AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?

ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?
ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ!
ಬಿ ಮೂರ್ತಿ, ನೆಲಮಂಗಲ
| Edited By: |

Updated on: Dec 22, 2023 | 2:46 PM

Share

ಪುಟ್ಟ ಮಗುವಿಗೆ ಪ್ರಪಂಚದ ಅರಿವಿಲ್ಲ, ಒಳ್ಳೆದು ಕೆಟ್ಟದ್ದು ಗೊತ್ತೆ ಇಲ್ಲ, ಆದರೆ ಇಂತಹ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಬಾಯಿ ತೆರೆದಿರುವ ಮನೆಯ ಸಂಪ್, ಸಂಪ್‌ನ ಸುತ್ತಲೂ ಜನರ ಗೋಳಾಟ, ಏನಾಗಿದೆ ಅಂತ ನೋಡುವಷ್ಟರಲ್ಲಿ ಆ ಸಂಪ್ ನಲ್ಲಿ ಎಳೆಯ ಕಂದ (girl child) ಉಸಿರು ನಿಲ್ಲಿಸಿಬಿಟ್ಟಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಬಾಗಲಗುಂಟೆ (bagalagunte) ಪೊಲೀಸ್ ಠಾಣ ವ್ಯಾಪ್ತಿಯ ಮಲ್ಲಸಂದ್ರದಲ್ಲಿ (mallasandra).

ಹೌದು ಲೋಕವನ್ನ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿರೋದು ಈ ಮುದ್ದಾದ ಪುಟ್ಟ ಬಾಲಕಿ ಕೇವಲ ಐದು ವರ್ಷದ ಶಾಹಿದ ಭಾನು. ನಸ್ತೀನ ಭಾನು ಹಾಗೂ ಸೈಯದ್ ಹುಸೇನ್ ದಂಪತಿಯ ಪುಟ್ಟ ಮಗಳು ಶಹೀದಾ ಬಾನು ಮನೆಯ ಮುಂದೆ ಇರುವ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಶಹೀದ ಭಾನು ಮನೆಯ ಬಳಿ ಆಟ ಆಡುತ್ತಿದ್ದಳಂತೆ, ಇವರ ಬಿಲ್ಡಿಂಗ್‌ ಪಕ್ಕದಲ್ಲೇ ಇರುವ ಬಿಹಾರಿ ಮೂಲದ ಯುವಕರು ನೀರು ತೆಗೆದುಕೊಳ್ಳುವ ಸಲುವಾಗಿ ಸಂಪ್‌ನ ಮುಚ್ಚಳ ತೆಗೆದಿದ್ದಾರೆ. ಆದರೆ ಅದನ್ನು ಮತ್ತೆ ಮುಚ್ಚದೇ ಹಾಗೆಯೇ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್

ಈ ವೇಳೆ ಅಲ್ಲೆ ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ. ಪಕ್ಕದ ಮನೆಯ ಚಂದ್ರಶೇಖರ್‌ಗೆ ವಿಷಯ ತಿಳಿಸಿದಾಗ ಆತ ಬಂದು ನೋಡಿದಾಗ ಮಗು ಸಂಪ್‌ಗೆ ಬಿದ್ದಿರುವುದು ಗೊತ್ತಾಗಿದೆ.

ಘಟನೆಯ ಬಳಿಕ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ಮೃತದೃಹ ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮಗು ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆಯ ಬಳಿಕ ಬಿಹಾರ್ ಮೂಲದ ಹುಡುಗರು ಭಯದಿಂದಾಗಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್