AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ದೋಖಾ; ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷ ಲಕ್ಷ ಪೀಕಿದ ಶಾಲೆ

ಇಂಟರ್ ನ್ಯಾಷನಲ್ ಲೇವಲ್ ಶಾಲೆ ಎಂದು ಪೋಸ್ ಕೊಟ್ಟಿರುವ ಖಾಸಗಿ ಶಾಲೆಯೊಂದು ಮಕ್ಕಳನ್ನೂ ಸೇರಿಸಿಕೊಂಡು, ಪೋಷಕರಿಗೂ ಕನ್ಫ್ಯೂಸ್ ಮಾಡಿದೆ. ನಮ್ಮದು ಸಿಬಿಎಸ್​ಇ ಪಠ್ಯಕ್ರಮ ಎಂದು ಅಡ್ಮಿಷನ್ ಮಾಡಿಕೊಂಡು ಲಕ್ಷಾಂತರ ದುಡ್ಡು ಪೀಕಿದೆ.

ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ದೋಖಾ; ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷ ಲಕ್ಷ ಪೀಕಿದ ಶಾಲೆ
ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷಗಟ್ಟಲೇ ಪೀಕಿದ ಶಾಲೆ
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Mar 06, 2023 | 8:47 AM

Share

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿಯಲ್ಲಿರುವ ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆ(orchid international school) ಸಿ ಬಿ ಎಸ್ ಸಿ ಪಠ್ಯಕ್ರಮ ಶಾಲೆ ಎಂದು ಪೋಸ್ ಕೊಟ್ಟು ಪೋಷಕರಿಗೆ ಪಂಗನಾಮ ಹಾಕಿದೆ. ಸಿಬಿಎಸ್​ಸಿ ಪಠ್ಯಕ್ರಮ ಓದಿಸುವ ಅರ್ಹತೆ ಗಿಟ್ಟಿಸಿಕೊಳ್ಳದೇ ಇದ್ದರೂ, ನಮ್ಮದು ಸಿಬಿಎಸ್​ಸಿ ಪಠ್ಯಕ್ರಮ ಎಂದು ಹೇಳಿ ಲಕ್ಷ ಲಕ್ಷ ಹಣ ಪೀಕಿದೆ.‌ ಆದರೆ ಮಕ್ಕಳಿಗೆ ಓದಲು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ನೀಡಿದ ಪುಸ್ತಕವನ್ನು ನೀಡಿದೆ. ಇದನ್ನು ಕಂಡ ಪೋಷಕರು ಪ್ರಶ್ನೆ ಮಾಡಿದಕ್ಕೆ, ಯಾವ ಸ್ಪಷ್ಟನೆ ನೀಡದೇ, ನಾವು ಕೇಂದ್ರದ ಪಠ್ಯಕ್ರಮ ಓದಿಸುತ್ತಿಲ್ಲ, ಅದರದ್ದೇ ಥರಾ ಇರುವ ಪಠ್ಯಕ್ರಮ ನೀಡಿದ್ದೇವೆ ಎಂದು ಕನ್ಫ್ಯೂಸ್ ಮಾಡಿದೆ.

ಸಿಬಿಎಸ್​ಸಿ ಪಠ್ಯಕ್ರಮ ಇಲ್ಲದೇ ಇದ್ರೂ ಯಾಕೆ ಪೊಷಕರಿಗೆ ಸುಳ್ಳು ಹೇಳಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಸಂಸ್ಥೆ ಮ್ಯಾನೇಜ್ಮೆಂಟ್, ನಾವು ಯಾರಿಗೂ ಹೀಗೆ ಹೇಳೇ ಇಲ್ಲ ಅಂತ ನುಣುಚಿಕೊಂಡಿದೆ. ಇನ್ನು ಈ ಬಗ್ಗೆ ಶಿಕ್ಷಣ ಅಧಿಕಾರಿಗಳಿಗೆ ಕೇಳಿದರೆ,‌ ನಾವು ಆರ್ಕಿಡ್ ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಮಾಡಿರುವ ಎಲ್ಲಾ ಶಾಲೆಗಳಿಗೂ ನೊಟೀಸ್ ಜಾರಿ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಡಾಫೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು​, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ರಾಜ್ಯ ಸರ್ಕಾರದ ಪಠ್ಯಕ್ರಮವೇ ಓಧಿಸುವ ಹಾಗಿದ್ರೆ, ಲಕ್ಷ ಲಕ್ಷ ದುಡ್ಡು ಕೊಟ್ಟು ನಾವು ಆರ್ಕೀಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯಾಕೆ ಓದಿಸೋದು, ಸರಕಾರಿ ಶಾಲೆಯಲ್ಲೇ ಓದಿಸಬಹುದಿತ್ತು ಎಂದು ಕೆಲ ಪೋಷಕರು ತಮ್ಮ ಮಕ್ಕಳ ಟಿ.ಸಿ ಪಡೆಯಲು ಮುಂದಾಗಿದ್ದಾರೆ. ಇನ್ನಾದರೂ ಶಿಕ್ಷಣ ಇಲಾಖೆ ಈ ಕುರಿತು ಕ್ರಮಕ್ಕೆ ಮುಂದಾಗುತ್ತಾ ಕಾದು ನೋಡಬೇಕಿದೆ.

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ