AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನಿಗೆ ದೋಖಾ; ಜಿಮ್ ಟ್ರೈನರ್​ನಿಂದ 7 ಲಕ್ಷ ವಂಚನೆ

7 ಲಕ್ಷ ಹಣ ಕಳೆದುಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬೆಂಗಳೂರಿನ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ.

ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನಿಗೆ ದೋಖಾ; ಜಿಮ್ ಟ್ರೈನರ್​ನಿಂದ 7 ಲಕ್ಷ ವಂಚನೆ
ಪರಾರಿಯಾಗಿರುವ ಜಿಮ್ ಟ್ರೈನರ್ ಮೋಹನ್
TV9 Web
| Updated By: sandhya thejappa|

Updated on:Jun 29, 2021 | 11:17 AM

Share

ಬೆಂಗಳೂರು: ಚೆನ್ನಾಗಿ ಕಾಣಬೇಕು. ಸಿನಿಮಾ ಹಿರೋಗಳ ರೀತಿ ಬಲಿಷ್ಠವಾದ ದೇಹ ಹೊಂದಿರಬೇಕು ಅಂತ ಯುವಕರು ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಹೀಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನೊಬ್ಬನಿಂದ ಜಿಮ್ ಟ್ರೈನರ್ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಜಿಮ್ ಟ್ರೈನರ್ ಮಾತು ನಂಬಿ ಯುವಕ ಸುಮಾರು 7 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ.

7 ಲಕ್ಷ ಹಣ ಕಳೆದುಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬೆಂಗಳೂರಿನ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ. ಜಿಮ್​ಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಕೌಶಿಕ್ ಹೋಗಿದ್ದ. ಕೆಲವು ಫೋಟೋಗಳನ್ನು ತೋರಿಸಿ ಮೂರೇ ತಿಂಗಳಲ್ಲಿ ಸಿಕ್ ಪ್ಯಾಕ್ ಮಾಡುವುದಾಗಿ ಮೋಹನ್ ನಂಬಿಸಿದ್ದನಂತೆ.

ಟ್ರೈನಿ ಮೋಹನ್ ಯುವಕನಿಂದ ಆರಂಭದಲ್ಲಿ 2 ಲಕ್ಷ ರೂಪಾಯಿ ಪಡೆದಿದ್ದ. ನಂತರ 5 ಲಕ್ಷ ಸಾಲ ಕೊಡಿಸುವಂತೆ ಕೌಶಿಕ್ ಬಳಿ ಕೇಳಿದ್ದ. ಮೋಹನ್ ಮಾತು ಕೇಳಿ ಕೌಶಿಕ್ ಸಾಲ ಕೊಡಿಸಿದ್ದ. ಕೌಶಿಕ್ ತನ್ನ ಹೆಸರಿನಲ್ಲೇ ಮೋಹನ್ಗೆ ಸಾಲ ಕೊಡಿಸಿದ್ದನು. ನಂತರ ಸಿಕ್ಸ್ ಪ್ಯಾಕ್ ಮಾಡಿಸದೇ, ಸಾಲದ ಇಎಂಐ ಕಟ್ಟದೇ ಕೌಶಿಕ್​ಗೆ ಜಿಮ್ ಟ್ರೈನರ್ ಮೋಹನ್ ಅವಾಜ್ ಹಾಕುತ್ತಿದ್ದನಂತೆ. ಸದ್ಯ ಈ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೋಹನ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ

Talguppa Railway Station: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡು

National Camera Day 2021: ಇಂದು ಕ್ಯಾಮೆರಾ ದಿನ, ನೀವು ಕ್ಯಾಮೆರಾ ಎದುರು ಕೊಟ್ಟ ಫೋಸ್​ಗಳನ್ನು ಹಾಗೆ ಒಮ್ಮೆ ನೆನಪಿಸಿಕೊಳ್ಳಿ

(Gym Trainer cheated on the young man without giving him money)

Published On - 11:17 am, Tue, 29 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ