Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ

ನೀವು ಹೊಸ ಸಿಮ್​ ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಿರುವ ಘಟನೆ ನಡೆದಿದೆ.

Bengaluru: ಹೊಸ ಸಿಮ್ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಗೆ 2.5 ಲಕ್ಷ ಹಣ ವಂಚನೆ
ಹಣ ಕಳೆದುಕೊಂಡವರು
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2023 | 10:55 AM

ಬೆಂಗಳೂರು: ನೀವು ಹೊಸ ಸಿಮ್(​New Sim)ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆಯಲ್ಲಿರುವ ಹಣ ಮಾಯವಾಗಬಹುದು. ಹೌದು ಹೊಸ ಸಿಮ್​ ಆ್ಯಕ್ಟಿವೇಷನ್ ವೇಳೆ ಒಟಿಪಿ ಪಡೆದು ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 2.5 ಲಕ್ಷ ಹಣ ವಂಚನೆ ಮಾಡಿದ ಘಟನೆ ನಗರದ ಚಿಕ್ಕಸಂದ್ರದಲ್ಲಿ ನಡೆದಿದೆ. ಉದ್ಯಮಿ ಶಿವಕುಮಾರ್​ಗೆ ವಂಚನೆಗೊಳಗಾದವರು. ಬ್ಯಾಂಕ್​ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್​ ಡೆಡ್ ಆದ ಹಿನ್ನೆಲೆ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಬಳಿಕ ಸಿಮ್ ಅಕ್ಟಿವೇಶನ್ ವೇಳೆ ಓಟಿಪಿಯನ್ನ ಪಡೆದು, ಬ್ಯಾಂಕ್​ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿಗೆ ಕನ್ನ ಹಾಕಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫುಡ್ ಡೆಲಿವರಿಗೆಂದು ತೆಗೆದುಕೊಂಡ ಸ್ಕೂಟರ್ ಅಕ್ರಮವಾಗಿ ಮಾರಾಟ; ಕೇಸ್​ ದಾಖಲು

ಬೆಂಗಳೂರು: ಫುಡ್ ಡೆಲಿವರಿಗೆಂದು ಗೋಪಾಲ್ ನಾಯ್ಡು ಅಲಿಯಾಸ್ ಲಲಿತ್ ಕುಮಾರ್ ಎಂಬಾತ ಸ್ಕೂಟರ್​ನ್ನು ಬಾಡಿಗೆಗೆ ಪಡೆದಿದ್ದ. ಬಳಿಕ ಇದೇ ಸ್ಕೂಟರ್​ನ್ನ ನಕಲಿ ದಾಖಲೆ ಸೃಷ್ಟಿಸಿ ಹಿಂದೂಪುರ ಮೂಲದ ಅಶೋಕ್ ಮಾನೆ ಎಂಬುವವರಿಗೆ ಮಾರಾಟ ಮಾಡಿದ್ದ. ಹೌದು ಆನ್ ಟ್ರ್ಯಾಕ್ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್ ಕಂಪನಿ ಹೆಸರಿನಲ್ಲಿದ್ದ ಬೈಕ್​ನ್ನು ತನ್ನ ಹೆಸರಿನಲ್ಲಿ ನಕಲಿ ಆರ್​ಸಿ, ಇನ್ಷ್ಯೂರೆನ್ಸ್ ಸೇರಿದಂತೆ ಹಲವು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ.

ಇದನ್ನೂ ಓದಿ:ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಸಾಲು ಸಾಲು ದರೋಡೆ, ವಂಚನೆಗಳು; ಜನರಲ್ಲಿ ಆತಂಕ

ಜಿಪಿಎಸ್ ಟ್ರ್ಯಾಕರ್​ನಿಂದ ಹೊರಬಿತ್ತು ವಂಚನೆ ಪ್ರಕರಣ

ಸ್ಕೂಟರ್​ಗೆ ಅಳವಡಿಸಿದ್ದ ಜಿಪಿಎಸ್​ನಿಂದ ಟ್ರ್ಯಾಕ್​ ಮಾಡಿದ್ದ ಕಂಪನಿಯ ಸಿಬ್ಬಂದಿಗಳು, ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅಶೋಕ್ ಮಾನೆ ಕೊಂಡಿದ್ದ ಬೈಕ್​ನ್ನು ತಡೆದಿದ್ದಾರೆ. ಇದು ನಮ್ಮ ಕಂಪನಿಯ ವಾಹನ ಬಾಡಿಗೆ ಕೊಟ್ಟಿದೇವೆ. ನೀವ್ಯಾಕೆ ಅಕ್ರಮವಾಗಿ ತೆಗೆದುಕೊಂಡಿದ್ದಿರಾ? ಎಂದು ಪ್ರಶ್ನಿಸಿದಾಗ, ವಂಚನೆ ಪ್ರಕರಣ ಬಯಲಿಗೆ ಬಂದಿದೆ. ರಿಜಿಸ್ಟ್ರೇಷನ್ ಆ್ಯಪ್​ ನಲ್ಲಿ ಗಾಡಿ ನಂಬರ್​ ಹೊಡೆದು ನೋಡಿದಾಗ on track ಕಂಪನಿಯ ಹೆಸರಿನಲ್ಲಿತ್ತು.

50 ಸಾವಿರ ಹಣಕ್ಕೆ ಗಾಡಿ ಮಾರಿದ್ದ ಆಸಾಮಿ

ಇನ್ನು ಇತ ಸ್ಕೂಟರ್​ನ್ನು ಬರೊಬ್ಬರಿ 50 ಸಾವಿರ ರೂಪಾಯಿಗೆ ಸೇಲ್​ ಮಾಡಿದ್ದನಂತೆ. ಈ ಕುರಿತು ಕಂಪನಿ ಸಿಬ್ಬಂದಿಗಳು ಗೋಪಾಲ್ ನಾಯ್ಡು ಎಂಬಾತ ಸ್ವಿಗ್ಗಿ ಡೆಲಿವರಿಗೆಂದು ಬಾಡಿಗೆ ಪಡೆದುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sun, 9 July 23

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us