AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಕೆಲ ಖದೀಮರು ಬೋರ್ ವೆಲ್ ಮೋಟಾರ್​ಗಳನ್ನು ಕದ್ದುಪರಾರಿಯಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ. ನೀರಿಲ್ಲದೆ ಭಾರೀ ಕಷ್ಟ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಒಂದೆಡೆ ನಲ್ಲಿ ನೀರು ಬರ್ತಿಲ್ಲ, ಮತ್ತೊಂದೆಡೆ ನೀರು ಬರುವ ಬೋರ್ ವೆಲ್ ಮೋಟಾರ್​ ಕದಿಯುತ್ತಿರುವ ಖದೀಮರು; ಜನ ಹೈರಾಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 13, 2024 | 10:31 AM

Share

ಬೆಂಗಳೂರು, ಮಾರ್ಚ್​.13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭ ಕಾಲದಲ್ಲೇ ಬೇಸಿಗೆಯ ಬೇಗುದಿ ಆರಂಭವಾಗಿದೆ. ನಗರದೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ದಾಸರಹಳ್ಳಿ ವಿಧಾನಸಭಾಕ್ಷೇತ್ರದ ರಾಜಗೋಪಾಲನಗರ ಜನರಿಗೆ ಜಲಸಂಕಷ್ಟ ಎದುರಾಗಿದೆ. ನಲ್ಲಿ ನೀರು ಬರದೇ ನಿವಾಸಿಗಳು ಹೈರಾಣಾಗಿದ್ದಾರೆ. ಮತ್ತೊಂದೆಡೆ ಖದೀಮರು ಬೋರ್ ವೆಲ್ ಮೋಟಾರ್​ಗಳಿಗೆ ಕನ್ನ ಹಾಕುತ್ತಿದ್ದು ಜನರು ಕಂಗಾಲಾಗಿದ್ದಾರೆ. ರಾತ್ರೋ ರಾತ್ರಿ ಎಂಟ್ರಿ ಕೊಡುವ ಖದೀಮರು ಬೋರ್ ವೆಲ್ ಮೋಟಾರ್ ಕದ್ದೋಯ್ಯುತ್ತಿದ್ದಾರೆ. ಏರಿಯಾದಲ್ಲಿರುವ ಸಿಸಿಟಿವಿ ಕ್ಯಾಮರಾಗಳು ವರ್ಕ್ ಆಗದೇ ಇರೋದು ಈ ಖದೀಮರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಬೋರ್ ವೆಲ್​ಗಳ ಮೋಟಾರ್ ಕಿತ್ತು, ಕಳ್ಳತನ ಮಾಡಿ ಪುಂಡರು ಆಟಾಟೋಪ ಮೆರೆಯುತ್ತಿದ್ದಾರೆ. ಬೋರ್ ವೆಲ್​ನಲ್ಲಿ ನೀರು ಇದ್ದರೂ ಮೋಟರ್​ ಇಲ್ಲದ ಕಾರಣ ಜನ ನೀರು ಬಳಸಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ಸರ್ಕಾರದಿಂದ ಇಟ್ಟಿರೋ ಟ್ಯಾಂಕ್ ನೀರು ಕೂಡ ಸಾಕಾಗುತ್ತಿಲ್ಲ. ಟ್ಯಾಂಕರ್ ನೀರು ಖರೀದಿಸಲು ಹಣ ಇಲ್ಲ. ನೀರಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಂತರ್ಜಲಮಟ್ಟ ಕುಸಿತ ಹಿನ್ನಲೆ ಒಂದೆಡೆ ಸರ್ಕಾರವೇ ಬೋರ್ ವೆಲ್ ಕೊರೆಯದಂತೆ ನಿರ್ಬಂಧ ಹೇರಿದೆ. ಬೆಂಗಳೂರು ಜನತೆಗೆ ನೀರು ಪೂರೈಸಲು ಸರ್ಕಾರ ವಿಫಲವಾಗಿದ್ದು, ಮತ್ತೊಂದೆಡೆಗೆ ಸರ್ಕಾರದಿಂದ ನಗರದಲ್ಲಿ ನೀರಿಗಾಗಿ ಬೋರ್ ವೆಲ್‌ಗಳನ್ನ ಕೊರೆಸಲು ಮುಂದಾಗಿದ್ದು ಕೆಲವೊಂದೆಡೆಗೆ ನೀರು ಬಂದ್ರೆ ಇನ್ನೊಂದೆಡೆಗೆ ಸಾವಿರ ಅಡಿ ಬೋರ್ ವೆಲ್ ಕೊರೆದ್ರು ನೀರು ಬರದೇ ಹಣ ಪೊಲಾಗುತ್ತಿದೆ. ಇನ್ನೊಂದೆಡೆ ವೈಟ್ ಟ್ಯಾಪಿಂಗ್‌ನಿಂದ ಅಂತರ್ಜಲಮಟ್ಟಕ್ಕೆ ತೊಂದರೆ ಆಗುತ್ತಿದೆ ಹೀಗಾಗಿ ವೈಟ್ ಟ್ಯಾಪಿಂಗ್ ರಸ್ತೆ ತಗೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bengaluru Water Crisis: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಗ್ರಾಹಕರಿಗೆ ನೀರು ಸರಬರಾಜಿನಲ್ಲಿ ಶೇ 20 ಕಡಿತ

ಇನ್ನೂ ಈಗಾಗಲೇ ಬೆಂಗಳೂರಿನಲ್ಲಿ ಅಂತರ್ಜಲಮಟ್ಟ ಕುಸಿತ ಕಂಡಿದ್ದು, ಮತ್ತಷ್ಟು ಬೋರ್‌ವೆಲ್ ಕೊರೆಸುವುದರಿಂದ ಇನ್ನಷ್ಟು ಅಂತರ್ಜಲಮಟ್ಟ ಕುಸಿಯಲಿದೆ. ಸಾವಿರ ಅಡಿಯಿಂದ ಸಿಗುವ ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ ಸೇರಿದಂತೆ ವಿವಿಧ ಕೆಮಿಕಲ್‌ಯುಕ್ತ ಗಡಸು ನೀರು ಬರುತ್ತದೆ. ಆ ನೀರು ಅಷ್ಟು ಯೋಗ್ಯ ಅಲ್ಲ. ಕಾವೇರಿ ನೀರು ಎಷ್ಟು ಬೇಕು ಈ ಹಿಂದಿನಂತೆ ಬೆಂಗಳೂರು ನಗರಕ್ಕೆ ಜಲಮಂಡಳಿಯಿಂದ ಸರಬರಾಜು ಆಗುತ್ತಿದೆ. ನಗರದಲ್ಲಿ  ಬೋರ್‌ವೆಲ್ ನೀರು ಬಳಕೆಯಲ್ಲಿ ಇತ್ತು. ಆದರೆ ಅಂತರ್ಜಲಮಟ್ಟ ಕೊರತೆ ಕಾರಣದಿಂದ ಬತ್ತಿ ಹೋಗಿದ್ದು, ನೀರಿನ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಹೊಸದಾಗಿ ಬೋರ್‌ವೆಲ್ ಕೊರೆಸುವ ದುಸ್ಸಾಹಸಕ್ಕೆ ಜಲ ಮಂಡಳಿ ಮುಂದಾಗಿದೆ. ಹೊಸ ಬೋರ್‌ವೆಲ್ ಕೊರೆಸಿದ್ರು ನೀರು ಸಿಗುತ್ತೆ ಅನ್ನೋ ಭರವಸೆ ಇಲ್ಲ. ಇದರ ಬದಲು ಈಗಾಗಲೇ ಬತ್ತಿ ಹೋದ ಬೋರ್‌ವೆಲ್ ‌ಗಳ ರಿಚಾರ್ಜ್ ಅವಶ್ಯಕವಾಗಿದೆ. ನಗರದಲ್ಲಿ 4 ಲಕ್ಷದಷ್ಟು ಖಾಸಗಿಯವರು ಕೊರೆಸಿರುವ ಬೋರ್‌ವೆಲ್‌ಗಳಿವೆ. ಇದನ್ನ ಹೊರತುಪಡಿಸಿ ಸರ್ಕಾರದಿಂದ ಕೊರೆಸಿರುವ 10 ಸಾವಿರಕ್ಕೂ ಅಧಿಕ ಬೋರ್‌ವೆಲ್ ಗಳಿವೆ ಒಂದು ಏರಿಯಾ ಆಯ್ಕೆ ಮಾಡಿಕೊಂಡು ತ್ಯಾಜ್ಯ ನೀರು ಎಸ್‌ಟಿ‌ಪಿ ಘಟಕ ಮೂಲಕ ಶುದ್ಧೀಕರಣವಾದ ನೀರನ್ನ ಬೋರ್ವೆಲ್‌ಗೆ ಬಿಡುವುದರಿಂದ ಇನ್ನೂಳಿದ ಬೋರ್ವೆಲ್ ಗಳು ರಿಚಾರ್ಜ್ ಆಗುತ್ತವೆ ಇದನ್ನ ಸರ್ಕಾರ ಮಾಡಬೇಕು ಅನ್ನೋದು ತಜ್ಞರ ಅಭಿಪ್ರಾಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?