ಹೆಬ್ಬಾಳ ಫ್ಲೈಓವರ್ ಇಳಿದ್ರೆ ನರಕ ದರ್ಶನ: ಮೇಕ್ರಿ ಸರ್ಕಲ್ ದಾಟುವಷ್ಟರಲ್ಲಿ ಸುಸ್ತಾದ ಕಾರು ಸವಾರರು; ಹೇಗಿದೆ ನೋಡಿ ಟ್ರಾಫಿಕ್‌ ಟೈಮ್‌ಲೈನ್

ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಹೆಬ್ಬಾಳ ಫ್ಲೈಓವರ್‌ನಿಂದ ವಿಂಡ್ಸರ್ ಮ್ಯಾನರ್‌ಗೆ ಕೇವಲ 3 ಕಿ.ಮೀ.ಗಿಂತ ಕಡಿಮೆ ದೂರವನ್ನು ಕ್ರಮಿಸಲು ವಾಹನ ಸವಾರರೊಬ್ಬರಿಗೆ 70 ನಿಮಿಷಗಳಿಗೂ ಹೆಚ್ಚು ಸಮಯ ಬೇಕಾಗಿದೆ. ಈ ಘಟನೆ ನಗರದ ಮೂಲಸೌಕರ್ಯ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಬ್ಬಾಳ ಫ್ಲೈಓವರ್ ಇಳಿದ್ರೆ ನರಕ ದರ್ಶನ: ಮೇಕ್ರಿ ಸರ್ಕಲ್ ದಾಟುವಷ್ಟರಲ್ಲಿ ಸುಸ್ತಾದ ಕಾರು ಸವಾರರು; ಹೇಗಿದೆ ನೋಡಿ ಟ್ರಾಫಿಕ್‌ ಟೈಮ್‌ಲೈನ್
ಹೆಬ್ಬಾಳ ಸಂಚಾರ ದಟ್ಟಣೆ

Updated on: Jun 24, 2026 | 5:34 PM

ಮುಖ್ಯಾಂಶಗಳು

  • ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ
  • 3 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಬರೋಬ್ಬರಿ 70 ನಿಮಿಷ
  • ಸಾರಿಗೆ ಇಲಾಖೆ - ಜಿಬಿಎ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ಬೆಂಗಳೂರು, ಜೂ.24: ಸಿಲಿಕಾನ್ ಸಿಟಿಯ ಹೆಬ್ಬಾಳ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು ಎದುರಿಸುತ್ತಿರುವ ನರಕಯಾತನೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಹೆಬ್ಬಾಳ ಫ್ಲೈಓವರ್ ಇಳಿದು ವಿಂಡ್ಸರ್ ಮ್ಯಾನರ್ ಸೇರುವ ಕೇವಲ 3 ಕಿಲೋಮೀಟರ್‌ಗಿಂತಲೂ ಕಡಿಮೆ ಅಂತರದ ರಸ್ತೆಯನ್ನು ದಾಟಲು ವಾಹನ ಸವಾರರೊಬ್ಬರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಈ ಟ್ರಾಫಿಕ್ ವ್ಯೂಹದಲ್ಲಿ ಸಿಲುಕಿರುವ ಬೆಂಗಳೂರು ಪೋಸ್ಟ್​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಟ್ರಾಫಿಕ್‌ನಲ್ಲಿ ಸಿಲುಕಿದ ಸವಾರ ಹಂಚಿಕೊಂಡ ‘ಟೈಮ್‌ಲೈನ್’ ಇಲ್ಲಿದೆ ನೋಡಿ

ಬೆಳಗಿನ ಪೀಕ್ ಅವರ್‌ನಲ್ಲಿ ಹೆಬ್ಬಾಳ ಮಾರ್ಗವಾಗಿ ನಗರ ಪ್ರವೇಶಿಸುವಾಗ ವಾಹನಗಳು ಹೇಗೆ ಇಂಚಿಂಚೂ ಕದಲುವುದಿಲ್ಲ ಎಂಬುದಕ್ಕೆ ವಾಹನ ಸವಾರರೊಬ್ಬರು ಹಂಚಿಕೊಂಡಿರುವ ಈ ಸಮಯದ ವಿವರಣೆಯೇ ಸಾಕ್ಷಿ.

ಬೆಳಗ್ಗೆ 9:00 AM: ಹೆಬ್ಬಾಳ ಫ್ಲೈಓವರ್ ಪ್ರವೇಶ.

ಬೆಳಗ್ಗೆ 9:05 AM: ಬ್ಯಾಪ್ಟಿಸ್ಟ್ ಆಸ್ಪತ್ರೆ ಜಂಕ್ಷನ್ .

ಬೆಳಗ್ಗೆ 9:20 AM: ಗಂಗಾನಗರ ತಲುಪಲು 15 ನಿಮಿಷ ವ್ಯಯ!

ಬೆಳಗ್ಗೆ 9:25 AM: ಫೋರ್ ಸೀಸನ್ಸ್ ಹೋಟೆಲ್ ಮಗ್ಗುಲು.

ಬೆಳಗ್ಗೆ 9:35 AM: ಮೇಕ್ರಿ ಸರ್ಕಲ್ ತಲುಪುವಷ್ಟರಲ್ಲಿ ಅರ್ಧ ಗಂಟೆ.

ಬೆಳಗ್ಗೆ 9:45 AM: ಪ್ಯಾಲೇಸ್ ಗ್ರೌಂಡ್ಸ್

ಬೆಳಗ್ಗೆ 9:58 AM: ಪ್ಯಾಲೇಸ್ ಕುತ್ತಹಳ್ಳಿ .

ಬೆಳಗ್ಗೆ 10:10 AM: ಕೊನೆಗೂ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ತಲುಪಿದ ವಾಹನ

ಇದನ್ನೂ ಓದಿ: ‘ಓನ್ಲಿ ಇನ್ ನಮ್ಮ ಬೆಂಗಳೂರು’: ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:


ಹೆಬ್ಬಾಳ ಫ್ಲೈಓವರ್‌ನಿಂದ ಕೆಳಗೆ ಜೂಮ್ ಮಾಡಿಕೊಂಡು ಬರುವ ವಾಹನಗಳು ನೇರವಾಗಿ ಟ್ರಾಫಿಕ್ ಎಂಬ ಮಾಯಾಲೋಕದೊಳಗೆ ಧುಮುಕುತ್ತವೆ. ಕೇವಲ 3 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಬರೋಬ್ಬರಿ 70 ನಿಮಿಷಗಳು ಬೇಕಾಗಿರುವುದು ಬೆಂಗಳೂರಿನ ಮೂಲಸೌಕರ್ಯದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯ ನಾಗರಿಕರಿಂದ ಹಿಡಿದು ದೇಶದ ಸಂಸದರವರೆಗೂ ಯಾರೂ ಈ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ಇದು ನಮ್ಮ ನಿತ್ಯದ ದಿನಚರಿಯಾಗಿದೆ, ಇದನ್ನು ಒಮ್ಮೆ ಯೋಚಿಸಿ ನೋಡಿ” ಎಂದು ಸಾರ್ವಜನಿಕರು ಸಾರಿಗೆ ಇಲಾಖೆ ಹಾಗೂ ಜಿಬಿಎ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:33 pm, Wed, 24 June 26

Follow Us