ಬೆಂಗಳೂರು ಗ್ರಾಮಾಂತರ: ಅತ್ತಿಗೆ ಕಿರುಕುಳಕ್ಕೆ ಬೇಸತ್ತ ಮೈದುನ ನೇಣುಬಿಗಿದುಕೊಂಡು ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 18, 2024 | 5:18 PM

ನೆಲಮಂಗಲದ ಅರಿಶಿನಕುಂಟೆಯಲ್ಲಿ(Arasinakunte) ಅತ್ತಿಗೆಯ ಕಿರುಕುಳಕ್ಕೆ ಬೇಸತ್ತು ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೈದುನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಎಂಬುವವರ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ: ಅತ್ತಿಗೆ ಕಿರುಕುಳಕ್ಕೆ ಬೇಸತ್ತ ಮೈದುನ ನೇಣುಬಿಗಿದುಕೊಂಡು ಆತ್ಮಹತ್ಯೆ
ಮೃತ ರ್ದುದೈವಿ
Follow us on

ಬೆಂಗಳೂರು ಗ್ರಾಮಾಂತರ, ಏ.18: ಅತ್ತಿಗೆಯ ಕಿರುಕುಳಕ್ಕೆ ಬೇಸತ್ತು ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಮೈದುನ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ಅರಿಶಿನಕುಂಟೆಯಲ್ಲಿ(Arasinakunte) ನಡೆದಿದೆ. ನಾಗರಾಜು(35) ಮೃತ ರ್ದುದೈವಿ. ಇನ್ನು ಘಟನೆ ಕುರಿತು ಸೊಸೆ ಭಾಗ್ಯಮ್ಮ ವಿರುದ್ಧ ಮೃತನ ತಂದೆ-ತಾಯಿ ನೆಲಮಂಗಲ ಟೌನ್ ಪೊಲೀಸ್‌ ಠಾಣೆಗೆ ಕಿರುಕುಳದ ದೂರು ನೀಡಿದ್ದಾರೆ.

ಇನ್ನು 2 ವರ್ಷದ ಹಿಂದೆ ಅರಿಶಿನಕುಂಟೆಯಲ್ಲಿ ಮನೆ ಕಟ್ಟಿಸುವಾಗ ಮೇಸ್ತ್ರಿಯಾಗಿ ಬಂದಿದ್ದ ದಿಲೀಪ್​ ಜೊತೆ ಸಲುಗೆಯಿಂದ ಇದ್ದ ಅತ್ತಿಗೆಯನ್ನ ಮೃತ ನಾಗರಾಜ್ ಪ್ರಶ್ನೆ ಮಾಡಿದ್ದ. ಈ ವಿಷಯವಾಗಿ ಮನೆ ಬಿಟ್ಟು ಹೋಗುವಂತೆ ದಂಡ ಪಿಂಡ ಎಂದು ಭಾಗ್ಯಮ್ಮ ಹೀಯಾಳಿಸಿದ್ದಳು. ಇದರಿಂದ ಮನನೊಂದ ನಾಗರಾಜು, ವೇಲ್ ಬಳಸಿ ರೂಂನ ಪ್ಯಾನ್​ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಕಾರಣರಾದ ಭಾಗ್ಯಮ್ಮ ಹಾಗೂ ದಿಲೀಪ್ ಮೇಲೆ ದೂರು ದಾಖಲು ಮಾಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಮಕ್ಕಳಾಗಿಲ್ಲ ಎಂದು ಕಿರುಕುಳ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ಕರಡಿ ದಾಳಿಗೊಳಗಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವು

ಕೊಪ್ಪಳ: ಕೊಪ್ಪಳದಲ್ಲಿ ಕರಡಿ ದಾಳಿಗೊಳಗಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚೆನ್ನಪ್ಪ ಮಡಿವಾಳರ್(74) ಕೊನೆಯುಸಿರೆಳೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರದಲ್ಲಿ ಕರಡಿ ದಾಳಿ ಮಾಡಿತ್ತು. ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ್ದ ಕರಡಿ ಸೆರೆಹಿಡಿದಿದ್ದರು. ಈ ಹಿಂದೆ ತಪ್ಪಿಸಿಕೊಂಡು ಬಂದಿದ್ದ ಕರಡಿ ವೃದ್ಧ ಚೆನ್ನಪ್ಪ ಮೇಲೆ ದಾಳಿ ಮಾಡಿತ್ತು. ಗಾಯಾಳು ಚೆನ್ನಪ್ಪ ಮಡಿವಾಳರ್​ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.ಇಂದು ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Thu, 18 April 24