲಿ ಮುಕ್ತಾಯಗೊಳ್ಳುವ ಅಂದಾಜಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us