ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!

ಬೆಂಗಳೂರಿನಲ್ಲಿನ ಪಾರ್ಕಿಂಗ್​ ಸಮಸ್ಯೆಗೆ ಶ್ರೀಘ್ರದಲ್ಲೆ ಮುಕ್ತಿ ದೊರೆಯಲಿದೆ. ಕಳೆದ ನಾಲ್ಕು ವರ್ಷದಿಂದ ಖಾಲಿ ಬಿದ್ದಿದ್ದ, ಬೆಂಗಳೂರು ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್ ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!
ಪಾರ್ಕಿಂಗ್​ ಸಂಕೀರ್ಣ
Follow us
|

Updated on:Jun 17, 2024 | 9:57 AM

ಬೆಂಗಳೂರು, ಜೂನ್​ 17: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಾಹನ ಪಾರ್ಕಿಂಗ್ (Parking)​ ತಲೆನೋವಾಗಿ ಪರಿಣಮಿಸಿದೆ. ಅದರಲ್ಲಂತು ಜನಬಿಡ ಪ್ರದೇಶಗಳಾದ ಮೆಜೆಸ್ಟಿಕ್​​​, ವಿಧಾನಸೌಧ ಅಕ್ಕ-ಪಕ್ಕ ವಾಹನ ಪಾರ್ಕಿಂಗ್​​ಗೆ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಶ್ರೀಘ್ರದಲ್ಲೇ ಮುಕ್ತಿ ದೊರೆಯಲಿದೆ. ಬೆಂಗಳೂರು (Bengaluru) ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್​ (Freedom Park) ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು (Parking complex) ನಿರ್ಮಾಣವಾಗಿದ್ದು, ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಈ ಪಾರ್ಕಿಂಗ್​ ಸಂಕಿರ್ಣ ಅತ್ಯಂತ ಸುಧಾರಿತ ಪಾರ್ಕಿಂಗ್​ ತಂತ್ರಜ್ಞಾನವನ್ನು ಒಳಗೊಂಡಿದೆ. ಇಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಉಚಿತ ಪಿಕ್​ ಅಪ್​ ಮತ್ತು ಡ್ರಾಪ್​ ಸೌಲಭ್ಯ ನೀಡಲಾಗಿದೆ. ಬಿಬಿಎಂಪಿಯು 80 ಕೋಟಿ ರೂ. ವೆಚ್ಚದಲ್ಲಿ 2021ರಲ್ಲೇ ಪಾರ್ಕಿಂಗ್​ ಸಂಕೀರ್ಣವನ್ನು ನಿರ್ಮಿಸಿದೆ. ಆದರೆ, ಇದರ ನಿರ್ವಹಣೆಗೆ ಬಿಬಿಎಂಪಿ ಏಳು ಸಲ ಟೆಂಡರ್​ ಕರೆದರೂ, ಯಾರೊಬ್ಬರು ಆಸಕ್ತಿ ತೋರಲಿಲ್ಲ. ಹೀಗಾಗಿ, ಪಾರ್ಕಿಂಗ್​ ಸಂಕೀರ್ಣ ಇಲ್ಲಿಯವರೆಗು ಖಾಲಿಬಿದ್ದಿತ್ತು.

ಇದೀಗ, ಬಿಬಿಎಂಪಿ 8ನೇ ಬಾರಿಗೆ ಟೆಂಡರ್​ ಕರೆದಿದ್ದು, ಪ್ರಿನ್ಸ್​ ರಾಯಲ್​ ಪಾರ್ಕಿಂಗ್​ ಸಲ್ಯೂಷನ್​ ಬಿಸಿನೆಸ್​ ಪ್ರೈ.ಲಿ ಮತ್ತು ಒಮ್ನಿಟೆಕ್​ ಎಂಬ ಸಂಸ್ಥೆಗಳು ಜಂಟಿಯಾಗಿ ಗುತ್ತಿಗೆ ಪಡೆದಿವೆ. 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಪಾಲಿಕೆಗೆ ವಾರ್ಷಿಕ 1.50 ಕೋಟಿ ರೂ. ಪಾವತಿಸಲಿವೆ. ಈ ಪಾರ್ಕಿಂಗ್​ ಸಂಕೀರ್ಣದಲ್ಲಿ 600 ಕಾರುಗಳನ್ನು ಮತ್ತು 750 ಬೈಕ್​ಗಳನ್ನು ನಿಲುಗಡೆ ಮಾಡಬಹುದು ಎಂದು ಬಿಬಿಂಪಿ ಇಂಜಿನಿಯರ್ ಇನ್ ಚೀಫ್ ಬಿಎಸ್ ಪ್ರಹ್ಲಾದ್ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬಿಸಿ, ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ

ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ, ಹೈಕೋರ್ಟ್​, ಸಿಟಿ ಸಿವಿಲ್​ ಕೋರ್ಟ್​, ನಗರ ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್​ ವೃತ್ತ, ಕಂದಾಯ ಭವನ, ಚಿಕ್ಕಪೇಟೆ, ಕಬ್ಬನ್​ಪಾರ್ಕ್​​ಗೆ ತೆರಳುವವರು ಇಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ. ಇದರಿಂದ, ಗಾಂಧಿನಗರ, ಮೆಜೆಸ್ಟಿಕ್​​ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾರ್ಕಿಂಗ್​ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.

ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯ

ಸಿಟಿ ಸಿವಿಲ್​ ಕೋರ್ಟ್​, ಕೆಆರ್​ ವೃತ್ತ, ವಿಧಾಸೌಧ, ಎಂಎಸ್​​ ಬಿಲ್ಡಿಂಗ್​, ಹೈಕೋರ್ಟ್​​, ಪೋತೀಸ್​ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್​ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮಾರ್ಗಗಳಲ್ಲಿ ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯದ ವಾಹನಗಳು ಕಾರ್ಯನಿರ್ವಹಿಸುತ್ತವೆ.

ಏನೆಲ್ಲ ಸೌಲಭ್ಯ?

ಉಚಿತ ವೈಫೈ, ಕಾರ್​ ಸ್ಪಾ, ಶೌಚಾಲಯ, ಕುಡಿಯುವ ನೀರು, ಇವಿ ಚಾರ್ಜಿಂಗ್​, ಕಾಫಿ ಶಾಪ್​, ವೀಲ್​ ಚೇರ್​, ಎಸ್​ಒಎಸ್​, ಆ್ಯಂಬುಲೆನ್ಸ್​​ ಸೇವೆ ಲಭ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:41 am, Mon, 17 June 24

ತಾಜಾ ಸುದ್ದಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ