Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!

ಬೆಂಗಳೂರಿನಲ್ಲಿನ ಪಾರ್ಕಿಂಗ್​ ಸಮಸ್ಯೆಗೆ ಶ್ರೀಘ್ರದಲ್ಲೆ ಮುಕ್ತಿ ದೊರೆಯಲಿದೆ. ಕಳೆದ ನಾಲ್ಕು ವರ್ಷದಿಂದ ಖಾಲಿ ಬಿದ್ದಿದ್ದ, ಬೆಂಗಳೂರು ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್ ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!
ಪಾರ್ಕಿಂಗ್​ ಸಂಕೀರ್ಣ
Follow us
ವಿವೇಕ ಬಿರಾದಾರ
|

Updated on:Jun 17, 2024 | 9:57 AM

ಬೆಂಗಳೂರು, ಜೂನ್​ 17: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಾಹನ ಪಾರ್ಕಿಂಗ್ (Parking)​ ತಲೆನೋವಾಗಿ ಪರಿಣಮಿಸಿದೆ. ಅದರಲ್ಲಂತು ಜನಬಿಡ ಪ್ರದೇಶಗಳಾದ ಮೆಜೆಸ್ಟಿಕ್​​​, ವಿಧಾನಸೌಧ ಅಕ್ಕ-ಪಕ್ಕ ವಾಹನ ಪಾರ್ಕಿಂಗ್​​ಗೆ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಶ್ರೀಘ್ರದಲ್ಲೇ ಮುಕ್ತಿ ದೊರೆಯಲಿದೆ. ಬೆಂಗಳೂರು (Bengaluru) ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್​ (Freedom Park) ಬಳಿ ಬಹುಮಡಿ ಪಾರ್ಕಿಂಗ್​ ಸಂಕೀರ್ಣವು (Parking complex) ನಿರ್ಮಾಣವಾಗಿದ್ದು, ಜೂನ್​ 20 ರಂದು ಉದ್ಘಾಟನೆಗೊಳಲ್ಲಿದೆ.

ಈ ಪಾರ್ಕಿಂಗ್​ ಸಂಕಿರ್ಣ ಅತ್ಯಂತ ಸುಧಾರಿತ ಪಾರ್ಕಿಂಗ್​ ತಂತ್ರಜ್ಞಾನವನ್ನು ಒಳಗೊಂಡಿದೆ. ಇಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಉಚಿತ ಪಿಕ್​ ಅಪ್​ ಮತ್ತು ಡ್ರಾಪ್​ ಸೌಲಭ್ಯ ನೀಡಲಾಗಿದೆ. ಬಿಬಿಎಂಪಿಯು 80 ಕೋಟಿ ರೂ. ವೆಚ್ಚದಲ್ಲಿ 2021ರಲ್ಲೇ ಪಾರ್ಕಿಂಗ್​ ಸಂಕೀರ್ಣವನ್ನು ನಿರ್ಮಿಸಿದೆ. ಆದರೆ, ಇದರ ನಿರ್ವಹಣೆಗೆ ಬಿಬಿಎಂಪಿ ಏಳು ಸಲ ಟೆಂಡರ್​ ಕರೆದರೂ, ಯಾರೊಬ್ಬರು ಆಸಕ್ತಿ ತೋರಲಿಲ್ಲ. ಹೀಗಾಗಿ, ಪಾರ್ಕಿಂಗ್​ ಸಂಕೀರ್ಣ ಇಲ್ಲಿಯವರೆಗು ಖಾಲಿಬಿದ್ದಿತ್ತು.

ಇದೀಗ, ಬಿಬಿಎಂಪಿ 8ನೇ ಬಾರಿಗೆ ಟೆಂಡರ್​ ಕರೆದಿದ್ದು, ಪ್ರಿನ್ಸ್​ ರಾಯಲ್​ ಪಾರ್ಕಿಂಗ್​ ಸಲ್ಯೂಷನ್​ ಬಿಸಿನೆಸ್​ ಪ್ರೈ.ಲಿ ಮತ್ತು ಒಮ್ನಿಟೆಕ್​ ಎಂಬ ಸಂಸ್ಥೆಗಳು ಜಂಟಿಯಾಗಿ ಗುತ್ತಿಗೆ ಪಡೆದಿವೆ. 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಪಾಲಿಕೆಗೆ ವಾರ್ಷಿಕ 1.50 ಕೋಟಿ ರೂ. ಪಾವತಿಸಲಿವೆ. ಈ ಪಾರ್ಕಿಂಗ್​ ಸಂಕೀರ್ಣದಲ್ಲಿ 600 ಕಾರುಗಳನ್ನು ಮತ್ತು 750 ಬೈಕ್​ಗಳನ್ನು ನಿಲುಗಡೆ ಮಾಡಬಹುದು ಎಂದು ಬಿಬಿಂಪಿ ಇಂಜಿನಿಯರ್ ಇನ್ ಚೀಫ್ ಬಿಎಸ್ ಪ್ರಹ್ಲಾದ್ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬಿಸಿ, ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ

ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ, ಹೈಕೋರ್ಟ್​, ಸಿಟಿ ಸಿವಿಲ್​ ಕೋರ್ಟ್​, ನಗರ ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್​ ವೃತ್ತ, ಕಂದಾಯ ಭವನ, ಚಿಕ್ಕಪೇಟೆ, ಕಬ್ಬನ್​ಪಾರ್ಕ್​​ಗೆ ತೆರಳುವವರು ಇಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ. ಇದರಿಂದ, ಗಾಂಧಿನಗರ, ಮೆಜೆಸ್ಟಿಕ್​​ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾರ್ಕಿಂಗ್​ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.

ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯ

ಸಿಟಿ ಸಿವಿಲ್​ ಕೋರ್ಟ್​, ಕೆಆರ್​ ವೃತ್ತ, ವಿಧಾಸೌಧ, ಎಂಎಸ್​​ ಬಿಲ್ಡಿಂಗ್​, ಹೈಕೋರ್ಟ್​​, ಪೋತೀಸ್​ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್​ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮಾರ್ಗಗಳಲ್ಲಿ ಉಚಿತ ಪಿಕ್​ ಅಪ್​, ಡ್ರಾಪ್​​ ಸೌಲಭ್ಯದ ವಾಹನಗಳು ಕಾರ್ಯನಿರ್ವಹಿಸುತ್ತವೆ.

ಏನೆಲ್ಲ ಸೌಲಭ್ಯ?

ಉಚಿತ ವೈಫೈ, ಕಾರ್​ ಸ್ಪಾ, ಶೌಚಾಲಯ, ಕುಡಿಯುವ ನೀರು, ಇವಿ ಚಾರ್ಜಿಂಗ್​, ಕಾಫಿ ಶಾಪ್​, ವೀಲ್​ ಚೇರ್​, ಎಸ್​ಒಎಸ್​, ಆ್ಯಂಬುಲೆನ್ಸ್​​ ಸೇವೆ ಲಭ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:41 am, Mon, 17 June 24

ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್