AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​

Sudha Murthy: ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ರಿವಿಲ್​ ಮಾಡಿದ್ದಾರೆ. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​
ಸುಧಾ ಮೂರ್ತಿ
TV9 Web
| Edited By: |

Updated on: Oct 10, 2023 | 8:44 AM

Share

ಬೆಳಗಾವಿ ಅ.10: ಇನ್ಫೋಸಿಸ್ (Infosys) ಫೌಂಡೇಶನ್‌ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ (Sudha Murthy) ಅವರು ಬೆಳಗಾವಿಯ (Belagavi) ಸಪ್ನ ಬುಕ್ ಹೌಸ್‌ನಲ್ಲಿ ಭಾನುವಾರ ಬೆಳಗಾವಿ ಬುಕ್ ಕ್ಲಬ್ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ತಿಳಿಸಿದರು. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.

“ತಮ್ಮ ಜೀವನದಲ್ಲಿ ಆದ ಧನಾತ್ಮಕ ಅನುಭವಗಳು ಮತ್ತು ತಮ್ಮ ಕೆಲಸಗಳಿಗೆ ಧನಾತ್ಮಕ ಪ್ರತಿಕ್ರಿಯೆ ಬರಲು ಪ್ರಾರಂಭವಾದವು. ಇದರಿಂದ ಪ್ರೇರಣೆಗೊಂಡು ನಿಯಮಿತವಾಗಿ ಬರೆಯಲು ಆರಂಭಿಸಿದೆ” ಎಂದು ಲೇಖಕಿ ಸುಧಾ ಮೂರ್ತಿಯವರು ತಿಳಿಸಿದರು.

ಬೆಳಗಾವಿಯ ಬುಕ್ ಕ್ಲಬ್​​ ಜನರಲ್ಲಿ ಸಾಹಿತ್ಯದ ಪ್ರೀತಿಯನ್ನು ಬೆಳೆಸಲು ಮತ್ತು ಪುಸ್ತಕ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಬುಕ್ ಕ್ಲಬ್​​ ಪ್ರತಿ ಭಾನುವಾರ ಸ್ನೇಹಶೀಲ ಕೆಫೆಗಳಿಂದ ಹಿಡಿದು ಸಮುದಾಯ ಭವನಗಳವರೆಗೆ ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಸಾಹಿತ್ಯದ ಅರಿವು ಮೂಡಿಸುತ್ತದೆ.

ಕ್ಲಬ್‌ಗೆ ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ವೆಬ್‌ಸೈಟ್, www.bookreads.in/club ಅಥವಾ www.instagram.com/belagavibookclub Instagram ಹ್ಯಾಂಡಲ್​​ಗೆ ಭೇಟಿ ನೀಡುವ ಮೂಲಕ ಯಾರಾದರೂ ಸೇರಿಕೊಳ್ಳಬಹುದು ಎಂದು ಕ್ಲಬ್ ಅನ್ನು ಬೆಂಬಲಿಸುವ ರೋಸ್ಟ್ರಮ್ ಡೈರೀಸ್ ಸಂಸ್ಥಾಪಕ ಅಭಿಷೇಕ್ ಬೆಂಡಿಗೇರಿ ಹೇಳಿದರು.

ಬೆಳಗಾವಿ ಬುಕ್ ಕ್ಲಬ್, ರೋಸ್ಟ್ರಮ್ ಡೈರೀಸ್‌ನ ಸಹಯೋಗದೊಂದಿಗೆ ಲೇಖಕರನ್ನು ಮುಂಚೂಣಿಗೆ ತರಲು ಬದ್ಧವಾಗಿದೆ. ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕರಾದ ರಘು ಎಂ.ವಿ ಮತ್ತು ಮೇಘನಾ ಎಂ.ಆರ್ ಹಾಗೂ ಕ್ಲಬ್​​ನ ಇತರ ಸದಸ್ಯರು ಸಂವಾದದಲ್ಲಿ ಉಪಸ್ಥಿತರಿದ್ದರು. ರವಿವಾರ ಸಪ್ನಾ ಬುಕ್ ಹೌಸ್‌ನಲ್ಲಿ ನಡೆದ ಕೊನೆಯ ಸಭೆಯು ಅದ್ಭುತ ಯಶಸ್ಸನ್ನು ಕಂಡಿತು. ಬುಕ್ ಕ್ಲಬ್ ತಂಡಕ್ಕೆ ಸಾಹಿತ್ಯ ಆಸಕ್ತರು ಧನ್ಯವಾದ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ