ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ

ನೆಲಮಂಗಲದ ರಾಯನ್ ನಗರದ ಮಹಿಳೆ ಲಾವಣ್ಯ ಎಂಬುವವರು ಫೇಸ್ ಬುಕ್​ನಲ್ಲಿ ಹಳೇ ಕಾಯಿನ್(coin) ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಬಂದ ಜಾಹೀರಾತು ನಂಬಿ ಆರೋಪಿಗಳ ಅಕೌಂಟ್​ಗೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ. ಹಣ ಹಾಕಿ ಮೋಸ(fraud) ಹೋಗಿದ್ದಾರೆ.

ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ
ಹಳೇ ಕಾಯಿನ್​ಗೆ ಕೋಟ್ಯಾಂತರ ರೂ. ಆಮಿಷ; ಫೇಸ್ ಬುಕ್​ನಲ್ಲಿ ಜಾಹೀರಾತು ನಂಬಿ ಹಣ ಕಳ್ಕೊಂಡ ಮಹಿಳೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Apr 27, 2024 | 7:42 PM

ಬೆಂಗಳೂರು ಗ್ರಾಮಾಂತರ, ಏ.27: ಫೇಸ್ ಬುಕ್​ನಲ್ಲಿ ಹಳೇ ಕಾಯಿನ್(coin) ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನಂಬಿ ಆರೋಪಿಗಳ ಅಕೌಂಟ್​ಗೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ. ಹಣ ಹಾಕಿ ನೆಲಮಂಗಲದ ರಾಯನ್ ನಗರದ ಮಹಿಳೆ ಲಾವಣ್ಯ ಎಂಬುವವರು ಮೋಸ(fraud) ಹೋಗಿದ್ದಾರೆ. ತಮ್ಮಲ್ಲಿದ್ದ 5ಪೈಸೆ, 10ಪೈಸೆ ನಾಣ್ಯಗಳ ಪೋಟೋ ಹಾಕಿದ್ದ ಮಹಿಳೆ, ಬಳಿಕ ಕಂಪನಿಯ ಅಕೌಂಟಿಂಗ್ ಪ್ರೋಸೆಸ್ ಎಂದು ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನಲೆ ಸೆಕ್ಷನ್​ 66(C), 66(D)IT ACT 419, 420, ರೀತ್ಯಾ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ 799 ಗ್ರಾಂ ಚಿನ್ನ ಜಪ್ತಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಪ್ಯಾಕ್ಸ್ ಮೂಲಕ ಬಂದ ಪೇಸ್ಟ್ ರೂಪದ 55 ಲಕ್ಷ ರೂಪಾಯಿ ಮೌಲ್ಯದ 799 ಗ್ರಾಂ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೇಸ್ಟ್​​ ರೂಪದಲ್ಲಿ ಸಿಂಗಾಪುರದಿಂದ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟು ಸಾಗಾಟ ಮಾಡಿದ್ದಾರೆ.ಈ ವೇಳೆ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಓರ್ವ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಸೈಬರ್ ವಂಚನೆ: ರೈತರಿಗೆ ಮೋಸ

ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ಹಣ ಪತ್ತೆ

ಕಲಬುರಗಿ: ನಗರದ ರೈಲ್ವೆ ನಿಲ್ದಾಣದ ಬಳಿ ಮಾಜಿ ಮೇಯರ್​ಗೆ ಸೇರಿದ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದೆ. ಕಾರಿನಲ್ಲಿ ಹಣ ಸಾಗಿಸುವಾಗ ಐಟಿ ಅಧಿಕಾರಿಗಳ ರೇಡ್ ಮಾಡಿದ್ದು, ಕಾಂಗ್ರೆಸ್ ಮಾಜಿ ಮೇಯರ್ ಸೇರಿದ ಕಾರನ್ನು ವಶಕ್ಕೆ ಪಡೆದು ಕಂದಾಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Sat, 27 April 24

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us