AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​

ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 02, 2023 | 7:58 AM

Share

ಬೆಂಗಳೂರು ಅ.02: ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು (Bengaluru’s city consumer court) ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ (Apple India) ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ. ಅವೆಜ್ ಖಾನ್ ಅಕ್ಟೋಬರ್ 2021 ರಲ್ಲಿ, ಒಂದು ವರ್ಷದ ವಾರಂಟಿಯೊಂದಿಗೆ iPhone 13 ಫೋನ್​​ ಅನ್ನು ಖರೀದಿಸಿದರು. ಸ್ವಲ್ಪ ದಿನದ ಬಳಿಕ ಫೋನ್‌ನ ಬ್ಯಾಟರಿ ಮತ್ತು ಸ್ಪೀಕರ್ ಕೆಲಸ ಮಾಡುವುದನ್ನು ನಿಲ್ಲಿಸಿತು.

ಹೀಗಾಗಿ ಅವೆಜ್ ಖಾನ್ ಅವರು ಫೋನ್ ರಿಪೇರಿ ಮಾಡಿಕೊಡುವಂತೆ ಇಂದಿರಾನಗರದಲ್ಲಿರುವ ಐಪ್ಲಾನೆಟ್ ಕೇರ್ ಸೆಂಟರ್‌ಗೆ ನೀಡಿದರು. ಸೇವಾ ಕೇಂದ್ರದ ಸಿಬ್ಬಂದಿ ಕೆಲವು ದಿನಗಳ ನಂತರ ಅವೆಜ್​ ಖಾನ್‌ ಅವರಿಗೆ ಕರೆ ಮಾಡಿ ಅವರ ಫೋನ್ ಸರಿಪಡಿಸಲಾಗಿದ್ದು, ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಅದರಂತೆ ಅವೆಜ್​ ಖಾನ್ ಅವರು ಕೇರ್ ಸೆಂಟರ್​​ಗೆ ತೆರಳಿ ಫೋನ್ ಅನ್ನು ಪರಿಶೀಲಿಸಿದಾಗ, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿನ ಸಮಸ್ಯೆ ಹಾಗೆ ಇರುವುದು ಕಂಡುಬಂದಿತು. ಈ ವಿಚಾರವನ್ನು ಅವೆಜ್​ ಖಾನ್​ ಸಿಬ್ಬಂದಿಗೆ ತಿಳಿಸಿ ಸರಿಯಾಗಿ ಫೋನ್ ರಿಪೇರಿ ಮಾಡುವಂತೆ ಹೇಳಿದರು. ಎರಡು ವಾರಗಳ ಬಳಿಕ ಕೇರ್ ಸೆಂಟರ್‌ ಸಿಬ್ಬಂದಿ ಅವೆಜ್​ ಖಾನ್​ ಅವರಿಗೆ ಕರೆ ಮಾಡಿ “ನಿಮ್ಮ ಫೋನ್‌ನಲ್ಲಿ ಅಂಟು ತರಹದ ವಸ್ತುವನ್ನು ಪತ್ತೆಯಾಗಿದ್ದು, ಸಮಸ್ಯೆಯು ವಾರಂಟಿ ನೀತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದನ್ನು ಸರಿಪಡಿಸಲು ಅವರು ಹೆಚ್ಚುವರಿ ಹಣವನ್ನಿ ನೀಡಬೇಕೆಂದು ಹೇಳಿದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್​ ಸಲಹೆ

ಅವೆಜ್​ ಖಾನ್ ಅವರು ಆಪಲ್ ಇಂಡಿಯಾಗೆ ಮೇಲ್ ಮೂಲಕ ಸಮಸ್ಯೆಯನ್ನು ವಿವರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಬೇಸರಗೊಂಡ ಅವೆಜ್​ ಖಾನ್​ ಅವರು ಆಪಲ್ ಇಂಡಿಯಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಅವರಿಗೆ ಕಾನೂನು ನೋಟಿಸ್ ಕಳುಹಿಸಿದರು. ಬೆಂಗಳೂರು ಶಾಂತಿನಗರದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಯ ದೂರು ದಾಖಲಾಗಿತ್ತು.

ಆದರೆ ಪ್ರತಿವಾದದಲ್ಲಿ, ಆಪಲ್ ಇಂಡಿಯಾ ವಕೀಲರು ದೂರಿನಲ್ಲಿ ಸತ್ಯಾಂಶಗಳ ಕೊರತೆಯಿದೆ ಮತ್ತು ಹಾನಿಯನ್ನು ‘ಆಕಸ್ಮಿಕ’ ಎಂದು ಕರೆದರು. ಆದರೆ, ಗ್ರಾಹಕರಿಗೆ ಆಗಿರುವ ತೊಂದರೆಗಾಗಿ ಹೆಚ್ಚುವರಿ 20,000 ರೂ. ಪರಿಹಾರವಾಗಿ 79,999 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪರಿಹಾರದಲ್ಲಿ ಅವರು ಐಫೋನ್ ಖರೀದಿಸಲು ಪಾವತಿಸಿದ ಬೆಲೆ ಮತ್ತು ಆಪಲ್ ಇಂಡಿಯಾದಿಂದ ತನಗೆ ಉಂಟಾದ ಸಂಕಷ್ಟವನ್ನು ಒಳಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Mon, 2 October 23

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ