AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಟೊಮೆಟೊ ಬೆಳೆದು ಖುಲಾಯಿಸಿದ ಲಕ್; ಮೂರೇ ತಿಂಗಳಲ್ಲಿ 80 ಲಕ್ಷ ರೂ. ಆದಾಯ ಗಳಿಸಿದ ರೈತ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದ ರೈತ ಅಪ್ಪಾಸಾಹೇಬ್ ಎಂಬುವವರು ನಿತ್ಯ ಟೊಮೆಟೊ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಹೌದು, ನಿರಂತರ 12 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದ ರೈತನಿಗೆ ಈ ವರ್ಷ ಲಕ್ ಖುಲಾಯಿಸಿದೆ.

ಬೆಳಗಾವಿ: ಟೊಮೆಟೊ ಬೆಳೆದು ಖುಲಾಯಿಸಿದ ಲಕ್; ಮೂರೇ ತಿಂಗಳಲ್ಲಿ 80 ಲಕ್ಷ ರೂ. ಆದಾಯ ಗಳಿಸಿದ ರೈತ
ರೈತ ಅಪ್ಪಾಸಾಹೇಬ್
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Aug 19, 2023 | 4:00 PM

Share

ಬೆಳಗಾವಿ, ಆ.19: ದೇಶದಲ್ಲಿ ಬೆಲೆ ಏರಿಕೆಯ ದೊಡ್ಡ ಸಂಚಲನವನ್ನು ಮೂಡಿಸಿದ್ದ ಟೊಮೆಟೊ(Tomato) ದರ, ಇದೀಗ ಕುಸಿಯುತ್ತಿದೆ. ಹೌದು, 15 ಕೆಜಿ ಟೊಮೆಟೊ ಬಾಕ್ಸ್​ಗೆ 500 ರಿಂದ 800 ರೂ. ಗೆ ಹರಾಜು ಆಗುತ್ತಿದೆ. ಈ ಹಿಂದೆ ಬರೊಬ್ಬರಿ 15 ಕೆಜಿ ಬಾಕ್ಸ್ ಟೊಮ್ಯಾಟೊ ದರ 2,500 ರೂಪಾಯಿಯ ಗಡಿ ದಾಟಿತ್ತು. ಇದೀಗ ಕೊಂಚ ಮಟ್ಟಿಗೆ ದರ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಕುಸಿತದ ಮಧ್ಯೆಯೂ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದ ರೈತ ಅಪ್ಪಾಸಾಹೇಬ್ ಎಂಬುವವರು ನಿತ್ಯ ಟೊಮೆಟೊ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ನಿತ್ಯ ಎರಡೂವರೆ ಲಕ್ಷ ಆದಾಯ ಗಳಿಸುತ್ತಿರುವ ರೈತ

ಹೌದು, ನಿರಂತರ 12 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದ ರೈತನಿಗೆ ಈ ವರ್ಷ ಲಕ್ ಖುಲಾಯಿಸಿದೆ. ಐದು ಎಕರೆ ಹೊಲದಲ್ಲಿ ಮೂರು ಭಾಗ ಮಾಡಿ ರೈತ ಅಪ್ಪಾಸಾಹೇಬ್ 40 ಸಾವಿರ ಟೊಮೆಟೊ ಸಸಿ ನಾಟಿ ಮಾಡಿದ್ದರು. ನಿತ್ಯ ಎರಡೂವರೆ ಟನ್ ಟೊಮೆಟೊ ಕಟಾವು ಮಾಡುವ ರೈತ, ಸದ್ಯ ಮಾರುಕಟ್ಟೆಯಲ್ಲಿ 25 ಕೆಜಿ ಟೊಮೆಟೊ ಬಾಕ್ಸ್​ಗೆ ಸಾವಿರ ರೂಪಾಯಿ ಬೆಲೆಯಿದೆ. ರೈತ ಅಪ್ಪಾಸಾಹೇಬ್ ನಿತ್ಯ 250 ಟ್ರೇ ಟೊಮೆಟೊವನ್ನು ಬೆಳಗಾವಿಯ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ.

ಇದನ್ನೂ ಓದಿ:ರೈತನನ್ನು ಮದ್ವೆಯಾಗಲ್ಲ ಎಂದ ಯುವತಿ: ಟೊಮೆಟೊ ಮಾರಿದ ಹಣದಲ್ಲಿ ಕಾರು ಖರೀದಿಸಿ ಕನ್ಯೆ ನೋಡಲು ಹೋಗ್ತೇನೆ ಎಂದ ಯುವ ಕೃಷಿಕ

ಮೂರೇ ತಿಂಗಳಲ್ಲಿ 80 ಲಕ್ಷ ರೂಪಾಯಿ ಆದಾಯ ಗಳಿಸಿದ ರೈತ ಅಪ್ಪಾಸಾಹೇಬ್

ಮೇ ತಿಂಗಳಲ್ಲಿ ಟೊಮೆಟೊ ಸಸಿ ನಾಟಿ ಮಾಡಿದ್ದ ರೈತ ಅಪ್ಪಾಸಾಹೇಬ್ ಅವರು ಮೂರೇ ತಿಂಗಳಲ್ಲಿ 80 ಲಕ್ಷ ಆದಾಯ ಗಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಇದೇ ದರ ಇದ್ದರೆ, ಇನ್ನೂ 20 ಲಕ್ಷ ರೂಪಾಯಿ ಆದಾಯ ಗಳಿಕೆ ಮಾಡುವ ನಿರೀಕ್ಷೆಯಿದೆಯಂತೆ.

ಊರಿನಲ್ಲಿ ಮನೆ ಕಟ್ಟೋ ಕನಸು ಸಾಕಾರ; ಅನ್ನದಾತ ಫುಲ್ ಖುಷ್!

ರೈತನೊಬ್ಬ ವರ್ಷ ಪೂರ್ತಿ ಎನ್ನದೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಹೊಲದಲ್ಲಿ ಕಷ್ಟಪಟ್ಟು ದುಡಿದರೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗುತ್ತಿದ್ದರು. ಕೊನೆಯದಾಗಿ ಬೆಳೆ ಬೆಳೆಯಲು ಖರ್ಚು ಮಾಡಿದ ಹಣವೂ ವಾಪಾಸ್ಸ್​ ಬರುತ್ತಿರಲಿಲ್ಲ. ಇದೀಗ ಟೊಮೆಟೊಗೆ ಸಿಕ್ಕ ಬೆಲೆಯಿಂದ ಊರಿನಲ್ಲಿಯೇ ಮನೆ ಕಟ್ಟಬೇಕೆಂದುಕೊಂಡಿದ್ದ ರೈತನ ಕನಸು ಸಾಕಾರಗೊಂಡಿದೆ. ಹೌದು, ರುಪಿನಾಳ ಗ್ರಾಮದ ಮುಖ್ಯರಸ್ತೆಯಲ್ಲಿಯೇ ಎರಡಂತಸ್ತಿನ ಮನೆ ಕಟ್ಟಿಸುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ