AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಐಬಿ ಅಧಿಕಾರಿ ಎಂದು ನಂಬಿಸಿ 89 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್!

ಆರೋಪಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಸರಿನಲ್ಲಿ ಮಹಾ ವಂಚನೆ ಮಾಡಿದ್ದಾನೆ. ಯುಪಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವೀಸಾ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಈತ ನಂಬಿಸಿದ್ದ.

ಬೆಂಗಳೂರಿನಲ್ಲಿ ಐಬಿ ಅಧಿಕಾರಿ ಎಂದು ನಂಬಿಸಿ 89 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್!
ಆರೋಪಿ ಮೋಹನ್ ಕುಮಾರ್
TV9 Web
| Edited By: sandhya thejappa|

Updated on:May 01, 2022 | 1:01 PM

Share

ಬೆಂಗಳೂರು: ಐಬಿ (IB) ಅಧಿಕಾರಿ ಅಂತಾ ಹೇಳಿಕೊಂಡು ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ (Bengaluru) ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್ ಅಲಿಯಾಸ್ ಅರಹಂತ್ ಲಕ್ಕವಳ್ಳಿ ಬಂಧನಕ್ಕೊಳಗಾದ ಆರೋಪಿ. ಮೋಹನ್ RAW, IB, PMO ಅಧಿಕಾರಿಯೆಂದು ನಂಬಿಸಿ ವಂಚಿಸಿದ್ದ. ಬರೋಬ್ಬರಿ 89 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ವಂಚಿಸಿ ಪಡೆದ ಹಣದಲ್ಲಿ ವರ್ಷಕ್ಕೆ ಹಲವು ಬಾರಿ ವಿದೇಶಿ ಪ್ರವಾಸ ಮಾಡುತ್ತಿದ್ದ. ಸಿಂಗಾಪುರ, ಮಲೇಷಿಯಾ, ಯುರೋಪ್ ಪ್ರವಾಸಕ್ಕೆ ಹೋಗುತ್ತಿದ್ದ. ರಾಜಕೀಯ ವ್ಯಕ್ತಿಗಳ ಲಿಂಕ್ ಇರೋದಾಗಿ ನಂಬಿಸುತ್ತಿದ್ದ. ಪೊಲೀಸ್ ಅಧಿಕಾರಿಗಳು, ಗಣ್ಯರ ಲಿಂಕ್ ಇದೆ ಎಂದು ನಂಬಿಸಿದ್ದ. ನಂತರ ಉತ್ತರ ಪ್ರದೇಶದ ಮಹಿಳೆಗೆ ವಂಚಿಸಿ ತಗಲಾಕಿಕೊಂಡಿದ್ದಾನೆ.

ಆರೋಪಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಸರಿನಲ್ಲಿ ಮಹಾ ವಂಚನೆ ಮಾಡಿದ್ದಾನೆ. ಯುಪಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವೀಸಾ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಈತ ನಂಬಿಸಿದ್ದ. ಉಗ್ರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆ ಎಂದು ಹೆದರಿಸಿದ್ದ. ಹೀಗೆ ನಂಬಿಸಿ ಮಹಿಳೆಯಿಂದ ದೊಡ್ಡ ಮಟ್ಟದ ಹಣ ದೋಚಿದ್ದ. ಬಳಿಕ ಅಸಲಿ ಸಂಗತಿ ತಿಳಿದು ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು.

ತನಿಖೆ ವೇಳೆ ಆರೋಪಿಯಿಂದ ಹಲವು ಸಂಗತಿಗಳು ಬಯಲಾಗಿದೆ. ಕೆಲಸ ಇಲ್ಲದಿದ್ದರೂ 10 ಬ್ಯಾಂಕ್ಗಳಲ್ಲಿ 16 ಖಾತೆ ಹೊಂದಿದ್ದಾನೆ. ಪಾಸ್​ಪೋರ್ಟ್​ನಲ್ಲಿ ಹಲವು ದೇಶಗಳ ಸುತ್ತಾಟದ ಪಟ್ಟಿ ಬೆಳಕಿಗೆ ಬಂದಿದೆ. ವಂಚಕ ಮೋಹನ್ ಮೂಲತಃ ಶಿವಮೊಗ್ಗ ಮೂಲದವನು. ಬೆಂಗಳೂರಿನ ರಾಜಾಜಿನಗರದಲ್ಲಿ ಸೋದರನೊಂದಿಗೆ ವಾಸವಿದ್ದ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿರೋದಾಗಿ ಮನೆಯಲ್ಲಿ ಹೇಳಿದ್ದ. ಮೋಹನ್ ಕುಮಾರ್ ಬಂಧನದ ಬಳಿಕ ಪೋಷಕರು ಶಾಕ್ ಆಗಿದ್ದಾರೆ. ಮೊಬೈಲ್ ಪಾಸ್​ವರ್ಡ್​ ನೀಡದೆ ಪೊಲೀಸರ ಜೊತೆ ಚೆಲ್ಲಾಟ ಆಡಿದ್ದಾನೆ. ಸುಳ್ಳು ಪಾಸ್​ವರ್ಡ್​ ನೀಡಿ ಮೋಹನ್ ಕುಮಾರ್ ಹುಚ್ಚಾಟ ಮೆರೆದಿದ್ದಾನೆ.

ಈತನ ಕೆಲಸಕ್ಕೆ ಬೇಸತ್ತು ಪೊಲೀಸರು ಕೋರ್ಟ್ ಮೊರೆಹೋಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮೊಬೈಲ್ ಅನ್​ಲಾಕ್​ಗೆ ಮುಂದಾಗಿದ್ದಾರೆ. ವಿಚಾರಣೆಗೆ ಆರೋಪಿ ಮೋಹನ್ ಸಹಕರಿಸದ ಹಿನ್ನೆಲೆ ಅನುಮಾನ ಹೆಚ್ಚಾಗಿದೆ. ಈವರೆಗೂ ಯುಪಿ ಯುವತಿ ಬಿಟ್ಟರೆ ಯಾವುದೇ ಕೇಸ್ ಬಾಯಿಬಿಟ್ಟಿಲ್ಲ. ಇದೇ ಮಾದರಿ ಹಲವರಿಗೆ ದೊಡ್ಡವರ ಹೆಸರು ಹೇಳಿ ವಂಚನೆ ಮಾಡಿರುವ ಶಂಕೆ ಮೂಡಿದೆ. ಸದ್ಯ ಬೆಳ್ಳಂದೂರು ಪೊಲೀಸರು ಮೋಹನ್​ ಕುಮಾರ್​ನ​ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ

Imran Tahir: ತನ್ನ ಮಡದಿಗಾಗಿ ಪಾಕಿಸ್ತಾನವನ್ನು ಬಿಟ್ಟು ದ. ಆಫ್ರಿಕಾಕ್ಕೆ ಬಂದ ಇಮ್ರಾನ್ ತಾಹಿರ್ ಬಗ್ಗೆ ನಿಮಗೆಷ್ಟು ಗೊತ್ತು?

Crime News: ವಿವಿಧೆಡೆ ಅಪಘಾತ; 6 ಮಂದಿ ಸಾವು, ಬಾಗಲಕೋಟೆಯಲ್ಲಿ ಪೆಟ್ರೋಲ್ ಕಳ್ಳತನ

Published On - 12:58 pm, Sun, 1 May 22

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ