AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?

ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ.

ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ! ಆಕೆಯ ತಪ್ಪೇನು?
ಲೋಕ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿದ ಪುಟ್ಟ ಬಾಲಕಿ!
ಬಿ ಮೂರ್ತಿ, ನೆಲಮಂಗಲ
| Edited By: |

Updated on: Dec 22, 2023 | 2:46 PM

Share

ಪುಟ್ಟ ಮಗುವಿಗೆ ಪ್ರಪಂಚದ ಅರಿವಿಲ್ಲ, ಒಳ್ಳೆದು ಕೆಟ್ಟದ್ದು ಗೊತ್ತೆ ಇಲ್ಲ, ಆದರೆ ಇಂತಹ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ತನ್ನ ಪ್ರಾಣವನ್ನೆ ಕಳೆದುಕೊಂಡಿದೆ. ಬಾಯಿ ತೆರೆದಿರುವ ಮನೆಯ ಸಂಪ್, ಸಂಪ್‌ನ ಸುತ್ತಲೂ ಜನರ ಗೋಳಾಟ, ಏನಾಗಿದೆ ಅಂತ ನೋಡುವಷ್ಟರಲ್ಲಿ ಆ ಸಂಪ್ ನಲ್ಲಿ ಎಳೆಯ ಕಂದ (girl child) ಉಸಿರು ನಿಲ್ಲಿಸಿಬಿಟ್ಟಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಬಾಗಲಗುಂಟೆ (bagalagunte) ಪೊಲೀಸ್ ಠಾಣ ವ್ಯಾಪ್ತಿಯ ಮಲ್ಲಸಂದ್ರದಲ್ಲಿ (mallasandra).

ಹೌದು ಲೋಕವನ್ನ ಅರಿಯುವ ಮುನ್ನವೇ ಲೋಕ‌ ತ್ಯಾಗ ಮಾಡಿರೋದು ಈ ಮುದ್ದಾದ ಪುಟ್ಟ ಬಾಲಕಿ ಕೇವಲ ಐದು ವರ್ಷದ ಶಾಹಿದ ಭಾನು. ನಸ್ತೀನ ಭಾನು ಹಾಗೂ ಸೈಯದ್ ಹುಸೇನ್ ದಂಪತಿಯ ಪುಟ್ಟ ಮಗಳು ಶಹೀದಾ ಬಾನು ಮನೆಯ ಮುಂದೆ ಇರುವ ಸಂಪ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.

ಶಹೀದ ಭಾನು ಮನೆಯ ಬಳಿ ಆಟ ಆಡುತ್ತಿದ್ದಳಂತೆ, ಇವರ ಬಿಲ್ಡಿಂಗ್‌ ಪಕ್ಕದಲ್ಲೇ ಇರುವ ಬಿಹಾರಿ ಮೂಲದ ಯುವಕರು ನೀರು ತೆಗೆದುಕೊಳ್ಳುವ ಸಲುವಾಗಿ ಸಂಪ್‌ನ ಮುಚ್ಚಳ ತೆಗೆದಿದ್ದಾರೆ. ಆದರೆ ಅದನ್ನು ಮತ್ತೆ ಮುಚ್ಚದೇ ಹಾಗೆಯೇ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಸಿದ್ದರಾಮಯ್ಯ ಕಾಲದಲ್ಲೇ ಇವೆಲ್ಲ ನಡೆಯೋದು ಎಂದ ಆರ್ ಅಶೋಕ್

ಈ ವೇಳೆ ಅಲ್ಲೆ ಆಡುತ್ತಿದ್ದ ಶಹೀದ ಭಾನು ತನಗರಿವಿಲ್ಲದೇ ಸಂಪ್‌ಗೆ ಬಿದ್ದಿದ್ದಾಳೆ. ಆದರೆ ಇತ್ತ, ಶಾಹಿದ ಭಾನು ಅಜ್ಜಿ ಫಾಮಿದಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂ‌ಪ್ ಬಳಿ ನೋಡಿದಾಗ ಮಗುವಿನ ಚಪ್ಪಲಿ ಸಂಪ್ ಬಳಿ ಕಾಣಿಸಿದೆ. ಪಕ್ಕದ ಮನೆಯ ಚಂದ್ರಶೇಖರ್‌ಗೆ ವಿಷಯ ತಿಳಿಸಿದಾಗ ಆತ ಬಂದು ನೋಡಿದಾಗ ಮಗು ಸಂಪ್‌ಗೆ ಬಿದ್ದಿರುವುದು ಗೊತ್ತಾಗಿದೆ.

ಘಟನೆಯ ಬಳಿಕ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ಮೃತದೃಹ ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮಗು ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆಯ ಬಳಿಕ ಬಿಹಾರ್ ಮೂಲದ ಹುಡುಗರು ಭಯದಿಂದಾಗಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ