AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​

ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 02, 2023 | 7:58 AM

ಬೆಂಗಳೂರು ಅ.02: ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು (Bengaluru’s city consumer court) ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ (Apple India) ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ. ಅವೆಜ್ ಖಾನ್ ಅಕ್ಟೋಬರ್ 2021 ರಲ್ಲಿ, ಒಂದು ವರ್ಷದ ವಾರಂಟಿಯೊಂದಿಗೆ iPhone 13 ಫೋನ್​​ ಅನ್ನು ಖರೀದಿಸಿದರು. ಸ್ವಲ್ಪ ದಿನದ ಬಳಿಕ ಫೋನ್‌ನ ಬ್ಯಾಟರಿ ಮತ್ತು ಸ್ಪೀಕರ್ ಕೆಲಸ ಮಾಡುವುದನ್ನು ನಿಲ್ಲಿಸಿತು.

ಹೀಗಾಗಿ ಅವೆಜ್ ಖಾನ್ ಅವರು ಫೋನ್ ರಿಪೇರಿ ಮಾಡಿಕೊಡುವಂತೆ ಇಂದಿರಾನಗರದಲ್ಲಿರುವ ಐಪ್ಲಾನೆಟ್ ಕೇರ್ ಸೆಂಟರ್‌ಗೆ ನೀಡಿದರು. ಸೇವಾ ಕೇಂದ್ರದ ಸಿಬ್ಬಂದಿ ಕೆಲವು ದಿನಗಳ ನಂತರ ಅವೆಜ್​ ಖಾನ್‌ ಅವರಿಗೆ ಕರೆ ಮಾಡಿ ಅವರ ಫೋನ್ ಸರಿಪಡಿಸಲಾಗಿದ್ದು, ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಅದರಂತೆ ಅವೆಜ್​ ಖಾನ್ ಅವರು ಕೇರ್ ಸೆಂಟರ್​​ಗೆ ತೆರಳಿ ಫೋನ್ ಅನ್ನು ಪರಿಶೀಲಿಸಿದಾಗ, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿನ ಸಮಸ್ಯೆ ಹಾಗೆ ಇರುವುದು ಕಂಡುಬಂದಿತು. ಈ ವಿಚಾರವನ್ನು ಅವೆಜ್​ ಖಾನ್​ ಸಿಬ್ಬಂದಿಗೆ ತಿಳಿಸಿ ಸರಿಯಾಗಿ ಫೋನ್ ರಿಪೇರಿ ಮಾಡುವಂತೆ ಹೇಳಿದರು. ಎರಡು ವಾರಗಳ ಬಳಿಕ ಕೇರ್ ಸೆಂಟರ್‌ ಸಿಬ್ಬಂದಿ ಅವೆಜ್​ ಖಾನ್​ ಅವರಿಗೆ ಕರೆ ಮಾಡಿ “ನಿಮ್ಮ ಫೋನ್‌ನಲ್ಲಿ ಅಂಟು ತರಹದ ವಸ್ತುವನ್ನು ಪತ್ತೆಯಾಗಿದ್ದು, ಸಮಸ್ಯೆಯು ವಾರಂಟಿ ನೀತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದನ್ನು ಸರಿಪಡಿಸಲು ಅವರು ಹೆಚ್ಚುವರಿ ಹಣವನ್ನಿ ನೀಡಬೇಕೆಂದು ಹೇಳಿದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್​ ಸಲಹೆ

ಅವೆಜ್​ ಖಾನ್ ಅವರು ಆಪಲ್ ಇಂಡಿಯಾಗೆ ಮೇಲ್ ಮೂಲಕ ಸಮಸ್ಯೆಯನ್ನು ವಿವರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಬೇಸರಗೊಂಡ ಅವೆಜ್​ ಖಾನ್​ ಅವರು ಆಪಲ್ ಇಂಡಿಯಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಅವರಿಗೆ ಕಾನೂನು ನೋಟಿಸ್ ಕಳುಹಿಸಿದರು. ಬೆಂಗಳೂರು ಶಾಂತಿನಗರದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಯ ದೂರು ದಾಖಲಾಗಿತ್ತು.

ಆದರೆ ಪ್ರತಿವಾದದಲ್ಲಿ, ಆಪಲ್ ಇಂಡಿಯಾ ವಕೀಲರು ದೂರಿನಲ್ಲಿ ಸತ್ಯಾಂಶಗಳ ಕೊರತೆಯಿದೆ ಮತ್ತು ಹಾನಿಯನ್ನು ‘ಆಕಸ್ಮಿಕ’ ಎಂದು ಕರೆದರು. ಆದರೆ, ಗ್ರಾಹಕರಿಗೆ ಆಗಿರುವ ತೊಂದರೆಗಾಗಿ ಹೆಚ್ಚುವರಿ 20,000 ರೂ. ಪರಿಹಾರವಾಗಿ 79,999 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪರಿಹಾರದಲ್ಲಿ ಅವರು ಐಫೋನ್ ಖರೀದಿಸಲು ಪಾವತಿಸಿದ ಬೆಲೆ ಮತ್ತು ಆಪಲ್ ಇಂಡಿಯಾದಿಂದ ತನಗೆ ಉಂಟಾದ ಸಂಕಷ್ಟವನ್ನು ಒಳಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Mon, 2 October 23

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್