AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಫೈಟರ್ ಟಗರಿನ ಗೆಲುವು ಸಹಿಸಲಾಗದೆ ಕದ್ದು ಮಟನ್ ಮಾರ್ಕೆಟ್​ಗೆ ತಂದ ಖದೀಮರು, ಮುಂದೇನಾಯ್ತು…?

ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ರಾಕಿ ಎಂಬ ಟಗರನ್ನು ಖದೀಮರು ಶನಿವಾರ ಕಳ್ಳತನ ಮಾಡಿದ್ದರು. ಟಗರು ಕಳ್ಳತನವಾಗುತ್ತಿದ್ದಂತೆ ಟಗರು ಮಾಲೀಕ ಗೋಕಾಕ್‌ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ಟಗರು ಮಟನ್ ಮಾರುಕಟ್ಟೆಯಲ್ಲಿ ಸಿಕ್ಕಿದೆ. ಖದೀಮರು ಮಟನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಾಗ ಪತ್ತೆಯಾಗಿದೆ.

ಬೆಳಗಾವಿ: ಫೈಟರ್ ಟಗರಿನ ಗೆಲುವು ಸಹಿಸಲಾಗದೆ ಕದ್ದು ಮಟನ್ ಮಾರ್ಕೆಟ್​ಗೆ ತಂದ ಖದೀಮರು, ಮುಂದೇನಾಯ್ತು...?
ಫೈಟರ್‌ ಟಗರು ರಾಕಿ
Follow us
Sahadev Mane
| Updated By: ಆಯೇಷಾ ಬಾನು

Updated on:Aug 29, 2023 | 3:54 PM

ಬೆಳಗಾವಿ, ಆ.29: ಟಗರು ಕಾಳಗದಲ್ಲಿ ಜನರ ಮನ ಗೆದ್ದು ಮಿಂಚುತ್ತಿದ್ದ ರಾಕಿ ಎಂಬ ಹೆಸರಿನ ಫೈಟರ್‌ ಟಗರನ್ನು (Rocky Tagaru) ಖದೀಮರು ಕಳ್ಳತನ ಮಾಡಿ ಮಾರಾಟ ಮಾಡಲೆಂದು ಮಟನ್ ಮಾರುಕಟ್ಟೆಗೆ ತಂದಿದ್ದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ನಡೆದಿದೆ. ಸದ್ಯ ಪರಿಚಯಸ್ಥರು ಟಗರು ಯಾರದ್ದು ಎಂದು ವಿಚಾರಿಸಿದಾಗ ಖದೀಮರು ಗಾಬರಿಗೊಂಡು ಟಗರನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ರಾಕಿ ಈಗ ಸೇಫಾಗಿ ಮನೆ ಸೇರಿದ್ದಾನೆ. ಮನೆಯಲ್ಲಿ ಕಟ್ಟಿ ಹಾಕಿದ್ದ ಟಗರನ್ನು ಖದೀಮರು ಕದ್ದು ಎರಡೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ರಾಕಿ ಎಂಬ ಟಗರನ್ನು ಖದೀಮರು ಶನಿವಾರ ಕಳ್ಳತನ ಮಾಡಿದ್ದರು. ಟಗರು ಕಳ್ಳತನವಾಗುತ್ತಿದ್ದಂತೆ ಟಗರು ಮಾಲೀಕ ಗೋಕಾಕ್‌ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಸದ್ಯ ತಡರಾತ್ರಿ ಗೋಕಾಕ್‌ ಮಟನ್ ಮಾರುಕಟ್ಟೆಯಲ್ಲಿ ಟಗರು ಪತ್ತೆಯಾಗಿದೆ. ರಾಕಿ ಈಗ ಮನೆಗೆ ವಾಪಸ್ ಆಗಿದ್ದು ಟಗರು ಮಾಲೀಕ ನಿಟ್ಟುಸಿರು ಬಿಟ್ಟಿದ್ದಾನೆ.

ಇದನ್ನೂ ಓದಿ: ಬಕ್ರೀದ್​ ಟೈಮಲ್ಲಿ 6 ಲಕ್ಷ ರೂ ವರೆಗೆ ರೇಟ್​​ ಏರಿಸಿಕೊಂಡಿದ್ದ ಧಾರವಾಡದ ಜಂಗ್ಲಿ ಟಗರು ಹೃದಯಾಘಾತಕ್ಕೆ ಬಲಿ

ಕಳೆದ 15 ದಿನದ ಹಿಂದೆ ರಾಕಿಗೆ 2.50 ಲಕ್ಷ ರೂ. ನೀಡುತ್ತೇವೆ, ನಮಗೆ ಕೊಡಿ ಎಂದು ಟಗರು ಪ್ರಿಯರೊಬ್ಬರು ಬೇಡಿಕೆ ಇಟ್ಟಿದ್ದರು. ಅಲ್ಲದೆ ಯಾವುದೇ ಸ್ಥಳದಲ್ಲಿ ಟಗರು ಕಾಳಗ ನಡೆದರೂ ರಾಕಿ ಗೆಲುವನ್ನು ತನ್ನದಾಗಿಸಿಕೊಳ್ಳುತ್ತಿತ್ತು. ಹೀಗಾಗಿ ರಾಕಿಯನ್ನು ಮಾರಲು ಟಗರು ಮಾಲೀಕನಿಗೂ ಇಷ್ಟ ಇರಲಿಲ್ಲ. ರಾಕಿಯನ್ನು ಮಗುವಂತೆ ಸಾಕುತ್ತಿದ್ದರು. ಹೀಗಾಗಿ ಕಾಳಗದಲ್ಲಿ ಟಗರು ಗೆಲ್ಲುವುದನ್ನು ನೋಡಿ ಸಹಿಸಲಾಗದೆ ಖದೀಮರು ಕಳ್ಳತನ ಮಾಡಿದ್ದರು. ಮನೆ ಬಳಿ ಕಟ್ಟಿ ಹಾಕಿದ್ದ ವೇಲೆ ಕಳ್ಳತನ ಮಾಡಿದ್ದರು. ಬಳಿಕ ಎರಡೂವರೆ ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದರು. ಕೊನೆಗೆ ಟಗರು ಮಾರಿ ಬಂದ ಹಣ ತೆಗೆದುಕೊಳ್ಳಲು ಚಿಂತಿಸಿ ಮಟನ್ ಮಾರುಕಟ್ಟೆಗೆ ಬಂದಿದ್ದರು.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:54 pm, Tue, 29 August 23

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು