AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​

ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ.

1 ಲಕ್ಷ ರೂ. ಪರಿಹಾರ ನೀಡುವಂತೆ ಆಪಲ್​ ಸಂಸ್ಥೆಗೆ ಆದೇಶಿಸಿದ ಕೋರ್ಟ್​​
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Oct 02, 2023 | 7:58 AM

Share

ಬೆಂಗಳೂರು ಅ.02: ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಸಿಟಿ ಗ್ರಾಹಕ ನ್ಯಾಯಾಲಯವು (Bengaluru’s city consumer court) ಇಂದಿರಾನಗರದಲ್ಲಿರುವ ಆಪಲ್ ಇಂಡಿಯಾ (Apple India) ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಆದೇಶಿಸಿದೆ. ಅವೆಜ್ ಖಾನ್ ಅಕ್ಟೋಬರ್ 2021 ರಲ್ಲಿ, ಒಂದು ವರ್ಷದ ವಾರಂಟಿಯೊಂದಿಗೆ iPhone 13 ಫೋನ್​​ ಅನ್ನು ಖರೀದಿಸಿದರು. ಸ್ವಲ್ಪ ದಿನದ ಬಳಿಕ ಫೋನ್‌ನ ಬ್ಯಾಟರಿ ಮತ್ತು ಸ್ಪೀಕರ್ ಕೆಲಸ ಮಾಡುವುದನ್ನು ನಿಲ್ಲಿಸಿತು.

ಹೀಗಾಗಿ ಅವೆಜ್ ಖಾನ್ ಅವರು ಫೋನ್ ರಿಪೇರಿ ಮಾಡಿಕೊಡುವಂತೆ ಇಂದಿರಾನಗರದಲ್ಲಿರುವ ಐಪ್ಲಾನೆಟ್ ಕೇರ್ ಸೆಂಟರ್‌ಗೆ ನೀಡಿದರು. ಸೇವಾ ಕೇಂದ್ರದ ಸಿಬ್ಬಂದಿ ಕೆಲವು ದಿನಗಳ ನಂತರ ಅವೆಜ್​ ಖಾನ್‌ ಅವರಿಗೆ ಕರೆ ಮಾಡಿ ಅವರ ಫೋನ್ ಸರಿಪಡಿಸಲಾಗಿದ್ದು, ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಅದರಂತೆ ಅವೆಜ್​ ಖಾನ್ ಅವರು ಕೇರ್ ಸೆಂಟರ್​​ಗೆ ತೆರಳಿ ಫೋನ್ ಅನ್ನು ಪರಿಶೀಲಿಸಿದಾಗ, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿನ ಸಮಸ್ಯೆ ಹಾಗೆ ಇರುವುದು ಕಂಡುಬಂದಿತು. ಈ ವಿಚಾರವನ್ನು ಅವೆಜ್​ ಖಾನ್​ ಸಿಬ್ಬಂದಿಗೆ ತಿಳಿಸಿ ಸರಿಯಾಗಿ ಫೋನ್ ರಿಪೇರಿ ಮಾಡುವಂತೆ ಹೇಳಿದರು. ಎರಡು ವಾರಗಳ ಬಳಿಕ ಕೇರ್ ಸೆಂಟರ್‌ ಸಿಬ್ಬಂದಿ ಅವೆಜ್​ ಖಾನ್​ ಅವರಿಗೆ ಕರೆ ಮಾಡಿ “ನಿಮ್ಮ ಫೋನ್‌ನಲ್ಲಿ ಅಂಟು ತರಹದ ವಸ್ತುವನ್ನು ಪತ್ತೆಯಾಗಿದ್ದು, ಸಮಸ್ಯೆಯು ವಾರಂಟಿ ನೀತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದನ್ನು ಸರಿಪಡಿಸಲು ಅವರು ಹೆಚ್ಚುವರಿ ಹಣವನ್ನಿ ನೀಡಬೇಕೆಂದು ಹೇಳಿದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್​ ಸಲಹೆ

ಅವೆಜ್​ ಖಾನ್ ಅವರು ಆಪಲ್ ಇಂಡಿಯಾಗೆ ಮೇಲ್ ಮೂಲಕ ಸಮಸ್ಯೆಯನ್ನು ವಿವರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಬೇಸರಗೊಂಡ ಅವೆಜ್​ ಖಾನ್​ ಅವರು ಆಪಲ್ ಇಂಡಿಯಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಅವರಿಗೆ ಕಾನೂನು ನೋಟಿಸ್ ಕಳುಹಿಸಿದರು. ಬೆಂಗಳೂರು ಶಾಂತಿನಗರದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಯ ದೂರು ದಾಖಲಾಗಿತ್ತು.

ಆದರೆ ಪ್ರತಿವಾದದಲ್ಲಿ, ಆಪಲ್ ಇಂಡಿಯಾ ವಕೀಲರು ದೂರಿನಲ್ಲಿ ಸತ್ಯಾಂಶಗಳ ಕೊರತೆಯಿದೆ ಮತ್ತು ಹಾನಿಯನ್ನು ‘ಆಕಸ್ಮಿಕ’ ಎಂದು ಕರೆದರು. ಆದರೆ, ಗ್ರಾಹಕರಿಗೆ ಆಗಿರುವ ತೊಂದರೆಗಾಗಿ ಹೆಚ್ಚುವರಿ 20,000 ರೂ. ಪರಿಹಾರವಾಗಿ 79,999 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪರಿಹಾರದಲ್ಲಿ ಅವರು ಐಫೋನ್ ಖರೀದಿಸಲು ಪಾವತಿಸಿದ ಬೆಲೆ ಮತ್ತು ಆಪಲ್ ಇಂಡಿಯಾದಿಂದ ತನಗೆ ಉಂಟಾದ ಸಂಕಷ್ಟವನ್ನು ಒಳಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Mon, 2 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ