ಮೈಸೂರು: ರಾಜ್ಯದ ಮೊದಲ ಎಕ್ಸಪ್ರೆಸ್ವೇ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru-Mysore Expressway) ಕಳೆದ ಮೂರು ತಿಂಗಳಲ್ಲಿ ಅಪಘಾತದಿಂದ (Accident) ಸಾವನ್ನಪ್ಪಿರುವ ಸಂಖ್ಯೆ ನೂರರ ಗಡಿ ದಾಟಿದೆ. ಮತ್ತು ಒಟ್ಟು ಗಾಯಗೊಂಡವರ ಸಂಖ್ಯೆ 350 ದಾಟಿದೆ. ಬಹುತೇಕ ಅಪಘಾತಗಳು ರಾಮನಗರ ಮತ್ತು ಮಂಡ್ಯ ಜಿಲ್ಲಾಡಳಿತ ವ್ಯಾಪ್ತಿಯ 117 ಕಿಮೀ ಉದ್ದದ ರಸ್ತೆಯಲ್ಲಿ ನಡೆದಿವೆ. ಈ ಹಿನ್ನೆಲೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಎರಡು ಜಿಲ್ಲಾಡಳಿತ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಅಧ್ಯಯನ ಮಾಡಿ ವಿವರವಾಗಿ ವಿಶ್ಲೇಷಣೆಯೊಂದಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ನೀಡಿವೆ. ಅಲ್ಲದೇ ಅಪಘಾತ ತಪ್ಪಿಸುವ ಬಗ್ಗೆಯೂ ಕೆಲವೊಂದು ಸಲಹೆ ನೀಡಿದೆ.
ಪ್ರತಿದಿನ ಸರಾಸರಿ 56,000 ವಾಹನಗಳು ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುತ್ತವೆ. ಈ ಹೆದ್ದಾರಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 75 ನಿಮಿಷಗಳಿಗೆ ಇಳಿಸಿದೆ. ನೆರೆಯ ತಮಿಳುನಾಡು ಮತ್ತು ಕೇರಳಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿ ಕಾರ್ಯನಿರ್ವಹಿಸುತ್ತಿದೆ.
ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಹೆದ್ದಾರಿಯಲ್ಲಿ 79 ಮಾರಣಾಂತಿಕ ಅಪಘಾತಗಳು ಮತ್ತು 226 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದ್ದು, 94 ಮಂದಿ ಸಾವನ್ನಪ್ಪಿದ್ದಾರೆ ಮತ್ತು 353 ಜನರಿಗೆ ಗಾಯಗಳಾಗಿವೆ.
ಇದನ್ನೂ ಓದಿ: Bengaluru Mysuru Expressway: ಸಾವಿನ ಹೆದ್ದಾರಿಯಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ
ಎಕ್ಸ್ಪ್ರೆಸ್ವೇಯ ಸ್ವಲ್ಪ ಭಾಗವು ಮೈಸೂರು ಸಿಟಿ ಪೊಲೀಸ್ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿ ನಾಲ್ಕು ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು ಐವರು ಸಾವನ್ನಪ್ಪಿದ್ದಾರೆ. ಈ ಎಕ್ಸಪ್ರೆಸ್ವೇಯಲ್ಲಿ ಸಂಭವಿಸುವ ಅಪಘಾತಗಳಿಗೆ ಕಾರಣ ಅತಿ ವೇಗ ಮತ್ತು ಅಜಾಗರೂಕ ಚಾಲನೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಅಧಿಕವಾದ ಟ್ರಾಫಿಕ್ನಿಂದಾಗಿ ವಾಹನವನ್ನು ಟಾಪ್ ಗೇರ್ಗೆ ಬದಲಾಯಿಸಲು ಹೆಣಗಾಡುವ ವಾಹನ ಸವಾರರು, ಎಕ್ಸ್ಪ್ರೆಸ್ವೇಗೆ ಇಳಿದಾಗ ಟಾಪ್ ಗೇರ್ ಹಾಕಿಕೊಂಡು ಹೋಗುತ್ತಿರುತ್ತಾರೆ. ಹೀಗೆ ಹೋಗುವಾಗ ಅಡ್ಡ ಬರುವ ವಾಹನ ಅಥವಾ ಪ್ರಾಣಿಗಳಿಂದ ಅಪಘಾತವಾಗುತ್ತದೆ. ಕೆಲವೊಂದು ಸಾರಿ ಚಾಲಕರ ಅಜಾಗರೂಕತೆಯಿಂದ ಅಪಘಾತ ಸಂಭವಿಸುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಅಲ್ಲದೇ ಎಕ್ಸ್ಪ್ರೆಸ್ವೇಯಲ್ಲಿ ಚಾಲನೆ ಮಾಡುವಾಗ ವಾಹನ ಚಾಲಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಹೇಳಿದ್ದಾರೆ.
ಸ್ಥಳ ಪರಿಶೀಲನೆಯ ಸಮಯದಲ್ಲಿ, ಸ್ಕೈವಾಕ್ಗಳ ಕೊರತೆ, ರಸ್ತೆಯಲ್ಲಿ ನೀರು ನಿಲ್ಲುವುದು, ಸರ್ವಿಸ್ ರಸ್ತೆಗಳಿಂದ ಮುಖ್ಯರಸ್ತೆಗೆ ಸಂಪರ್ಕಿಸುವಾಗ ರಸ್ತೆ ಫಲಕಗಳ ಕೊರತೆ, ಫ್ಲೈಓವರ್ಗಳ ಅಡಿಯಲ್ಲಿ ಬೀದಿ ದೀಪಗಳ ಕೊರತೆಯಿಂದ ರಸ್ತೆ ಬಳಕೆದಾರರ ಜೀವಕ್ಕೆ ಅಪಾಯವನ್ನುಂಟಾಗುತ್ತಿದೆ.
ರಾಮನಗರ ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಅವರು ಎಕ್ಸ್ಪ್ರೆಸ್ವೇಯಲ್ಲಿನ ವಿವಿಧ “ದೋಷಗಳನ್ನು” ಪಟ್ಟಿ ಮಾಡಿ ಎನ್ಎಚ್ಎಐಗೆ ನೀಡಿದ್ದಾರೆ. ಅವುಗಳನ್ನು ತಕ್ಷಣವೇ ಸರಿಪಡಿಸಬೇಕು. ಜೀವಗಳನ್ನು ಉಳಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ನಮ್ಮ ಸಂಶೋಧನೆಗಳ ಆಧಾರದ ಮೇಲೆ, ನಾವು NHAI ಗೆ ಸೂಚನೆಗಳನ್ನು ನೀಡಿದ್ದೇವೆ. ವೇಗದ ಮಿತಿಗಳನ್ನು ಅನುಸರಿಸಲು ಮತ್ತು ಲೇನ್ ಶಿಸ್ತನ್ನು ಕಾಪಾಡಿಕೊಳ್ಳಲು ನಾವು ವಾಹನ ಚಾಲಕರಲ್ಲಿ ಮನವಿ ಮಾಡುತ್ತೇವೆ ಎಂದು ಕಾರ್ತಿಕ್ ರೆಡ್ಡಿ ಹೇಳಿದರು.
ಮಂಡ್ಯ ಎಸ್ಪಿ ಯತೀಶ್ ಎನ್ ಅವರು ಎಕ್ಸ್ಪ್ರೆಸ್ವೇನಲ್ಲಿ ಅತಿವೇಗದ ಚಾಲನೆಯನ್ನು ಪರಿಶೀಲಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಮಾಹಿತಿ ನೀಡಿದರು. ಕೆಲವು ಪ್ರಮುಖ ಸಲಹೆಗಳೆಂದರೆ:
ಅತಿ ವೇಗವನ್ನು ಪರಿಶೀಲಿಸಲು ಎಕ್ಸ್ಪ್ರೆಸ್ವೇಯಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಡಳಿತಗಳು ಎನ್ಎಚ್ಎಐಗೆ ಸೂಚಿಸಿದ್ದೇವೆ. ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ 100 ಕಿಮೀಗಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅಧಿಕಾರಿಗಳು ವಾಹನ ಚಾಲಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಹಿಟ್ ಅಂಡ್ ರನ್ ಆದ ಅನೇಕ ನಿದರ್ಶನಗಳಿವೆ. ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅತಿ ವೇಗದ ಚಾಲನೆಯನ್ನು ಗುರುತಿಸಲು ಸಹಾಯವಾಗುತ್ತದೆ. ಮತ್ತು ತಪ್ಪಿತಸ್ಥ ಚಾಲಕರಿಗೆ ದಂಡ ವಿಧಿಸಬಹುದು. ಮತ್ತು ಸ್ಪೀಡ್ ಬ್ರೇಕರ್ಗಳು ಬೇಕು ಎಂದು ಎಸ್ಪಿ ಯತೀಶ್ ಹೇಳಿದರು.
ಎಕ್ಸ್ಪ್ರೆಸ್ವೇಯ ಎರಡೂ ಬದಿಗಳಲ್ಲಿ 14 ಪಾಯಿಂಟ್ಗಳಲ್ಲಿ ಸರ್ವಿಸ್ ರಸ್ತೆಯಿಂದ ಮುಖ್ಯರಸ್ತೆಗೆ NHAI ಪ್ರವೇಶ ನೀಡಿದೆ. ಆದಾಗ್ಯೂ ಈ ಪ್ರವೇಶ ಕೇಂದ್ರಗಳಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಲಾಗಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸರ್ವಿಸ್ ರಸ್ತೆಯ ಮೇಲೆ ಸೂಚನಾ ಫಲಕಗಳನ್ನು ಹಾಕಲು ಎನ್ಎಚ್ಎಐಗೆ ತಿಳಿಸಲಾಗಿದೆ. ಇದು ಅಪಘಾತ ಪೀಡಿತ ವಲಯ ಎಂದು ಸೂಚಿಸುತ್ತದೆ. ಸರ್ವೀಸ್ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ಗಳ ಅಗತ್ಯತೆಯೂ ಗಮನಕ್ಕೆ ಬಂದಿದೆ ಎಂದರು.
ಇ-ವೇಯ ಇಂಜಿನಿಯರಿಂಗ್ ಕೆಲಸಗಳಲ್ಲಿನ ದೋಷಗಳನ್ನು ಪೊಲೀಸರು ಗುರುತಿಸಿದ್ದಾರೆ, ಇದರ ಪರಿಣಾಮವಾಗಿ ವಿವಿಧ ಹಂತಗಳಲ್ಲಿ ನೀರು ನಿಂತಿದೆ. ಕುಂಬಳಗೋಡು, ಕಣಿಮಿಕೆ ಕಾಲೋನಿ ಮತ್ತಿತರ ಕಡೆ ನೀರು ನಿಲ್ಲುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಎಕ್ಸ್ಪ್ರೆಸ್ವೇಯಲ್ಲಿ ವಿವಿಧ ಸ್ಥಳಗಳಲ್ಲಿ ಸ್ಕೈವಾಕ್ಗಳನ್ನು ನಿರ್ಮಿಸಲು ಪೊಲೀಸರು NHAI ಗೆ ತಿಳಿಸಿದ್ದಾರೆ. ಉದಾಹರಣೆಗೆ, ಕಣಿಮಿಣಿಕೆಯಲ್ಲಿ, ಸ್ಕೈವಾಕ್ ಇಲ್ಲದಿರುವುದು ಜನನಿಬಿಡ ರಸ್ತೆಯನ್ನು ದಾಟುವಾಗ ಗ್ರಾಮಸ್ಥರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶೇಷಗಿರಿ ಗ್ರಾಮದ ಬಳಿಯೂ ಎಕ್ಸ್ಪ್ರೆಸ್ವೇಗೆ ಅಡ್ಡಲಾಗಿ ಸ್ಕೈವಾಕ್ ಇಲ್ಲದಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಕಷ್ಟಪಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ