AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ನಲ್ಲಿ ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್; ಕಿರಿಕಿರಿಗೆ ಬೇಸತ್ತ ಇತರೆ ಸವಾರರು

ಲಕ್ಷಗಳಿಂದ ಕೋಟಿ ಬೆಲೆ ಬಾಳುವ ಬೈಕ್​ಗಳು ರಸ್ತೆಯಲ್ಲಿ ಕಾಣುವುದಕ್ಕಿಂತ ಶ್ರೀಮಂತರ ಮನೆಗಳಲ್ಲಿ ಕಾಣಿಸೋದೆ ಹೆಚ್ಚು. ಆದ್ರೆ, ಇಲ್ಲೊಂದು ಕಡೆ ಮಾತ್ರ ವೀಕೆಂಡ್ ಬಂತು ಅಂದರೆ ಸಾಕು ದುಬಾರಿ ಬೈಕ್​ಗಳದ್ದೆ ಕಾರುಬಾರು, ಈ ಬೆಲೆ ಬಾಳುವ ಬೈಕ್​ಗಳ ವೀಕ್ಷಣೆ ಒಂದು ಕಡೆ ಖುಷಿ ನೀಡಿದ್ರೆ, ಅದೇ ಕಾಸ್ಟ್ಲಿ ಬೈಕ್ಗಳ ಹುಚ್ಚಾಟ ಇದೀಗ ಇತರ ಸಾವರರ ಆತಂಕವನ್ನ ಹೆಚ್ಚಾಗುವಂತೆ ಮಾಡಿದೆ.

ವೀಕೆಂಡ್​ನಲ್ಲಿ ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್; ಕಿರಿಕಿರಿಗೆ ಬೇಸತ್ತ ಇತರೆ ಸವಾರರು
ಏರ್​ಪೋರ್ಟ್ ರಸ್ತೆಯಲ್ಲಿ ಬೆಲೆ ಬಾಳುವ ಬೈಕ್​ಗಳ ಜೊತೆ ಯುವಕರ ರೇಸ್
ನವೀನ್ ಕುಮಾರ್ ಟಿ
| Edited By: |

Updated on: Aug 25, 2024 | 7:38 PM

Share

ಬೆಂಗಳೂರು ಗ್ರಾಮಾಂತರ, ಆ.25: ಬೆಳ್ಳಂ ಬೆಳಗ್ಗೆ ಟೆಕ್ಕಿಗಳು, ಯುವಕ-ಯುವತಿಯರು ಸೌಂಡ್ ಮಾಡುತ್ತಾ ಲಕ್ಷ ಲಕ್ಷ ಬೆಲೆ ಬಾಳುವ ಬೈಕ್​ಗಳನ್ನು ತೆಗೆದುಕೊಂಡು ಹೆದ್ದಾರಿಯಲ್ಲಿ ಶರವೇಗದಲ್ಲಿ ಹೋಗುತ್ತಿದ್ದರೆ, ಇತ್ತ ಸ್ಥಳೀಯರು ಬೈಕ್​ಗಳ ಹಾವಳಿಗೆ ಕಂಗಾಲಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೌದು, ಬೆಂಗಳೂರು ಗ್ರಾಮಾಂತರ(Bangalore Rural) ಜಿಲ್ಲೆಯ ದೇವನಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿರುವ ಬೆಂಗಳೂರು ಹೈದರಾಬಾದ್ ಮತ್ತು ಹೊಸಕೋಟೆ ದಾಬಸ್ ಪೇಟೆ ರಾಷ್ಟ್ರಿಯಾ ಹೆದ್ದಾರಿ, ಇದೀಗ ಹೈ ಸ್ಪೀಡ್ ಬೈಕ್ ಸವಾರರಿಗೆ ರಹದಾರಿಯಾಗಿ ಮಾರ್ಪಟ್ಟಿದೆ.

ವೀಕೆಂಡ್​ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ

ಅದರಲ್ಲೂ ವೀಕೆಂಡ್ ಬಂತೆಂದರೆ ಸಾಕು ವಿವಿಧ ಬ್ರಾಂಡ್​ಗಳ ದುಬಾರಿ ಬೆಲೆ ಬಾಳುವ ಬೈಕ್​ಗಳಲ್ಲಿ ಸಿಲಿಕಾನ್ ಸಿಟಿಯಿಂದ ಹೆದ್ದಾರಿಗೆ ಎಂಟ್ರಿಕೊಡುತ್ತಿರುವ ಯುವಕ-ಯುವತಿಯರು ಗುಂಪು ಗುಂಪಾಗಿ ಬಂದು ಏರ್ಪೋಟ್ ರಸ್ತೆ ಮತ್ತು ಹೊಸಕೋಟೆ ರಸ್ತೆಯಲ್ಲಿ ರೇಸ್ ಮಾಡ್ತಿದ್ದಾರೆ. ಜೊತೆಗೆ ಬೆಳ್ಳಂ ಬೆಳಗ್ಗೆ ರೇಸ್ ಮಾಡಿಕೊಂಡು ಬಂದು ಕಾಫೀ, ಟೀ ಎಂದು ಹೆದ್ದಾರಿ ಬದಿಯಲ್ಲಿ ಬೈಕ್ ಸವಾರರು ಬೀಡು ಬಿಡ್ತಿದ್ದಾರೆ. ಹೀಗಾಗೆ ಕಾಸ್ಟ್ಲಿ ಬೈಕ್​​ಗಳನ್ನ ನೋಡಿ ಸೆಲ್ಪಿ ತೆಗೆದುಕೊಳ್ಳುವ ಖುಷಿಯಲ್ಲಿ ಇತರೆ ಬೈಕ್ ಸವಾರರು ಹೆದ್ದಾರಿಯಲ್ಲಿ ಬರ್ತಿದ್ದು, ಸಾಕಷ್ಟು ಅಪಘಾತಗಳು ವೀಕೆಂಡ್​ನಲ್ಲಿಯೇ ಗಣನೀಯವಾಗಿ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಠಾಣೆಗೆ ಮುತ್ತಿಗೆ ಹಾಕಿದ ಶಾಸಕನ​ ಮುಂದೆಯೇ ACP ಚಂದನ್ ಕುಮಾರ್ ಆಕ್ರೋಶ

ಕಿಡಿಕಾರಿದ ಸಾರ್ವಜನಿಕರು

ಮುಂಜಾನೆ ನಂದಿಬೆಟ್ಟದಲ್ಲಿ ಸನ್ ರೈಸ್ ನೋಡಲು ಮತ್ತು ಮುಸ್ಸಂಜೆ ಚಿಕ್ಕಬಳ್ಳಾಪುರ ಬಳಿಯ ಈಶಾ ಪೌಂಡೇಶನ್​ನಲ್ಲಿ ಲೇಸರ್ ಶೋ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಬರ್ತಿದ್ದು, ಬೇಗ ಹೋಗುವ ಭರದಲ್ಲಿ ರೇಸ್​ಗೆ ಇಳಿದು ಅತಿವೇಗದಲ್ಲಿ ಸಂಚಾರ ಮಾಡ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಹೆದ್ದಾರಿಯಲ್ಲಿ ಸ್ವೀಡ್ ಮೀಟರ್​ಗಳನ್ನ ಸಂಚಾರಿ ಪೊಲೀಸರು ಹಾಕದ ಕಾರಣ ಪೊಲೀಸರ ಭಯವಿಲ್ಲದೆ ಬೇಕಾಬಿಟ್ಟಿ ಕಾರು, ಬೈಕ್ ಚಾಲನೆ ಮಾಡ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ದುಬಾರಿ ಬೈಕ್​ಗಳಿಂದ ಪಕ್ಕದಲ್ಲೆ ಬಂದು ಒಂದೇ ಸಮನೆ ಸೌಂಡ್ ಮಾಡುವ ಕಾರಣ, ಪಕ್ಕದ ಸವಾರರು ಭಯದಿಂದ ಕೆಳಕ್ಕೆ ಬೀಳ್ತಿದ್ದು, ಅತಿವೇಗದ ಬೈಕ್ ರೇಸ್​ಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆ ಸಣ್ಣ ಸಣ್ಣ ರಸ್ತೆಗಳು ಹೆದ್ದಾರಿಗಳಾಗಿ ಮೇಲ್ದರ್ಜೆ ವಾಹನ ಸವಾರರಿಗೆ ಬೈಕ್ ರೇಸ್​ಗಳಿಂದ ಕಿರಿಕಿರಿ ಹೆಚ್ಚಾಗ್ತಿದ್ದು, ಜೋಶ್​ಗಾಗಿ ಕೆಲ ಯುವಕ- ಯುವತಿಯರು ಮಾಡುವ ರೇಸ್, ಇತರರ ಜೀವಕ್ಕೆ ಹಾನಿಯಾಗ್ತಿರುವುದಂತು ಸುಳ್ಳಲ್ಲ. ಇನ್ನಾದರೂ ಪೊಲೀಸರು ಎಚ್ಚೆತ್ತು ಹೆದ್ದಾರಿಯಲ್ಲಿ ರೇಸ್ ಬೈಕ್ ಸವಾರರಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು