AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​

Sudha Murthy: ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ರಿವಿಲ್​ ಮಾಡಿದ್ದಾರೆ. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​
ಸುಧಾ ಮೂರ್ತಿ
TV9 Web
| Edited By: |

Updated on: Oct 10, 2023 | 8:44 AM

Share

ಬೆಳಗಾವಿ ಅ.10: ಇನ್ಫೋಸಿಸ್ (Infosys) ಫೌಂಡೇಶನ್‌ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ (Sudha Murthy) ಅವರು ಬೆಳಗಾವಿಯ (Belagavi) ಸಪ್ನ ಬುಕ್ ಹೌಸ್‌ನಲ್ಲಿ ಭಾನುವಾರ ಬೆಳಗಾವಿ ಬುಕ್ ಕ್ಲಬ್ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ತಿಳಿಸಿದರು. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.

“ತಮ್ಮ ಜೀವನದಲ್ಲಿ ಆದ ಧನಾತ್ಮಕ ಅನುಭವಗಳು ಮತ್ತು ತಮ್ಮ ಕೆಲಸಗಳಿಗೆ ಧನಾತ್ಮಕ ಪ್ರತಿಕ್ರಿಯೆ ಬರಲು ಪ್ರಾರಂಭವಾದವು. ಇದರಿಂದ ಪ್ರೇರಣೆಗೊಂಡು ನಿಯಮಿತವಾಗಿ ಬರೆಯಲು ಆರಂಭಿಸಿದೆ” ಎಂದು ಲೇಖಕಿ ಸುಧಾ ಮೂರ್ತಿಯವರು ತಿಳಿಸಿದರು.

ಬೆಳಗಾವಿಯ ಬುಕ್ ಕ್ಲಬ್​​ ಜನರಲ್ಲಿ ಸಾಹಿತ್ಯದ ಪ್ರೀತಿಯನ್ನು ಬೆಳೆಸಲು ಮತ್ತು ಪುಸ್ತಕ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಬುಕ್ ಕ್ಲಬ್​​ ಪ್ರತಿ ಭಾನುವಾರ ಸ್ನೇಹಶೀಲ ಕೆಫೆಗಳಿಂದ ಹಿಡಿದು ಸಮುದಾಯ ಭವನಗಳವರೆಗೆ ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಸಾಹಿತ್ಯದ ಅರಿವು ಮೂಡಿಸುತ್ತದೆ.

ಕ್ಲಬ್‌ಗೆ ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ವೆಬ್‌ಸೈಟ್, www.bookreads.in/club ಅಥವಾ www.instagram.com/belagavibookclub Instagram ಹ್ಯಾಂಡಲ್​​ಗೆ ಭೇಟಿ ನೀಡುವ ಮೂಲಕ ಯಾರಾದರೂ ಸೇರಿಕೊಳ್ಳಬಹುದು ಎಂದು ಕ್ಲಬ್ ಅನ್ನು ಬೆಂಬಲಿಸುವ ರೋಸ್ಟ್ರಮ್ ಡೈರೀಸ್ ಸಂಸ್ಥಾಪಕ ಅಭಿಷೇಕ್ ಬೆಂಡಿಗೇರಿ ಹೇಳಿದರು.

ಬೆಳಗಾವಿ ಬುಕ್ ಕ್ಲಬ್, ರೋಸ್ಟ್ರಮ್ ಡೈರೀಸ್‌ನ ಸಹಯೋಗದೊಂದಿಗೆ ಲೇಖಕರನ್ನು ಮುಂಚೂಣಿಗೆ ತರಲು ಬದ್ಧವಾಗಿದೆ. ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕರಾದ ರಘು ಎಂ.ವಿ ಮತ್ತು ಮೇಘನಾ ಎಂ.ಆರ್ ಹಾಗೂ ಕ್ಲಬ್​​ನ ಇತರ ಸದಸ್ಯರು ಸಂವಾದದಲ್ಲಿ ಉಪಸ್ಥಿತರಿದ್ದರು. ರವಿವಾರ ಸಪ್ನಾ ಬುಕ್ ಹೌಸ್‌ನಲ್ಲಿ ನಡೆದ ಕೊನೆಯ ಸಭೆಯು ಅದ್ಭುತ ಯಶಸ್ಸನ್ನು ಕಂಡಿತು. ಬುಕ್ ಕ್ಲಬ್ ತಂಡಕ್ಕೆ ಸಾಹಿತ್ಯ ಆಸಕ್ತರು ಧನ್ಯವಾದ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ