AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಬೆಂಗಳೂರಲ್ಲಿ ತಲೆ ಎತ್ತಿವೆ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು

ಬೆಂಗಳೂರಲ್ಲಿ ಬರೊಬ್ಬರಿ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ತಲೆ ಎತ್ತಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬಿಇಎ ಡಿಡಿಪಿಐ ನೇತೃತ್ವದಲ್ಲಿ ತ್ರಿಮೆನ್ ಸಮಿತಿ ನೀಡಿದ ವರದಿಯಲ್ಲಿ ಮಾಹಿತಿ ಬಹಿರಂಗಗೊಂಡಿದೆ.

Bengaluru News: ಬೆಂಗಳೂರಲ್ಲಿ ತಲೆ ಎತ್ತಿವೆ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು
ಪ್ರಾತಿನಿಧಿಕ ಚಿತ್ರ Image Credit source: Times of India
TV9 Web
| Edited By: |

Updated on:Feb 06, 2023 | 1:18 PM

Share

ಬೆಂಗಳೂರು: ಮಕ್ಕಳನ್ನು ಒಳ್ಳೆ ಮಾರ್ಗದಲ್ಲಿ ಸಾಗಿಸಬೇಕಾದ ಶಾಲೆಗಳೇ ತಪ್ಪು ಮಾರ್ಗದಲ್ಲಿವೆ. ಕೆಲವು ದಿನಗಳ ಹಿಂದೆ ನಗರದ ಪ್ರತಿಷ್ಠಿತ ಶಾಲೆಗಳಾದ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಭಾರತ ಕ್ರಿಕೇಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಒಡೆತನದ ಎಂ ಎಸ್​ ಧೋನಿ ಶಾಲೆ ಸಿಬಿಎಸ್​​ಇ ಅನುಮತಿ ಪಡೆಯದೆ ಅನಧಿಕೃತವಾಗಿ ಸಿಬಿಎಸ್​​ಇ ಪಠ್ಯ ಭೋದಿಸಿರುವುದು ಬೆಳಕಿಗೆ ಬಂದಿದೆ. ಇದರಂತೆ ನಗರದಲ್ಲಿ ಬರೊಬ್ಬರಿ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ತಲೆ ಎತ್ತಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬಿಇಎ ಡಿಡಿಪಿಐ ನೇತೃತ್ವದಲ್ಲಿ ತ್ರಿಮೆನ್ ಸಮಿತಿ ರಚಿಸಲಾಗಿದೆ. ಈ ಸಮಿತಿ ಬೆಂಗಳೂರಿನ ಸಮಗ್ರ ಶಾಲೆಗಳ ಕುರಿತು ಅಧ್ಯಯನ ಮಾಡಿ ಶಿಕ್ಷಣ ಇಲಾಖೆಗೆ ವರದಿ ನೀಡಿದೆ. ಈ ವರದಿಯಲ್ಲಿ ನಗರದಲ್ಲಿನ ಶಾಲೆ, ಭೋದನಾ ವಿಷಯ ಹಾಗೂ ತರಗತಿಗಳ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭಾರತ ತಂಡದ ಮಾಜಿ ಕ್ಯಾಪ್ಟನ್​​ ಎಂಎಸ್​ ಧೋನಿ ಶಾಲೆಗೂ ನೋಟಿಸ್

ಅನಧಿಕೃತ ಶಾಲೆಗಳ ಅಂಕಿ ಅಂಶ

ಬೆಂಗಳೂರು ದಕ್ಷಿಣ ವಲಯ

1. ಅನಧಿಕೃತ ಸಿಬಿಎಸ್​​ಇ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು ಬರೊಬ್ಬರಿ – 171 2. ಅನಧಿಕೃತ ತರಗತಿ ನಡೆಸುತ್ತಿರುವ ಶಾಲೆಗಳು 31

ಇದನ್ನೂ ಓದಿ: ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು​, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ಬೆಂಗಳೂರಿನ ಉತ್ತರ ವಲಯ

1. ಅನಧಿಕೃತ ಶಾಲೆಗಳು – 11

2. ಅನಧಿಕೃತ ಸಿಬಿಎಸ್​ಇ ಐಸಿಎಸ್​ಇ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು – 13

3. ಅನಧಿಕೃತ ತರಗತಿಗಳ ನಡೆಸುತ್ತಿರುವ ಶಾಲೆಗಳು – 20. ಎಲ್ಲ ಅನಧಿಕೃತ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಮುಂದುವರಿದ ಆರ್ಕಿಡ್ ಶಾಲೆಯ ಕಳ್ಳಾಟ

ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಸಿಬಿಎಸ್​​ಇ ಮಾನ್ಯತೆ ಪಡೆದಿದೆ ಎಂದು ಅನಧಿಕೃತವಾಗಿ ಶಾಲೆ ನಡೆಸುತ್ತಿದ್ದು, ಪೋಷಕರಿಂದ ಲಕ್ಷಗಟ್ಟಲೇ ಶುಲ್ಕ ಪಡೆಯುತ್ತಿದೆ. ಈ ಹಿನ್ನೆಲೆ ವಿಜಯನಗರದ ಪೋಷಕರು  ಜಮಾಯಿಸಿದ್ದಾರೆ.  ವಿಜಯನಗರದ ರಮಣಶ್ರೀ ಶಾಲೆಯನ್ನು ಆರ್ಕಿಡ್ ಶಿಕ್ಷಣ ಸಂಸ್ಥೆ ತನ್ನ ವ್ಯಾಪ್ತಿಗೆ ಪಡೆದಿದೆ. ರಮಣಶ್ರೀ ಶಾಲೆಗೆ ಸಿಬಿಎಸ್ಇ ಮಾನ್ಯತೆ ಇದೆ, ಆದ್ರೆ ಆರ್ಕಿಡ್ ಶಾಲೆಗೆ ಇಲ್ಲ. ಈಗ ಆರ್ಕಿಡ್ ಶಾಲೆ, ರಮಣಶ್ರೀ ಶಾಲೆಯನ್ನು  ಖರೀದಿಸಿದ್ದರೂ, ಸಿಬಿಎಸ್​ಇ ಮಾನ್ಯತೆ ಆರ್ಕಿಡ್ ಶಿಕ್ಷಣ ಸಂಸ್ಥೆ ಸಿಕ್ಕಿಲ್ಲ.

ಕಳೆದ ವರ್ಷದಿಂದ ಆರ್ಕಿಡ್ ಇಂಟರ್​​ನ್ಯಾಷನಲ್ ಶಾಲೆ, ತನ್ನ ಹೆಸರಲಿನಲ್ಲೇ ಮಕ್ಕಳ ದಾಖಲಾತಿ ಮಾಡಿಸಿಕೊಂಡಿದೆ. ಈ ಹಿನ್ನೆಲೆ ಪೋಷಕರು 1.30 ರಿಂದ 1.40 ಲಕ್ಷದವರೆಗೂ ಪೋಷಕರು ಮಕ್ಕಳ ಶುಲ್ಕ ಕಟ್ಟಿದ್ದಾರೆ. ಈಗ ರಮಣಶ್ರೀ ಆಡಳಿತ ಮಂಡಳಿ ಹೆಸರನಲ್ಲಿಯೇ ಸಿಬಿಎಸ್ಇ ಸರ್ಟಿಫಿಕೇಟ್ ನೀಡಲು ಸಂಸ್ಥೆ ಮುಂದಾಗಿದೆ.

ರಮಣಶ್ರೀ ಸಂಸ್ಥೆ ಈ ಹಿಂದೆ ಇದ್ದ 50 ಸಾವಿರ ಶುಲ್ಕ ಪಡೆಯುತ್ತಿತ್ತು. ಆದರೆ ಈಗ ಆರ್ಕಿಡ್ ತನ್ನ ವ್ಯಾಪ್ತಿಗೆ ಪಡೆದ ಬಳಿಕ 1.20 ಲಕ್ಷಕ್ಕೆ ಶಲ್ಕಕ್ಕೆ ಏರಿಕೆ ಮಾಡಿದೆ. ಈಗ ಸಿಬಿಎಸ್​ಇ ಸರ್ಟಿಫಿಕೇಟ್ ಪರೀಕ್ಷೆ ಎಲ್ಲ ರಮಣಶ್ರೀ ಆಡಳಿತ ಮಂಡಳಿಯ ಹೆಸರಲ್ಲಿಯೇ ಕೊಡುತ್ತೇವೆ ಎಂದು ಆರ್ಕಿಡ್ ಸಂಸ್ಥೆ ಹೇಳುತ್ತಿದೆ. ಆರ್ಕಿಡ್ ಈ ಉಸರವಳ್ಳಿ ಆಟಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಮಣಶ್ರೀ ಶಾಲೆಗೆ ನಾವು ಈ ಹಿಂದೆ 50ಸಾವಿರ ಶುಲ್ಕ ಇತ್ತು, ಆರ್ಕಿಡ್ ಬಂದ ಮೇಲೆ 1.20 ಲಕ್ಷಕ್ಕೆ ಶುಲ್ಕ ಪಡೆದಿದೆ. ಆದರೆ ಈಗ ರಮಣಶ್ರೀ ಹೆಸರಲ್ಲಿಯೇ ಸರ್ಟಿಫಿಕೇಟ್ ಪರೀಕ್ಷೆ ಎಲ್ಲ ಅಂತಿದ್ದಾರೆ. ಹೀಗಾಗಿ ಶುಲ್ಕ ವಾಪಸ್ ಕೊಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಕ್ಲಿ ಮಾಡಿ

Published On - 10:28 am, Mon, 6 February 23

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!