ಜೈಲಿನಲ್ಲಿ ಇದ್ದರೂ ಆಕ್ಟೀವ್! ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ತನ್ನ ಶಿಷ್ಯಂದಿರ ಮೂಲಕ ಬೇರೆ ಬೇರೆ ಕೆಲಸಗಳಿಗೆ ರೌಡಿಶೀಟರ್​ಗಳು ಸ್ಕೆಚ್ ಹಾಕುತ್ತಿರುವುದು ತಿಳಿದುಬಂದಿದೆ.

ಜೈಲಿನಲ್ಲಿ ಇದ್ದರೂ ಆಕ್ಟೀವ್! ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್
ಪರಪ್ಪನ ಅಗ್ರಹಾರ ಜೈಲು
Edited By: sandhya thejappa

Updated on: Aug 17, 2021 | 2:39 PM

ಬೆಂಗಳೂರು: ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವ ಸಲುವಾಗಿ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಜೈಲಿನಲ್ಲಿದ್ದುಕೊಂಡೆ ಕೆಲ ರೌಡಿಶೀಟರ್​ಗಳು (Rowdy Sheeters) ಅಪರಾಧ ಕೆಲಸಗಳನ್ನು ಮಾಡುವುದು ಬೆಳಕಿಗೆ ಬಂದಿದೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ತನ್ನ ಶಿಷ್ಯಂದಿರ ಮೂಲಕ ಬೇರೆ ಬೇರೆ ಕೆಲಸಗಳಿಗೆ ರೌಡಿಶೀಟರ್​ಗಳು ಸ್ಕೆಚ್ ಹಾಕುತ್ತಿರುವುದು ತಿಳಿದುಬಂದಿದೆ. ಹೀಗಾಗಿ ರೌಡಿಸಂ ಮಟ್ಟ ಹಾಕಲು ಖಾಕಿ ಮುಂದಾಗಿದ್ದು, ಬೆಂಗಳೂರು ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ರೌಡಿಶೀಟರ್​ಗಳನ್ನ ಶಿಫ್ಟ್ ಮಾಡುತ್ತಿದ್ದಾರೆ.

ಜೈಲಿನಲ್ಲಿದ್ದು ಆಕ್ಟಿವ್ ಆಗಿದ್ದ 19 ರೌಡಿಶೀಟರ್​ಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬೇರೆ ಬೇರೆ ಜಿಲ್ಲೆಯ ಜೈಲುಗಳಿಗೆ ಸ್ಥಳಾಂತರ ಮಾಡಲು ಖಾಕಿ ನಿರ್ಧರಿಸಿದೆ. ಕಲಬುರಗಿ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ, ಬಳ್ಳಾರಿ ಜೈಲುಗಳಿಗೆ ರೌಡಿಶೀಟರ್​ಗಳನ್ನ ಸ್ಥಳಾಂತರ ಮಾಡಲಾಗುತ್ತಿದೆ.

ವಿಲ್ಸನ್ ಗಾರ್ಡನ್ ನಾಗ, ಪೂರ್ಣೇಶ, ಕಾರ್ಣಿಕ್ ರಾಜ್, ಕಮಲ್ನ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇನ್ನು ದಿನೇಶ್, ವಿಲ್ಸನ್ ಗಾರ್ಡನ್ ಶಿವ, ಪ್ರದೀಪ್ನನ್ನ ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಮಹಮ್ಮದ್ ಖಲೀಲುಲ್ಲ ಅಲಿಯಾಸ್ ಬಾಂಬೆ ಸಲೀಂ, ಸುನೀಲ್, ಅರುಣ್ನನ್ನು ಧಾರವಾಡ ಜೈಲಿಗೆ ಕಳುಹಿಸಲಾಗುತ್ತದೆ. ಶಿವಮೊಗ್ಗ ಜೈಲಿಗೆ ನವೀನ್ ಅಲಿಯಾಸ್ ಬಂಡೆ ನವೀನ್, ಅರುಣ್ ಎಂ, ಸತೀಶನನ್ನ ಶಿಫ್ಟ್ ಮಾಡಿಲಾಗುವುದು.

ಮೈಸೂರು ಜೈಲಿಗೆ ಕಾರ್ತಿಕ್, ಆನಂದ್, ವಿಜಯಪುರ ಜೈಲಿಗೆ ದೇವರಾಜ್, ಧನಶೇಖರ್ ಮತ್ತು ಬಳ್ಳಾರಿ ಜೈಲಿಗೆ ಜಾರ್ಜ್, ಶರವಣನನ್ನು ಶಿಫ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ

ತಾಲಿಬಾನ್ ಉಗ್ರರು ನನ್ನ ಕೊಂದರೂ ದೇವರ ಸೇವೆಯೆಂದು ಭಾವಿಸುವೆ; ಅಫ್ಘಾನ್ ತೊರೆಯಲೊಪ್ಪದ ಹಿಂದೂ ಅರ್ಚಕ

‘ತಾಲಿಬಾನ್​​ ಉಗ್ರರಿಗಾಗಿ ಕಾಯುತ್ತಿದ್ದೇನೆ..ಅವರು ಕೊಲ್ಲಲು ಬರುತ್ತಾರೆ‘; ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಅಸಹಾಯಕತೆ​​

(19 Rowdy Sheeters will be shifted to different districts from Bengaluru Parappana Agrahara Jail)

Web contact

TV9 Kannada

Read More
Follow Us