AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ಕಾರ್ಯಾಕರ್ತರೆಂದು ಹೇಳಿ ಗೋಮಾಂಸದೊಂದಿಗೆ ವ್ಯಕ್ತಿ ಕಿಡ್ನಾಪ್, ಮಹಮ್ಮದ್​​ನ ಅಸಲಿ ಕಹಾನಿ ಇಲ್ಲಿದೆ

ಆರ್​ಎಸ್​ಎಸ್​ ಕಾರ್ಯಕರ್ತರೆಂದು ಬೆದರಿಸಿ ಗೋಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಚಾಲಕನನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆಸಿದ್ದು,​ ಬಳಿಕ ಪೊಲೀಸರ ತನಿಖೆ ವೇಳೆ ವಿಚಾರಣೆಗೊಳಪಡಿಸಿದಾಗ ಆರ್​ಎಸ್​ಎಸ್​ ಹೆಸರಿನಲ್ಲಿ ಗೋಮಾಂಸ್​ ಕಳ್ಳತನ ಕಹಾನಿ ಬಯಲಿಗೆ ಬಂದಿದೆ.

RSS ಕಾರ್ಯಾಕರ್ತರೆಂದು ಹೇಳಿ ಗೋಮಾಂಸದೊಂದಿಗೆ ವ್ಯಕ್ತಿ ಕಿಡ್ನಾಪ್, ಮಹಮ್ಮದ್​​ನ ಅಸಲಿ ಕಹಾನಿ ಇಲ್ಲಿದೆ
ಮಹಮ್ಮದ್(ಆರೋಪಿ)
Follow us
Jagadisha B
| Updated By: ರಮೇಶ್ ಬಿ. ಜವಳಗೇರಾ

Updated on: Sep 20, 2023 | 8:22 AM

ಬೆಂಗಳೂರು, (ಸೆಪ್ಟೆಂಬರ್ 20): ಆರ್​ಎಸ್​ಎಸ್ (RSS) ಕಾರ್ಯಾಕರ್ತರೆಂದು ಹೇಳಿಕೊಂಡು ಗೋಮಾಂಸ (beef) ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಸೆಪ್ಟೆಂಬರ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಮದ್ ಎನ್ನುವಾತ ಮೂವರು ಯುವಕರನ್ನು ಬಿಟ್ಟು ಗೋಮಾಂಸ ಸಾಗಿಸುತ್ತಿದ್ದ ಜಾವೀದ್​ ಎನ್ನುವಾತನನ್ನು ಗಾಡಿ ಸಮೇತ ಕಿಡ್ನಾಪ್ ಮಾಡಿಸಿದ್ದಾನೆ. ಈ ಬಗ್ಗೆ ದೂರು ದಾಖಲಾದ ಬಳಿಕ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ.

ಹೌದು…ಸೆಪ್ಟೆಂಬರ್ 10ರಂದು ಜಾವೀದ್, ಮಹಮದ್ ಎನ್ನುವಾತನ ಅಂಗಡಿಗೆ ವಾಹನದಲ್ಲಿ ಗೋಮಾಂಸ ತುಂಬಿಕೊಂಡು ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತಿದ್ದ. ಈ ಗೋಮಾಂಸ ಕದಿಯಲೆಂದು ಅಂಗಡಿ ಮಾಲೀಕ ಮೂವರು ಯುವಕರನ್ನು ಕಳುಹಿಸಿ ಜಾವೀದ್​​ನನ್ನು ಕಿಡ್ನಾಪ್ ಮಾಡಲು ಹೇಳಿದ್ದ. ಅದರಂತೆ ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿಗೆ ಡೆಲವರಿಗೆ ಮಾಡಲು ಬರುತ್ತಿದ್ದ ಜಾವೀದ್​ನನ್ನು ಮೈಕ್ರೋ ಲೇಔಟ್ ಸಿಗ್ನಲ್ ಬಳಿ ಅಡ್ಡಗಟ್ಟಿ ತಾವು ಆರ್​ಎಸ್​ಎಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ. ಬಳಿಕ ಗಾಡಿ ಸಮೇತ ಜಾವೀದ್​ನನ್ನು ಕಿಡ್ನಾಪ್ ಮಾಡಿದ್ದರು.

ಇದನ್ನೂ ಓದಿ: ಎಗ್ ರೈಸ್ ಜೊತೆ ಕಬಾಬ್​ ಕೇಳಿದ ಯುವಕ; ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಂದ

ನಂತರ ಜಾವೀದ್​ನನ್ನು ಬಿಟ್ಟು ಕಳುಹಿಸಲು ಒಂದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ಹತ್ತು ಸಾವಿರ ಪಡೆದು ಜಾವೀದ್​ನನ್ನು ಬಿಟ್ಟು ಕಳುಹಿಸಿದ್ದಾರೆ. ಇನ್ನು ತನ್ನ ಗಾಡಿ ಕೊಡಿ ಎಂದು ಕಿಡ್ನಾಪ್​ ಮಾಡಿದ್ದವನ್ನು ಕೇಳಿದ್ದಾನೆ. ಸೆಂಟ್ ಜಾನ್ ಸಿಗ್ನಲ್ ಬಳಿ ಗಾಡಿ ಇದೆ ತಗೆದುಕೋ ಎಂದು ಹೇಳಿ ಕಳುಹಿಸಿದ್ದಾರೆ. ಅದರಂತೆ ಬಳಿಕ ಸಿಗ್ನಲ್ ಬಳಿ ಹೊದಾಗ ಕೇವಲ ಗಾಡಿ ಇತ್ತೆ ಹೊರತು ಅದರಲ್ಲಿದ್ದ ಗೋಮಾಂಸ ಇರಲಿಲ್ಲ. ಬಳಿಕ ಈ ಬಗ್ಗೆ ಜಾವೀದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ದೂರಿನ ಮೇರೆಗೆ ಕಾರ್ಯಚರಣೆಗಿಳಿದ ಆಡುಗೋಡಿ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರ್​ಎಸ್​ಎಸ್​ ಹೆಸರಿನಲ್ಲಿ ಗೋಮಾಂಸ್​ ಕಳ್ಳತನ ಕಹಾನಿ ಬಯಲಿಗೆ ಬಂದಿದೆ.

ಕಿಡ್ನಾಪ್​ ಮಾಡಿದ್ದವರನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಅಂಗಡಿ ಮಾಲೀಕ ಮಹಮದ್​ನ ಗೋಮಾಂಸ ಕಳ್ಳತದ ಪ್ಲ್ಯಾನ್ ಬಟಾಬಯಲಾಗಿದೆ. ಜಾವೀದ್​ ಡೆಲವರಿ ಮಾಡಬೇಕಿದ್ದ ಗೋಮಾಂಸದ ಅಂಗಡಿಯ ಮಾಲೀಕನೇ ಕಿಡ್ನಾಪ್ ಮಾಡಿಸಿದ್ದು ಎನ್ನುವುದು ಗೊತ್ತಾಗಿದೆ.

ಕಿಡ್ನಾಪ್​ ಮಾಡಿದ್ದ ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ.ನಂತರ ಮಾಂಸ ಡೆಲವರಿಯಾಗಿಲ್ಲ ಎಂದು ಕಥೆ ಬಿಟ್ಟಿದ್ದ. ಬಳಿಕ ಪೊಲೀಸರ ತನಿಖೆ ವೇಳೆ ಅಸಲಿ ಕಹಾನಿ ಬೆಳಕಿಗೆ ಬಂದಿದ್ದು, ಗೋಮಾಂಸ ಕದಿಯಲೆಂದೇ ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ದಿನ ಸಿಂಹ ರಾಶಿಗೆ ಏಳು ಗ್ರಹಗಳ ಶುಭಫಲ
Daily Horoscope: ಈ ದಿನ ಸಿಂಹ ರಾಶಿಗೆ ಏಳು ಗ್ರಹಗಳ ಶುಭಫಲ
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ