AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಚೇತನರಿಗಾಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ

ಅವರು ವಿಶೇಷಚೇತನರು, ಎಲ್ಲರಂತೆ ಎಲ್ಲ ಅಂಗಾಂಗಳು ಸದೃಢವಾಗಿಲ್ಲದಿದರೂ ಯಾರಿಗೇನು ಕಡಿಮೆ ಇಲ್ಲ ಅನ್ನೋ ಹಾಗೆ ಬದುಕುತ್ತಿದ್ದಾರೆ. ಅಂಗವೈಖಲ್ಯ ಅಂತ ಬದುಕು ಮುಗಿದು ಹೋಯ್ತು ಅಂತ ಕುಗ್ಗಿ ಹೋಗಿ ಮನೆಯಲ್ಲೇ ಕೂತಿರೋವರಿಗೆ ಇವರೇ ಪ್ರೇರಣೆಯಾಗಿ ನಿಂತಿದ್ದಾರೆ.‘

ವಿಶೇಷ ಚೇತನರಿಗಾಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ
ವಿಶೇಷ ಚೇತನರಾಗಿಗಿಯೇ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆ ಆರಂಭ
TV9 Web
| Edited By: |

Updated on:Dec 04, 2022 | 5:56 PM

Share

‌ದೇವನಹಳ್ಳಿ: ಅಂಗವೈಕಲ್ಯ ಆದರೆ ಸಾಕು ಮನೆಯಲ್ಲೇ ಬದುಕು ಮುಗಿದು ಹೋಗುತ್ತದೆ ಅಂತ ಕುಗ್ಗಿ ಹೋಗೋವರೆ ಬಹುತೇಕರು‌. ನಾಲ್ಕು ಗೋಡೆಗಳ ಮಧ್ಯೆಯೇ ನಮ್ಮ ಜೀವನ ಕಳೆದು ಹೋಗುತ್ತದೆ ಅಂತ ನೊಂದು ನೋವುಂಡುತ್ತಾ ಕಾಲ ಕಳೆಯುತ್ತಾರೆ. ಆದರೆ ಅಂತಹವರಿಗೆ ಮಾದರಿಯೇ ಈ ಮಿಟ್ಟಿ ಕೆಫೆಯ (Mitti Cafe) ವಿಶೇಷಚೇತನರು. ವಿಶ್ವವಿಶೇಷ ಚೇತನರ ದಿನ (International Day of Persons with Disabilities) (ಡಿಸೆಂಬರ್ 3)ದ ಅಂಗವಾಗಿ ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳ ಆರಂಭವಾಗಿದೆ. ಕಾಫಿ, ಟೀ, ಚಾಟ್ಸ್, ಬರ್ಗರ್, ಪಿಜ್ಜಾ ಸೇರಿದಂತೆ ತರಹೇವಾರಿ ತಿನಿಸುಗಳನ್ನ ತಯಾರಿ ಮಾಡುವುದರಿಂದ ಆರಂಭಿಸಿ ಸರ್ವ್ ಮಾಡೋದು ಸಹ ವಿಶೇಷಚೇತನರೇ‌. ಅಡುಗೆ ಕೆಲಸ ಹಾಗೂ ಕ್ಯಾಷಿಯರ್ ಕೆಲಸ ಮಾಡುವುದು ಕೂಡ ಅವರೇ. ಅಂಗವೈಕಲ್ಯದಿಂದ ನಮ್ಮ ಬದುಕು ಇಷ್ಟೇ ಅಂತ ನೊಂದು ಬೆಂದು ಹೋಗಿದ್ದ ಜೀವಗಳಿಗೆ ಮಿಟ್ಟಿ ಕೆಫೆ ಹೊಸ ಪ್ರಪಂಚವನ್ನ ಸೃಷ್ಟಿ ಮಾಡಿ ಬದುಕು ರೂಪಸಿದ್ದು ಅವರ ಖುಷಿ ವರ್ಣಿಸಲು ಪದಗಳೇ ಸಾಲದು. ಅವರ ಖುಷಿ ಆತ್ಮವಿಶ್ವಾಸಕ್ಕೆ ಸಾಟಿಯೇ ಯಾರೂ ಇಲ್ಲ.

ಮಿಟ್ಟಿ ಕೆಫೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆ. ನನ್ನ ಜೀವನ ಸಂಪೂರ್ಣ ಬದಲಾಗಿದೆ. ಮೊದಲು ನನಗೆ ಒಂದು ಕಪ್ ಕಾಫಿ ಕೈಯಲ್ಲಿ ಹಿಡಿಯಲು ಕಷ್ಟವಾಗುತ್ತಿತ್ತು. ನಾನು ಕೆಲಸ ಮಾಡುತ್ತೇನೆ ಅಂತ ನನಗೆ ಭರವಸೆಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನನ್ನೊಳಗೂ ಒಂದು ಶಕ್ತಿ ಇದೆ ಅಂತ ತೋರಿಸಿಕೊಟ್ಟಿದ್ದು ಮಿಟ್ಟಿ ಕೆಫೆ ಎಂದು ವಿಶೇಷಚೇತನರ ಮಿಟ್ಟಿ ಕೆಫೆ ಕ್ಯಾಷಿಯರ್  ಕೀರ್ತಿ ತಮ್ಮ ಅಭಿಪ್ರಾಯವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಬಂತು ಲಸಿಕೆ: ಶಾಲೆಗಳಲ್ಲಿ ಲಸಿಕಾಕರಣದ ಬಗ್ಗೆ ಸಚಿವ ಸುಧಾಕರ್ ಮಾಹಿತಿ

ಇಂತಹ ವಿಶೇಷಚೇತನರಾಗಿಯೇ ಈ ಮಿಟ್ಟಿ ಕೆಫೆ ಕಾನ್ಸೆಫ್ಟ್ ಮಾಡಿರುವುದು ಕೊಲ್ಕತ್ತಾ ಮೂಲದ ಅಲಿನಾ ಎಂಬ ಯುವತಿ. ಕಾಲೇಜು ದಿನಗಳಿಂದಲೇ ವಿಶೇಷ ಚೇತನರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅಲಿನಾ ವಿಶೇಷಚೇತನರಾಗಿಗಿಯೇ ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು, ಹುಬ್ಬಳ್ಳಿ ಸೇರಿ ಇದುವರೆಗೂ 25 ಮಿಟ್ಟಿ ಕೆಫೆಗಳನ್ನ ಆರಂಭಿಸಿದ್ದಾರೆ. ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಹೊಸ ಮಿಟ್ಟಿ ಕೆಫೆಗಳನ್ನ ಆರಂಭಿಸಿದ್ದಾರೆ.

ದೇಶದ ನಾನಾ ಮೂಲೆಗಳಲ್ಲಿ 25 ಮಿಟ್ಟಿ ಕೆಫೆಗಳಲ್ಲಿ 250ಕ್ಕೂ ಹೆಚ್ಚು ಮಂದಿ ವಿಶೇಷಚೇತನರು ಕೆಲಸ ಮಾಡುತ್ತಿದ್ದಾರೆ. ಎನ್​ಜಿಒ ಸಂಸ್ಥೆಗಳು, ಸ್ವಯಂಪ್ರೇರಿತ ಉದ್ಯೋಗ ಹರಸಿ ಬರುವ ವಿಶೇಷಚೇತನರು ಸೇರಿದಂತೆ ರಸ್ತೆ ಬದಿ ಅಸಹಾಯಕರಾಗಿ ಕಾಣುವ ವಿಶೇಷಚೇತನರನ್ನ ಕರೆತಂದು ಅವರಿಗೆ ಒಂದೆರೆಡು ತಿಂಗಳ ಕಾಲ‌ ವಿಶೇಷ ತರಬೇತಿ ನೀಡಿ ಕೆಲಸ ಕೊಡಲಾಗುತ್ತದೆ. ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ. ಮನೆ, ಕೆಲಸಕ್ಕೆ ಪಿಕ್ ಅಫ್ ಅಂಡ್ ಡ್ರಾಪ್ ಸೌಲಭ್ಯಗಳು, ಸೇರಿದಂತೆ ಭಡ್ತಿಗಳು ಸಹ ಈ ಕೆಲಸದಲ್ಲಿರಲಿವೆ. ಎಲ್ಲದಕ್ಕೂ ಹೆಚ್ಚಾಗಿ ವಿಶೇಷಚೇತನರಿಗೊಂದು ವಿಶೇಷ ಗೌರವ ಸಿಗಲಿದೆ. ಇಲ್ಲಿ ವಿಶೇಷ ಚೇತನರಿಗೆ ಐಡೆಂಟಿಟಿ ಸಿಗಲಿದ್ದು ಯಾರ ಹಂಗು ಇಲ್ಲದೆ ಸ್ವಾಭಿಮಾನಿಗಳಂತೆ ಸಂತೋಷದ ಬದುಕು ಸಾಗಿಸುತ್ತಿದ್ದಾರೆ.

ಕಣ್ಣು ಕಾಣದ ಕಿವಿ ಕೇಳದ ಕಾಲು ಕೈ ಇರದ ಸಂಪೂರ್ಣವಾಗಿ ಮಾತನಾಡಲು ಸಹ ಆಗದ ಮಾನಸಿಕವಾಗಿ ಸದೃಢವಾಗಿರದವನ್ನ ಸಹ ಕೆಲಸ ಮಾಡುವಂತಹ ಸಮರ್ಥರನ್ನಾಗಿ ಮಾಡಿ ಮಿಟ್ಟಿ ಕೆಫೆಯಲ್ಲಿ ಕೆಲಸ ಮಾಡುವಂತೆ ಮಾಡಲಾಗುತ್ತಿದೆ. ಇದು ಅವರಿಗೆ ಕೆಲಸ ಕೋಡುವ ಉದ್ದೇಶ ಅಲ್ಲ. ಅವರಿಗೊಂದು ಸಮಾಜದಲ್ಲಿ ಗೌರವ ಕೋಡಿಸುವುದು, ಎಲ್ಲರಂತೆ ಸಮಾನರಾಗಿ ಅವರನ್ನ ಕಾಣಬೇಕು, ಅವರು ಸಹ ಸಂತೋಷದಿಂದ ಸಾರ್ಥಕತೆಯ ಜೀವನ ನಡೆಸಬೇಕು ಎಂಬ ಮಹಾದಾಸೆ ಈ ಮಿಟ್ಟಿ ಕೆಫೆ ಸಂಸ್ಥಾಪಕಿ ಅಲಿನಾ ಅಶಯ‌‌ ಅವರದ್ದಾಗಿದೆ. ಏನೇ ಅಗಲಿ ಎಲ್ಲವೂ ಇದ್ದು ಕೈಲಾಗದವರಂತೆ ಉದ್ಯೋಗ ಇಲ್ಲ ಅಂತ ಕೈ ಕಟ್ಟಿ ಕುಳಿತಿರುವ ಯುವ ಸಮುದಾಯ ಸಮಾಜಕ್ಕೆ ಇವರು ಸ್ಪೂರ್ತಿಯಾಗಿ ನಿಂತಿದ್ದಾರೆ.

ವರದಿ: ನವೀನ್, ಟಿವಿ9 ದೇವನಹಳ್ಳಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Sun, 4 December 22

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?