AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore: ನಿಮಗಿದು ಗೊತ್ತೇ?; 55 ವರ್ಷದ ಹಿಂದೆ ಸಂಚಾರ ಶುರು ಮಾಡಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೀಗಿತ್ತು

ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್​ಗಳ ಸಂಚಾರವನ್ನು ಆರಂಭಿಸಲಾಯಿತು.

Bangalore: ನಿಮಗಿದು ಗೊತ್ತೇ?; 55 ವರ್ಷದ ಹಿಂದೆ ಸಂಚಾರ ಶುರು ಮಾಡಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೀಗಿತ್ತು
55 ವರ್ಷ ಹಿಂದಿನ ಸ್ಲೀಪರ್ ಬಸ್​ನ ಫೋಟೋ
TV9 Web
| Edited By: |

Updated on:Sep 27, 2021 | 6:40 PM

Share

ಬೆಂಗಳೂರು: ಬಸ್​ನಲ್ಲಿ ಬಹಳ ದೂರದ ಪ್ರಯಾಣ ಮಾಡುವವರಿಗೆ ಹಾಗೂ ರಾತ್ರಿ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿ ಎಂದು ಸರ್ಕಾರದಿಂದ ಸ್ಲೀಪರ್ ಕೋಚ್ ಬಸ್​ಗಳ ಸೇವೆಯನ್ನು ಪರಿಚಯಿಸಲಾಗಿತ್ತು. ಈಗ ಕೆಎಸ್​ಆರ್​ಟಿಸಿ ಹಾಗೂ ಖಾಸಗಿಯಲ್ಲಿ ಸ್ಲೀಪರ್ ಬಸ್​ಗಳು ಸಾಮಾನ್ಯ. ಆದರೆ, ಈ ಆರಾಮದಾಯಕ ಬಸ್​ಗಳು ಕರ್ನಾಟಕದಲ್ಲಿ ಸಂಚರಿಸಲು ಶುರುವಾಗಿದ್ದು ಯಾವಾಗ? ಹೇಗೆ? ಎಂಬ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕದಲ್ಲಿ ಸ್ಲೀಪರ್ ಬಸ್​ಗಳು ಓಡಾಡಲು ತೊಡಗಿ 55 ವರ್ಷಗಳು ಆಗಿವೆ.

ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್​ಗಳ ಸಂಚಾರವನ್ನು ಆರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ 55 ವರ್ಷಗಳ ಹಿಂದೆ ಸ್ಲೀಪರ್ ಬಸ್​ ಸಂಚಾರವನ್ನು ಶುರು ಮಾಡಲಾಯಿತು. ಬಸ್​ನಲ್ಲಿ ಮಲಗಿಕೊಂಡು ಹೋಗಬಹುದು ಎಂಬ ಕಲ್ಪನೆಯೇ ಬಹಳ ಹೊಸದಾಗಿತ್ತು. ಹೀಗಾಗಿ, ಈ ಹೊಸ ರೂಪದ ಬಸ್​ ಅನ್ನು ನೋಡಲು ಶಾಂತಿನಗರ ಬಸ್​ ನಿಲ್ದಾಣಕ್ಕೆ ನೂರಾರು ಜನರು ಸೇರಿದ್ದರು. ಬೆಡ್​ಗಳಿದ್ದ ಬಸ್​ ಅನ್ನು ನೋಡಿ ಜನರು ಪುಳಕಿತರಾಗಿದ್ದರು. ಆ ಬಸ್​ನಲ್ಲಿ ಫ್ಯಾನ್, ರೇಡಿಯೋ ಹಾಗೇ ರೆಕಾರ್ಡ್ ಪ್ಲೇಯರ್ ಮತ್ತು ಟೆಲಿಫೋನ್ ಕೂಡ ಇತ್ತು.

ರಸ್ತೆ ಮೇಲೆ ರೈಲಿನ ರೀತಿಯಲ್ಲಿ ಬ್ಯುಸಿನೆಸ್ ಕ್ಲಾಸ್​ನ ಬಸ್​ ಸಂಚಾರ ಆರಂಭಿಸಿ 55 ವರ್ಷಗಳಾಯಿತು. ಕರ್ನಾಟಕದಲ್ಲಿ ಸಂಚಾರ ಶುರು ಮಾಡಿದ ಮೊದಲ ಸ್ಲೀಪರ್ ಬಸ್ ಇದು. 55 ವರ್ಷಗಳ ಹಿಂದೆ 8 ವರ್ಷದವರಾಗಿದ್ದ ನಿಖಿಲ್ ತಿವಾರಿ ತಮ್ಮ ಅಪ್ಪನೊಂದಿಗೆ ಮೊದಲ ಸ್ಲೀಪರ್ ಬಸ್​ನಲ್ಲಿ ಪ್ರಯಾಣ ಮಾಡಿದ್ದರು. ಅವರು ಅಂದಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾವು ಆ ದೊಡ್ಡ ಬಸ್​ ಅನ್ನು ಹತ್ತಿದಾಗ ಬಹಳ ಆಶ್ಚರ್ಯವಾಗಿತ್ತು. ತಿಳಿ ನೀಲಿ ಮತ್ತು ಕೆಂಪು ಬಣ್ಣದಲ್ಲಿದ್ದ ಬಸ್​ನ ಒಳಭಾಗ ಇನ್ನೂ ನನಗೆ ನೆನಪಿದೆ. ಆ ಬಸ್​ನ ಸಿಬ್ಬಂದಿ ಬೆಡ್​ ದಿಂಬು, ಲೈಟ್ ಮತ್ತು ರೇಡಿಯೋ ವ್ಯವಸ್ಥೆ ಮಾಡಿದ್ದರು. ಆ ಬಸ್​ನ ಫೋಟೋ, ವಿಡಿಯೋವನ್ನು ನನ್ನ ತಂದೆ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು ಎಂದು ನಿಖಿಲ್ ತಿವಾರಿ 55 ವರ್ಷ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್​ಆರ್​ಟಿಸಿ)ಯ ಮಹತ್ವದ ಯೋಜನೆಯಾದ ಸ್ಲೀಪರ್ ಬಸ್ ಬಹಳ ಯಶಸ್ವಿಯಾಯಿತು. ಈ ಸ್ಲೀಪರ್ ಬಸ್​ನ ಬಗ್ಗೆ ತಿಳಿದುಕೊಳ್ಳಲು, ಅಧ್ಯಯನ ಮಾಡಲು ಕಣ್ಣಪ್ಪ ಎಂಬ ಸಿಬ್ಬಂದಿಯನ್ನು ಎಂಎಸ್​ಆರ್​ಟಿಸಿಯಿಂದ ಜರ್ಮನಿಗೆ ಕಳುಹಿಸಲಾಗಿತ್ತು. ಅಲ್ಲಿನ ಬಸ್​ಗಳ ಸಂಚಾರ, ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದು ಕರ್ನಾಟಕದಲ್ಲೂ ಅಳವಡಿಸಲಾಯಿತು. ಇದಕ್ಕಾಗಿ ವಿಶೇಷವಾಗಿ ತರಬೇತಿ ಪಡೆದ ಚಾಲಕರು, ಕಂಡಕ್ಟರ್ ಅನ್ನು ನೇಮಕ ಮಾಡಲಾಗಿತ್ತು. ಅದಾದ ಬಳಿಕ ಹಲವು ಬದಲಾವಣೆಗಳೊಂದಿಗೆ ಸ್ಲೀಪರ್ ಬಸ್ ಅನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದೀಗ ರಾಜ್ಯಾದ್ಯಂತ ಸಾಕಷ್ಟು ಸ್ಲೀಪರ್ ಬಸ್​ಗಳು ಓಡಾಡುತ್ತಿವೆ.

ಇದನ್ನೂ ಓದಿ: ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕಟ್ಟಡ ಮಾಲೀಕನ ವಿರುದ್ಧ ಎಫ್​ಐಆರ್ ದಾಖಲು

Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಒರಿಸ್ಸಾ, ಆಂಧ್ರದಲ್ಲಿ ಗುಲಾಬ್ ಚಂಡಮಾರುತದ ಭೀತಿ

(Bengaluru News: 55 years ago Karnataka’s First Sleeper bus started Traveling)

Published On - 6:36 pm, Mon, 27 September 21

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?