AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Airport: ಅಬ್ಬಬ್ಬಾ..! ಚಿನ್ನವನ್ನೇ ಪಾದುಕೆ ಮಾಡಿಕೊಂಡು ಸಾಗಿಸುತ್ತಿದ್ದವ ಬೆಂಗಳೂರು ಏರ್ಪೋಟ್​ನಲ್ಲಿ ಸಿಕ್ಕಿಬಿದ್ದ

ಬ್ಯಾಂಕಾಕ್​ನಿಂದ ಬಂದ ವ್ಯಕ್ತಿ 502 ಗ್ರಾಂ ತೂಕದ ಎರಡು ಚಿನ್ನದ ತುಂಡುಗಳನ್ನ ಎರಡು ಕಾಲಿನ ಪಾದದಲ್ಲಿಟ್ಟು ಟೇಪ್ ಸುತ್ತಿದ್ದ. ಏರ್ಪೋಟ್​ನಲ್ಲಿ ಇಳಿದ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಚಿನ್ನ ಅಡಗಿಸಿಟ್ಟಿರುವುದು ಬಯಲಾಗಿದೆ.

Bangalore Airport: ಅಬ್ಬಬ್ಬಾ..! ಚಿನ್ನವನ್ನೇ ಪಾದುಕೆ ಮಾಡಿಕೊಂಡು ಸಾಗಿಸುತ್ತಿದ್ದವ ಬೆಂಗಳೂರು ಏರ್ಪೋಟ್​ನಲ್ಲಿ ಸಿಕ್ಕಿಬಿದ್ದ
ಅಧಿಕಾರಿಗಳು ವಶಕ್ಕೆ ಪಡೆದ ಚಿನ್ನ
ಆಯೇಷಾ ಬಾನು
|

Updated on: May 23, 2023 | 3:31 PM

Share

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport Bengaluru) ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ವಿದೇಶದಿಂದ ಅಕ್ರಮವಾಗಿ ಕದ್ದು ಮುಚ್ಚಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ(Gold seize). ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕ ತನ್ನ ಪಾದದಲ್ಲಿ ಚಿನ್ನದ ತುಂಡುಗಳನ್ನಿಟ್ಟು ಟೇಪ್ ಹಾಕಿಕೊಂಡಿದ್ದ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಟೇಪ್ ಹಾಕಿದ್ದ. ಆದ್ರೆ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್​ನಿಂದ ಬಂದ ವ್ಯಕ್ತಿ 502 ಗ್ರಾಂ ತೂಕದ ಎರಡು ಚಿನ್ನದ ತುಂಡುಗಳನ್ನ ಎರಡು ಕಾಲಿನ ಪಾದದಲ್ಲಿಟ್ಟು ಟೇಪ್ ಸುತ್ತಿದ್ದ. ಏರ್ಪೋಟ್​ನಲ್ಲಿ ಇಳಿದ ವೇಳೆ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಚಿನ್ನ ಅಡಗಿಸಿಟ್ಟಿರುವುದು ಬಯಲಾಗಿದೆ. ಮತ್ತೊಬ್ಬ ಪ್ರಯಾಣಿಕ ತನ್ನ ಹ್ಯಾಂಡ್ ಬ್ಯಾಗ್​ನಲ್ಲಿಟ್ಟುಕೊಂಡು ಚಿನ್ನದ ಸರ ಸಾಗಾಟ ಮಾಡ್ತಿದ್ದ. ಆತನಿಂದನೂ 197 ಗ್ರಾಂ‌ ತೂಕದ ಚಿನ್ನದ ಸರವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪ್ರಯಾಣಿಕರಿಂದ ಒಟ್ಟು 700 ಗ್ರಾಂ ತೂಕದ 43 ಲಕ್ಷ 65 ಸಾವಿರದ‌ 291 ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬಿಸಿಲಿನ ಪ್ರತಾಪಕ್ಕೆ ಕರಾವಳಿಯಲ್ಲಿ ಬತ್ತಿದ ಜಲಮೂಲ; ನದಿಯ ಆಳದಲ್ಲಿದ್ದ ಕೌತುಕಗಳ ದರ್ಶನ, ನೋಡಲು ಮುಗಿಬಿದ್ದ ಜನ

ಮೈಸೂರಿನಲ್ಲಿ 50 ಮೊಬೈಲ್​ ಜಪ್ತಿ

ಮೈಸೂರು ಜಿಲ್ಲೆಯಲ್ಲಿ ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ಗಳನ್ನು​ ಜಪ್ತಿ ಮಾಡಲಾಗಿದೆ. ಹಾಗೂ 5 ಲಕ್ಷ ರೂ. ಮೌಲ್ಯದ 30 ಮೊಬೈಲ್​ಗಳನ್ನು​ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಮಾಹಿತಿ ನೀಡಿದ್ದಾರೆ. ಮೊಬೈಲ್​ ಮಾಲೀಕರು CEIR ಪೋರ್ಟ್ ಮೂಲಕ ದೂರು ದಾಖಲಿಸಿದ್ದರು. ಕೇರಳ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಮೊಬೈಲ್​ ಜಪ್ತಿ ಮಾಡಿದ್ದೇವೆ. ಮೇ 18ರಂದು ಡ್ರಾಪ್ ಕೇಳುವ ನೆಪದಲ್ಲಿ ಆಟೋ ಚಾಲಕನನ್ನು ಸುಲಿಗೆ ಮಾಡಿದ್ದವರ ಪೈಕಿ ಒಬ್ಬನ ಬಂಧನ ಆಗಿದೆ. ಚಾಕು ತೋರಿಸಿ ಆಟೋ, ಮೊಬೈಲ್, 2 ಸಾವಿರ ನಗದು ದರೋಡೆ ಮಾಡಲಾಗಿತ್ತು. ವರುಣ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕ ಪ್ರಕರಣ ದಾಖಲಿಸಿದ್ದ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಮಾಹಿತಿ ನೀಡಿದ್ದಾರೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!