AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?

ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?
ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ!
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Dec 22, 2023 | 2:46 PM

ಪುಟ್ಟ ಮಗುವಿಗೆ ಪ್ರಪಂಚದ ಅರಿವಿಲ್ಲ, ಒಳ್ಳೆದು ಕೆಟ್ಟದ್ದು ಗೊತ್ತೆ ಇಲ್ಲ, ಆದರೆ ಇಂತಹ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಬಾಯಿ ತೆರೆದಿರುವ ಮನೆಯ ಸಂಪ್, ಸಂಪ್‌ನ ಸುತ್ತಲೂ ಜನರ ಗೋಳಾಟ, ಏನಾಗಿದೆ ಅಂತ ನೋಡುವಷ್ಟರಲ್ಲಿ ಆ ಸಂಪ್ ನಲ್ಲಿ ಎಳೆಯ ಕಂದ (girl child) ಉಸಿರು ನಿಲ್ಲಿಸಿಬಿಟ್ಟಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಬಾಗಲಗುಂಟೆ (bagalagunte) ಪೊಲೀಸ್ ಠಾಣ ವ್ಯಾಪ್ತಿಯ ಮಲ್ಲಸಂದ್ರದಲ್ಲಿ (mallasandra).

ಹೌದು ಲೋಕವನ್ನ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿರೋದು ಈ ಮುದ್ದಾದ ಪುಟ್ಟ ಬಾಲಕಿ ಕೇವಲ ಐದು ವರ್ಷದ ಶಾಹಿದ ಭಾನು. ನಸ್ತೀನ ಭಾನು ಹಾಗೂ ಸೈಯದ್ ಹುಸೇನ್ ದಂಪತಿಯ ಪುಟ್ಟ ಮಗಳು ಶಹೀದಾ ಬಾನು ಮನೆಯ ಮುಂದೆ ಇರುವ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಶಹೀದ ಭಾನು ಮನೆಯ ಬಳಿ ಆಟ ಆಡುತ್ತಿದ್ದಳಂತೆ, ಇವರ ಬಿಲ್ಡಿಂಗ್‌ ಪಕ್ಕದಲ್ಲೇ ಇರುವ ಬಿಹಾರಿ ಮೂಲದ ಯುವಕರು ನೀರು ತೆಗೆದುಕೊಳ್ಳುವ ಸಲುವಾಗಿ ಸಂಪ್‌ನ ಮುಚ್ಚಳ ತೆಗೆದಿದ್ದಾರೆ. ಆದರೆ ಅದನ್ನು ಮತ್ತೆ ಮುಚ್ಚದೇ ಹಾಗೆಯೇ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್

ಈ ವೇಳೆ ಅಲ್ಲೆ ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ. ಪಕ್ಕದ ಮನೆಯ ಚಂದ್ರಶೇಖರ್‌ಗೆ ವಿಷಯ ತಿಳಿಸಿದಾಗ ಆತ ಬಂದು ನೋಡಿದಾಗ ಮಗು ಸಂಪ್‌ಗೆ ಬಿದ್ದಿರುವುದು ಗೊತ್ತಾಗಿದೆ.

ಘಟನೆಯ ಬಳಿಕ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ಮೃತದೃಹ ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮಗು ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆಯ ಬಳಿಕ ಬಿಹಾರ್ ಮೂಲದ ಹುಡುಗರು ಭಯದಿಂದಾಗಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್