Belagavi Session: ಎರಡು ಮನೆಗಳಲ್ಲೂ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗಿಕಾರ: ಕಾಯ್ದೆಯಾಗಲು ಇನ್ನೊಂದೆಜ್ಜೆ ಬಾಕಿ

ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಇಂದು (ಡಿ. 26) ಮೇಲ್ಮನೆ ವಿಧಾನ ಪರಿಷತ್​ನಲ್ಲಿ ಅಂಗಿಕಾರಗೊಂಡಿದೆ.

Belagavi Session: ಎರಡು ಮನೆಗಳಲ್ಲೂ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ ಅಂಗಿಕಾರ: ಕಾಯ್ದೆಯಾಗಲು ಇನ್ನೊಂದೆಜ್ಜೆ ಬಾಕಿ
ಬೆಳಗಾವಿ ಸುವರ್ಣ ಸೌಧ
Updated By: ವಿವೇಕ ಬಿರಾದಾರ

Updated on: Dec 26, 2022 | 8:30 PM

ಬೆಳಗಾವಿ: ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 95 ಮತ್ತು 96ಕ್ಕೆ ತಿದ್ದುಪಡಿ ಮಾಡುವ ಮೂಲಕ ಕೃಷಿಯೇತರ ಉದ್ದೇಶಗಳಿಗಾಗಿ ಭೂಪರಿವರ್ತನೆ ಪ್ರಕ್ರಿಯೆ ಸರಳೀಕರಣಗೊಳಿಸುವ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ (Land Revenue Second Amendment Bill 2022) ಇಂದು (ಡಿ. 26) ಮೇಲ್ಮನೆ ವಿಧಾನ ಪರಿಷತ್​ನಲ್ಲಿ ಅಂಗಿಕಾರಗೊಂಡಿದೆ. ಈ ವಿಧೇಯಕ (ಡಿ.22) ರಂದು ಕೆಳಮನೆ ವಿಧಾನಸಭೆಯಲ್ಲಿ ಅಂಗಿಕಾರಗೊಂಡಿತ್ತು. ಸದ್ಯ ವಿಧೇಯಕ ಕಾಯ್ದೆಯಾಗಿ ಜಾರಿಯಾಗುವುದಕ್ಕೆ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಹೌದು ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದರೆ ಕಾಯ್ದೆಯಾಗುತ್ತದೆ.

ಈ ತಿದ್ದುಪಡಿಯನ್ನು ತರುವುದು ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೃಷಿಭೂಮಿಯ ನಿವಾಸಿಗಳು ಅದನ್ನು ಸಂಪೂರ್ಣವಾಗಿ ಅಥವಾ ಅದರ ಭಾಗವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬೇರೆಡೆಗೆ ವರ್ಗಾವಣೆಗೆ ಬಯಸಿದರೆ, ಅವರು ಅರ್ಜಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಅಫಿಡವಿಟ್ ನ್ನು ಸಲ್ಲಿಸಬಹುದು. ಬಳಿಕ ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಜಿಲ್ಲಾಧಿಕಾರಿ ಅನುಮೋದನೆ ನೀಡುತ್ತಾರೆ.

ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಡಿಸಿ (ಜಿಲ್ಲಾಧಿಕಾರಿ) ಅನುಮೋದನೆ ನೀಡಬೇಕು. ಮಾಸ್ಟರ್ ಪ್ಲಾನ್ ಪ್ರಕಟಿಸದಿದ್ದಲ್ಲಿ ಮತ್ತು ಜಮೀನು ಯೋಜನಾ ಪ್ರದೇಶದ ಹೊರಗೆ ಬಿದ್ದರೆ, ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ತಮ್ಮ ಅಭಿಪ್ರಾಯವನ್ನು ಒದಗಿಸಬೇಕು.

ಯಾವುದೇ ಅಭಿಪ್ರಾಯವನ್ನು ನೀಡದಿದ್ದಲ್ಲಿ, ಭೂಮಿಯನ್ನು ಬೇರೆಡೆಗೆ ತಿರುಗಿಸಲು ಅಧಿಕಾರಿಗಳ ಅಭ್ಯಂತರವಿಲ್ಲ ಎಂದು ಪರಿಗಣನೆ, ನಂತರ ಡಿಸಿ ಅನುಮೋದನೆ ನೀಡಬೇಕು. ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಡಿಸಿ ನಿರ್ಧರಿಸಲು ಮತ್ತು ಆದೇಶವನ್ನು ನೀಡಲು ವಿಫಲವಾದರೆ ಅನುಮೋದನೆಯನ್ನು ನೀಡಲಾಗಿದೆ ಎಂದು ಪರಿಗಣನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ