AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ

ಬೆಂಗಳೂರಿನ ಕೆಆರ್​ ಸರ್ಕಲ್‌ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ 'ಐ ಲವ್ ಬೆಂಗಳೂರು' ಕಾರಂಜಿ ಇದೀಗ ಹಾಳಾಗಿದೆ. ಕಳಪೆ ಕಾಮಗಾರಿ ಮತ್ತು ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಈ ಬಗ್ಗೆ ಪಾದಚಾರಿಗಳು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌.

ಬಿಜೆಪಿ ಸರ್ಕಾರದ ಅವಧಿಯಲ್ಲಿನ 3 ಕೋಟಿ ರೂ ಕಾಮಗಾರಿ ನೀರಿನಲ್ಲಿ ಹೋಮ
Water Fountain
ಕಿರಣ್​ ಸೂರ್ಯ
| Edited By: |

Updated on: Nov 23, 2025 | 9:14 PM

Share

ಬೆಂಗಳೂರು, ನವೆಂಬರ್​ 23: ನಗರದ ಹೃದಯಭಾಗದಲ್ಲೇ ಮತ್ತೊಂದು ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ್ದ ಐ ಲವ್ ಬೆಂಗಳೂರು‌ ಎನ್ನುವ ವಾಟರ್ ಫೌಂಟೆನ್ (Water fountain) ಹಾಳಾಗಿದೆ. ಆ ಮೂಲಕ ಮೂರು ಕೋಟಿ ರೂ. ವೆಚ್ಚದಲ್ಲಿ ನಡೆದಿದ್ದ ಕಾಮಗಾರಿ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಹಾಳಾದ ವಾಟರ್ ಫೌಂಟೆನ್ 

ಕೆಆರ್ ಸರ್ಕಲ್ ಜಂಕ್ಷನ್​​ ಬೆಂಗಳೂರು ನಗರದ ಹೃದಯಭಾಗ. ಈ‌ ಜಂಕ್ಷನ್​​ನಲ್ಲಿ ನಿರ್ಮಾಣ ಮಾಡಿದ್ದ ಐ ಲವ್ ಬೆಂಗಳೂರು‌ ಅನ್ನೋ ವಾಟರ್ ಫೌಂಟೆನ್ ಹತ್ತಿರ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಅದು ಹಾಳಾಗಿದೆ.

ಇದನ್ನೂ ಓದಿ: ಜನರ ರಕ್ಷಣೆ ಮಾಡುವ ಪೊಲೀಸರಿಗೇ ಇಲ್ಲಾ ರಕ್ಷಣೆ: ಇದೆಂಥಾ ಸ್ಟೇಷನ್‌?

2021ರ ವೇಳೆ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವಧಿಯಲ್ಲಿ ಕೆಆರ್ ಸರ್ಕಲ್‌ ಜಂಕ್ಷನ್ ಅಭಿವೃದ್ಧಿ ಮಾಡಲಾಗಿತ್ತು. ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ಕೊಟ್ಟು ಕೆಲಸ ಮಾಡಿಸಿದ್ದ ಅಂದಿನ ಬಿಬಿಎಂಪಿ ನಂತರ ಆ ಕಂಪನಿ ನಿರ್ವಹಣೆ ಮಾಡುತ್ತಿದೆಯಾ ಇಲ್ಲವಾ ಎನ್ನುವುದನ್ನು ನೋಡುವುದನ್ನೇ ಮರೆತಂತಿದೆ. ಕಾಬೂಲ್ ಶಿಲೆ, ಸರ್ಕಲ್ ವಿನ್ಯಾಸ, ಡಿಸ್ಕೋ ಲೈಟಿಂಗ್ ಹಾಗೂ ಕಾರಂಜಿ ಈಗ ಹಾಳಾಗಿದೆ. ಈ ಬಗ್ಗೆ ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌.

ಇನ್ನು ಕಾರಂಜಿ, ಲೈಟಿಂಗ್​​ಗೆ ಹಾಕಿದ್ದ ವಿದ್ಯುತ್ ಡಿಪಿ ಬಾಕ್ಸ್ ಸಹ ಹಾಳಾಗಿದೆ.‌ ವೈರ್​ಗಳು ಆತಂಕ ಮೂಡಿಸುವ ಸ್ಥಿತಿಯಲ್ಲಿವೆ. ಜೊತೆಗೆ ಬೆಸ್ಕಾಂ ಕೇಂದ್ರ ಕಚೇರಿ ಎದುರೇ ಈ ರೀತಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾರೂ ಗಮನಹರಿಸಿಲ್ಲ. ಒಂದು ವೇಳೆ ಮಳೆ‌ ಬಂದು ವಿದ್ಯುತ್ ತಂತಿ ಯಾರಿಗಾದರೂ ತಾಕಿದರೆ ಯಾರು ಹೊಣೆ. ಇನ್ನಾದರೂ ಬೆಸ್ಕಾಂ ಹಾಗೂ ಜಿಬಿಎ ಎಚ್ಚೆತ್ತುಕೊಳ್ಳಬೇಕಿದೆ ಎಂದು ಗೋಪಾಲಕೃಷ್ಣ ಎನ್ನುವವರು ಹೇಳಿದ್ದಾರೆ.

ಇದನ್ನೂ ಓದಿ: ಇಂದಿಗೂ ಈ ಗ್ರಾಮಸ್ಥರ ನೆಮ್ಮದಿ ಆಳು ಮಾಡಿದೆ 30 ವರ್ಷದ ಹಿಂದಿನ ಅದೊಂದು ವ್ಯವಹಾರ

ನಮ್ಮ ಜಿಬಿಎ ಅಧಿಕಾರಿಗಳಿಗೆ ಕಾಮಗಾರಿ ನಡೆಸಿ, ಉದ್ಘಾಟನೆ ಮಾಡುವಾಗ ಇರುವ ಉತ್ಸಾಹ ಅದನ್ನು ನಿರ್ವಹಣೆ ಮಾಡುವುದರಲ್ಲಿ ಇರುವುದಿಲ್ಲ ಎನ್ನುವುದಕ್ಕೆ ಈ ಕಾಮಗಾರಿ ಉತ್ತಮ ಉದಾಹರಣೆ ಎನ್ನಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More