AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಕೆಲ ಖದೀಮರು ಬೋರ್ ವೆಲ್ ಮೋಟಾರ್​ಗಳನ್ನು ಕದ್ದುಪರಾರಿಯಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ. ನೀರಿಲ್ಲದೆ ಭಾರೀ ಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 13, 2024 | 10:31 AM

Share

ಬೆಂಗಳೂರು, ಮಾರ್ಚ್​.13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭ ಕಾಲದಲ್ಲೇ ಬೇಸಿಗೆಯ ಬೇಗುದಿ ಆರಂಭವಾಗಿದೆ. ನಗರದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ದಾಸರಹಳ್ಳಿ ವಿಧಾನಸಭಾಕ್ಷೇತ್ರದ ರಾಜಗೋಪಾಲನಗರ ಜನರಿಗೆ ಜಲಸಂಕಷ್ಟ ಎದುರಾಗಿದೆ. ನಲ್ಲಿ ನೀರು ಬರದೇ ನಿವಾಸಿಗಳು ಹೈರಾಣಾಗಿದ್ದಾರೆ. ಮತ್ತೊಂದೆಡೆ ಖದೀಮರು ಬೋರ್ ವೆಲ್ ಮೋಟಾರ್​ಗಳಿಗೆ ಕನ್ನ ಹಾಕುತ್ತಿದ್ದು ಜನರು ಕಂಗಾಲಾಗಿದ್ದಾರೆ. ರಾತ್ರೋ ರಾತ್ರಿ ಎಂಟ್ರಿ ಕೊಡುವ ಖದೀಮರು ಬೋರ್ ವೆಲ್ ಮೋಟಾರ್ ಕದ್ದೋಯ್ಯುತ್ತಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಬೋರ್ ವೆಲ್​ಗಳ ಮೋಟಾರ್ ಕಿತ್ತು, ಕಳ್ಳತನ ಮಾಡಿ ಪುಂಡರು ಆಟಾಟೋಪ ಮೆರೆಯುತ್ತಿದ್ದಾರೆ. ಬೋರ್ ವೆಲ್​ನಲ್ಲಿ ನೀರು ಇದ್ದರೂ ಮೋಟರ್​ ಇಲ್ಲದ ಕಾರಣ ಜನ ನೀರು ಬಳಸಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ಸರ್ಕಾರದಿಂದ ಇಟ್ಟಿರೋ ಟ್ಯಾಂಕ್ ನೀರು ಕೂಡ ಸಾಕಾಗುತ್ತಿಲ್ಲ. ಟ್ಯಾಂಕರ್ ನೀರು ಖರೀದಿಸಲು ಹಣ ಇಲ್ಲ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಂತರ್ಜಲಮಟ್ಟ ಕುಸಿತ ಹಿನ್ನಲೆ ಒಂದೆಡೆ ಸರ್ಕಾರವೇ ಬೋರ್ ವೆಲ್ ಕೊರೆಯದಂತೆ ನಿರ್ಬಂಧ ಹೇರಿದೆ. ಬೆಂಗಳೂರು ಜನತೆಗೆ ನೀರು ಪೂರೈಸಲು ಸರ್ಕಾರ ವಿಫಲವಾಗಿದ್ದು, ಮತ್ತೊಂದೆಡೆಗೆ ಸರ್ಕಾರದಿಂದ ನಗರದಲ್ಲಿ ನೀರಿಗಾಗಿ ಬೋರ್ ವೆಲ್‌ಗಳನ್ನ ಕೊರೆಸಲು ಮುಂದಾಗಿದ್ದು ಕೆಲವೊಂದೆಡೆಗೆ ನೀರು ಬಂದ್ರೆ ಇನ್ನೊಂದೆಡೆಗೆ ಸಾವಿರ ಅಡಿ ಬೋರ್ ವೆಲ್ ಕೊರೆದ್ರು ನೀರು ಬರದೇ ಹಣ ಪೊಲಾಗುತ್ತಿದೆ. ಇನ್ನೊಂದೆಡೆ ವೈಟ್ ಟ್ಯಾಪಿಂಗ್‌ನಿಂದ ಅಂತರ್ಜಲಮಟ್ಟಕ್ಕೆ ತೊಂದರೆ ಆಗುತ್ತಿದೆ ಹೀಗಾಗಿ ವೈಟ್ ಟ್ಯಾಪಿಂಗ್ ರಸ್ತೆ ತಗೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bengaluru Water Crisis: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಗ್ರಾಹಕರಿಗೆ ನೀರು ಸರಬರಾಜಿನಲ್ಲಿ ಶೇ 20 ಕಡಿತ

ಇನ್ನೂ ಈಗಾಗಲೇ ಬೆಂಗಳೂರಿನಲ್ಲಿ ಅಂತರ್ಜಲಮಟ್ಟ ಕುಸಿತ ಕಂಡಿದ್ದು, ಮತ್ತಷ್ಟು ಬೋರ್‌ವೆಲ್ ಕೊರೆಸುವುದರಿಂದ ಇನ್ನಷ್ಟು ಅಂತರ್ಜಲಮಟ್ಟ ಕುಸಿಯಲಿದೆ. ಸಾವಿರ ಅಡಿಯಿಂದ ಸಿಗುವ ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ ಸೇರಿದಂತೆ ವಿವಿಧ ಕೆಮಿಕಲ್‌ಯುಕ್ತ ಗಡಸು ನೀರು ಬರುತ್ತದೆ. ಆ ನೀರು ಅಷ್ಟು ಯೋಗ್ಯ ಅಲ್ಲ. ಕಾವೇರಿ ನೀರು ಎಷ್ಟು ಬೇಕು ಈ ಹಿಂದಿನಂತೆ ಬೆಂಗಳೂರು ನಗರಕ್ಕೆ ಜಲಮಂಡಳಿಯಿಂದ ಸರಬರಾಜು ಆಗುತ್ತಿದೆ. ನಗರದಲ್ಲಿ  ಬೋರ್‌ವೆಲ್ ನೀರು ಬಳಕೆಯಲ್ಲಿ ಇತ್ತು. ಆದರೆ ಅಂತರ್ಜಲಮಟ್ಟ ಕೊರತೆ ಕಾರಣದಿಂದ ಬತ್ತಿ ಹೋಗಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಹೊಸದಾಗಿ ಬೋರ್‌ವೆಲ್ ಕೊರೆಸುವ ದುಸ್ಸಾಹಸಕ್ಕೆ ಜಲ ಮಂಡಳಿ ಮುಂದಾಗಿದೆ. ಹೊಸ ಬೋರ್‌ವೆಲ್ ಕೊರೆಸಿದ್ರು ನೀರು ಸಿಗುತ್ತೆ ಅನ್ನೋ ಭರವಸೆ ಇಲ್ಲ. ಇದರ ಬದಲು ಈಗಾಗಲೇ ಬತ್ತಿ ಹೋದ ಬೋರ್‌ವೆಲ್ ‌ಗಳ ರಿಚಾರ್ಜ್ ಅವಶ್ಯಕವಾಗಿದೆ. ನಗರದಲ್ಲಿ 4 ಲಕ್ಷದಷ್ಟು ಖಾಸಗಿಯವರು ಕೊರೆಸಿರುವ ಬೋರ್‌ವೆಲ್‌ಗಳಿವೆ. ಇದನ್ನ ಹೊರತುಪಡಿಸಿ ಸರ್ಕಾರದಿಂದ ಕೊರೆಸಿರುವ 10 ಸಾವಿರಕ್ಕೂ ಅಧಿಕ ಬೋರ್‌ವೆಲ್ ಗಳಿವೆ ಒಂದು ಏರಿಯಾ ಆಯ್ಕೆ ಮಾಡಿಕೊಂಡು ತ್ಯಾಜ್ಯ ನೀರು ಎಸ್‌ಟಿ‌ಪಿ ಘಟಕ ಮೂಲಕ ಶುದ್ಧೀಕರಣವಾದ ನೀರನ್ನ ಬೋರ್ವೆಲ್‌ಗೆ ಬಿಡುವುದರಿಂದ ಇನ್ನೂಳಿದ ಬೋರ್ವೆಲ್ ಗಳು ರಿಚಾರ್ಜ್ ಆಗುತ್ತವೆ ಇದನ್ನ ಸರ್ಕಾರ ಮಾಡಬೇಕು ಅನ್ನೋದು ತಜ್ಞರ ಅಭಿಪ್ರಾಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್