ಬೆಂಗಳೂರು: ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದಿದ್ದಕ್ಕೆ ಬಾಲಕಿ ತಂದೆಯ ಕೊಲೆ

ಪ್ರೀತಿಸುವಂತೆ ಮಗಳ ಹಿಂದೆ ಬಿದ್ದಿದ್ದ ವ್ಯಕ್ತಿಗೆ ಬುದ್ದಿವಾದ ಹೇಳಲು ಹೋದ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ನಡೆದಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದಿದ್ದಕ್ಕೆ ಬಾಲಕಿ ತಂದೆಯ ಕೊಲೆ
ಸಾಂದರ್ಭಿಕ ಚಿತ್ರ
Edited By:

Updated on: Sep 03, 2023 | 7:13 AM

ಬೆಂಗಳೂರು: ನನ್ನ ಮಗಳ (Daughter) ವಿಚಾರಕ್ಕೆ ಬರಬೇಡ ಎಂದು ಬುದ್ದಿ ಹೇಳಲು ಹೋಗಿದ್ದ ತಂದೆಯನ್ನೇ (Father) ಕೊಲೆ ಮಾಡಿರುವ ಘಟನೆ ಅಶೋಕ್ ನಗರ ಪೊಲೀಸ್ (Police) ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ನಡೆದಿದೆ. ಅನ್ವರ್ ಹುಸೇನ್ ಕೊಲೆಯಾದ ವ್ಯಕ್ತಿ. ಝಹೀದ್ ಕೊಲೆಗೈದ ಆರೋಪಿ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ದಿನಗಳಿಂದ ಆರೋಪಿ ಝಹೀದ್ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದಿದ್ದನು. ಈ ವಿಚಾರವನ್ನು ಅಪ್ರಾಪ್ತ ಬಾಲಕಿ ತಂದೆ ಅನ್ವರ್ ಹುಸೇನ್​ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಅನ್ವರ್​ ಹುಸೇನ್​​ ಮೂರು ತಿಂಗಳ ಹಿಂದೆಯೇ ಆರೋಪಿ ಝಹೀದ್​​ಗೆ ಬುದ್ದಿ ಹೇಳಿದ್ದರು. ಆದರೂ ಮಾತು ಕೇಳದ ಝಹೀದ್ ಪ್ರೀತಿಸುವಂತೆ ಮತ್ತೆ ದುಂಬಾಲು ಬಿದ್ದಿದ್ದನು.

ಇದನ್ನೂ ಓದಿ: ಪ್ರೇಯಸಿಯ ಕತ್ತು ಕೊಯ್ದು ಕೊಂದು, ಅಂಬಾಲಿ ಘಾಟ್​​ನಲ್ಲಿ ಎಸೆದ ಪ್ರೇಮಿ

ಈ ವಿಚಾರವನ್ನು ಝಹೀದ್ ಅಣ್ಣ ಬಿಲಾಲ್ ಹಾಗೂ ಕುಟುಂಬಸ್ಥರಿಗೆ ತಿಳಿಸಲೆಂದು ನಿನ್ನೆ (ಸೆ.01) ರಾತ್ರಿ ಅನ್ವರ್​ ಹುಸೇನ್ ಆರೋಪಿಯ ಮನೆ ಬಳಿ ಹೋಗಿದ್ದಾರೆ. ಕುಟಂಬಸ್ಥರೊಂದಿಗೆ ಅನ್ವರ್​​ ಹುಸೇನ್​ ಮಾತನಾಡುತ್ತಿರುವಾಗಲೇ, ಝಹೀದ್ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಏಕಾಏಕಿ ಅನ್ವರ್ ಹುಸೇನ್ ಕುತ್ತಿಗೆಗೆ ಇರಿದಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅನ್ವರ್​ ಹುಸೇನ್​​ರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅನ್ವರ್​ ಹುಸೇನ್ ಮೃತಪಟ್ಟಿದ್ದಾರೆ. ಇನ್ನು ಪ್ರಕರಣ ಸಂಬಂಧ ಝಹೀದ್ ಅಣ್ಣ ಬಿಲಾಲ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ತಲೆಮರಿಸಿಕೊಂಡಿರುವ ಅರೋಪಿ ಝಹೀದ್​ಗಾಗಿ ಹುಡಕಾಟ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Sun, 3 September 23