ಮೆಟ್ರೋ ಪಿಲ್ಲರ್ ರಾಡ್​ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ

ಮೆಟ್ರೋ ಪಿಲ್ಲರ್ ರಾಡ್​ಗಳು ಕುಸಿದುಬಿದ್ದ ಘಟನೆ ಸಂಬಂಧ ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ಪಿಲ್ಲರ್ ನಿರ್ಮಾಣ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಬೇರೆ ಇಲಾಖೆಯ ಸರ್ಕಾರಿ ಮುಖ್ಯ ಎಂಜಿನಿಯರ್ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ.

ಮೆಟ್ರೋ ಪಿಲ್ಲರ್ ರಾಡ್​ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ
ಕುಸಿದು ಬಿದ್ದ ಮೆಟ್ರೋ ಪಿಲ್ಲರ್ ರಾಡ್​ಗಳು
Follow us
| Updated By: Rakesh Nayak Manchi

Updated on:Jan 12, 2023 | 7:55 AM

ಬೆಂಗಳೂರು: ಮೆಟ್ರೋ ಪಿಲ್ಲರ್ (Metro Pillar) ರಾಡ್​ಗಳು ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿರುವ ಪ್ರಕರಣ (Mother And Child Death Case) ಸಂಬಂಧ ನಗರದ ಗೋವಿಂದಪುರ ಠಾಣಾ ಪೊಲೀಸರು ತನಿಖೆಯ (Investigation) ಆಯಾಮವನ್ನು ಬದಲಾಯಿಸಿದ್ದಾರೆ. ಘಟನೆ ಸಂಬಂಧ ಮತ್ತಷ್ಟು ಆಳವಾಗಿ ತನಿಖೆ ನಡೆಸಲು ಮುಂದಾಗಿರುವ ಪೊಲೀಸರು ಪಿಲ್ಲರ್ ಕುಸಿತ ಸಂಬಂಧ ಪಿಲ್ಲರ್ ನಿರ್ಮಾಣ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಬೇರೆ ಇಲಾಖೆಯ ಸರ್ಕಾರಿ ಮುಖ್ಯ ಎಂಜಿನಿಯರ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ.

ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಏಕಾಏಕಿಯಾಗಿ ಕುಸಿದುಬಿದ್ದಿರುವ ಹಿಂದೆ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದೆ. ಹೀಗಾಗಿ ಮೆಟ್ರೋ ಪಿಲ್ಲರ್ ನಿರ್ಮಾಣ ಹೇಗೆ ನಡೆಯುತ್ತದೆ, ಅದಕ್ಕೆ ಬಳಸಬೇಕಾದ ವಸ್ತುಗಳು ಎಂತಹ ಗುಟಮಟ್ಟದ್ದಾಗಿರಬೇಕು, ಪಿಲ್ಲರ್ ದಪ್ಪ, ಅದಕ್ಕೆ ಬಳಸು ಕಬ್ಬಿಣವೆಷ್ಟು, ಪಿಲ್ಲರ್ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಪ್ರಮಾಣವೆಷ್ಟು, ಒಂದು ಪಿಲ್ಲರ್ ನಿರ್ಮಾಣಕ್ಕೆ ತೆಗೆದುಕೊಳ್ಳುವ ಸಮಯವೆಷ್ಟು, ಇದೆಲ್ಲವನ್ನು ಕೆಲಸ ಮಾಡಿಸುವುದು ಯಾರ ಹೊಣೆ, ಇದರಲ್ಲಿ ಲೋಪ ಕಂಡು ಬಂದರೆ ಅದಕ್ಕೆ ಯಾರು ಕಾರಣ ಎಂಬಿತ್ಯಾದಿ ಮಾಹಿತಿ ಸಂಗ್ರಹಕ್ಕೆ ಗೊವಿಂದಪುರ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಡೆಡ್ಲಿ ಮೆಟ್ರೋ ದುರಂತ: 3 ಅಧಿಕಾರಿಗಳ ಸಸ್ಪೆಂಡ್, ಇನ್ಮುಂದೆ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ಸಭೆ ಮಾಡ್ತೀವಿ- ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ

ಸದ್ಯ ಆರೋಪಿತ ಅಧಿಕಾರಿಗಳ ವಿಚಾರಣೆಯನ್ನು ಮುಂದೂಡಿದ ಪೊಲೀಸರು ಮುಖ್ಯ ಇಂಜಿನಿಯರ್ ರಿಪೊರ್ಟ್ ಆಧರಿಸಿ ಇಂಚಿಂಚು ಮಾಹಿತಿ ಪಡೆದು ನಂತರ ವಿಚಾರಣೆ ಶುರು ಮಾಡಲಿದ್ದಾರೆ. ಕಾಂಟ್ರಾಕ್ಟ್ ಪಡೆದ ಕಂಪನಿ ಹೊರತುಪಡಿಸಿ ಬಿಎಂಆರ್​​ಸಿಎಲ್ ಅಧಿಕಾರಿಗಳಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ. ಘಟನೆ ಸಂಬಂಧ ಪ್ರಾಥಮಿಕವಾಗಿ ಸೈಟ್ ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಿಲ್ಲರ್ ತೂಕ ಜಾಸ್ತಿಯಾಗಿ ರಸ್ತೆ ಮೇಲೆ ಬಿದ್ದ ಪಿಲ್ಲರ್?

ಕಬ್ಬಿಣದ ಕಂಬಗಳಿಂದ 18 ಮೀಟರ್ ಎತ್ತರ ಪಿಲ್ಲರ್ ಸಿದ್ದಪಡಿಸಿ ನಿಲ್ಲಿಸಲಾಗಿತ್ತು. ಹಂತ ಹಂತವಾಗಿ ಕಾಂಕ್ರೀಟ್ ಹಾಕುವುದರಿಂದ ಪಿಲ್ಲರ್ ವೀಕ್ ಆಗುವ ಸಾಧ್ಯತೆ ಹಿನ್ನಲೆ ಪಿಲ್ಲರ್​ಗೆ ಒಂದೇ ಬಾರಿ ಕಾಂಕ್ರೀಟ್ ಹಾಕಲು ಅಧಿಕಾರಿಗಳು ಪ್ಲಾನ್ ಮಾಡಿದ್ದರಂತೆ. ಅದಕ್ಕಾಗಿ 18 ಮೀಟರ್ ಎತ್ತರದ ಕಬ್ಬಿಣದ ಪಿಲ್ಲರ್ ಸಿದ್ದಪಡಿಸಿ ನಿಲ್ಲಿಸಲಾಗಿತ್ತು. ಅಲ್ಲದೆ, ಪಿಲ್ಲರ್ ನಾಲ್ಕು ಕಡೆ ವೈಯರ್ ರೂಪ್​ನಿಂದ ಬಿಗಿದು ಕಟ್ಟಲಾಗಿತ್ತು.

ನಾಲ್ಕು ಕಡೆ ವೈಯರ್ ರೂಪ್​ನಿಂದ ಬಿಗಿಯಲಾಗಿತ್ತಾದರೂ ಒಂದು ಕಡೆ ವೈಯರ್ ರೂಪ್ ಕಟ್ ಆಗಿದ್ದು, ಗಾಳಿ ಬಂದಾಗ ವಾಲಿದಂತೆ ಹಾರಾಟ ಮಾಡುತ್ತಿತ್ತು. ಅದೇ ರೀತಿ ಮಂಗಳವಾರವು ಕೂಡ ಪಿಲ್ಲರ್ ತೂಕ ಜಾಸ್ತಿಯಾಗಿ ರಸ್ತೆ ಮೇಲೆ ಬಿದ್ದಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಅದರೆ ಘಟನೆಗೆ ಸ್ಪಷ್ಟ ಕಾರಣ ಸೈಟ್ ಅಧಿಕಾರಿಗಳಿಂದಲೇ ಸಿಗಬೇಕಿದೆ.

ಇದನ್ನೂ ಓದಿ: ಮೆಟ್ರೋ ನಿರ್ಮಾಣಕ್ಕೆ ಈವರೆಗೆ 18 ಬಲಿ; ಇನ್ನಾದರೂ ಬೆಂಗಳೂರು ನಾಗರಿಕರಿಗೆ ಸಿಗಬಹುದೇ ಸುರಕ್ಷಾ ಖಾತ್ರಿ

ಕನ್​​ಸ್ಟ್ರಕ್ಷನ್ ಕಂಪನಿ, ಸೈಟ್ ಇಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಮೆಟ್ರೋ ಇಂಜಿನಿಯರ್​ಗಳು ಏನು ಹೇಳುತ್ತಾರೆ ಅನ್ನೋದು ಸದ್ಯ ಕುತೂಹಲವಾಗಿದೆ. ಮತ್ತೊಂದೆಡೆ ಐಐಎಸ್​ಸಿ, ಎಫ್ಎಸ್ಎಲ್ ವರದಿಯಿಂದ ಘಟನೆಯ ಅಸಲಿ ಸತ್ಯ ಹೊರ ಬರಬೇಕಿದೆ. ಇದೆಲ್ಲದರ ನಡುವೆ ಈಗ ಚೀಫ್ ಇಂಜಿನಿಯರ್ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಜೊತೆಗೆ ಐಐಎಸ್​ಸಿ ವರದಿ ಬಳಿಕವಷ್ಟೇ ಎರಡು ಜೀವಗಳ ಸಾವಿಗೆ ಕಾರಣ ತಿಳಿದು ಬರಲಿದೆ.

ಪೊಲೀಸರಿಂದ ಆರೋಪಿಗಳಿಗೆ ನೋಟಿಸ್

ದುರ್ಘಟನೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಪೊಲೀಸರು 9 ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಠಾಣಾ ಇನ್ಸ್​​ಪೆಕ್ಟರ್ ಮುಂದೆ ವಿಚಾರಣೆಗೆ ಹಾಜರಾಗುವಂತೆ A1 ನಾಗಾರ್ಜುನ ಕನ್​ಸ್ಟ್ರಕ್ಷನ್ ಕಂಪನಿ, A2 ಪ್ರಭಾಕರ್, A3 ಚೈತನ್ಯ, A4 ಮಥಾಯಿ, A5 ವಿಕಾಸ್ ಸಿಂಗ್, A6 ಲಕ್ಷ್ಮೀಪತಿ, A7 BMRCL ಡೆಪ್ಯೂಟಿ ಚೀಫ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, A8 BMRCL ಇಇ ಮಹೇಶ್ ಬಂಡೇಕರಿ, A9 JE ಜಾಫರ್ ಸಾದಿಕ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 am, Thu, 12 January 23

ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ