AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂಟಿ ಮಹಿಳೆ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದವ ಅರೆಸ್ಟ್, ತನಿಖೆ ವೇಳೆ ದರೋಡೆ ಹಿಂದಿನ ರಹಸ್ಯ ಬಿಚ್ಚಿಟ್ಟ ಆರೋಪಿ

ಕಳೆದ ನಾಲ್ಕು ದಿನಗಳ ಹಿಂದೆ ಆಗ್ನೇಯ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್​ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಆರೋಪಿ ಜೋಶ್ವಾ ಸುಲಿಗೆ ಮಾಡಿದ್ದ. ಚಾಕುವಿನಿಂದ ಮಹಿಳೆಯ ಕೈ ಕೊಯ್ದು, ಕುತ್ತಿಗೆಗೆ ಚಾಕು ಇಟ್ಟು ಸುಲಿಗೆ ಮಾಡಿದ್ದ. ಸದ್ಯ ಆರೋಪಿ ಅರೆಸ್ಟ್ ಆಗಿದ್ದು ವಿಚಾರಣೆ ವೇಳೆ ಹೊಸ ಕಂಪೆನಿ ತೆರೆಯಲು ಬಂಡವಾಳದ ಹಣಕ್ಕಾಗಿ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Follow us
Shivaprasad
| Updated By: ಆಯೇಷಾ ಬಾನು

Updated on:Aug 29, 2023 | 1:21 PM

ಬೆಂಗಳೂರು, ಆ.29: ಹೊಸ ಕಂಪನಿ ತೆರೆಯಲು ಬಂಡವಾಳ ಬೇಕೆಂದು ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿ ಚಾಕುವಿನಿಂದ ಹಲ್ಲೆ ನಡೆಸಿ ದರೋಡೆ(Robbery) ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್ ಪೊಲೀಸರು(HSR Layout Police) ಬಂಧಿಸಿದ್ದಾರೆ. ಜೋಶ್ವಾ ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಆಗ್ನೇಯ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್​ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಆರೋಪಿ ಜೋಶ್ವಾ ಸುಲಿಗೆ ಮಾಡಿದ್ದ. ಚಾಕುವಿನಿಂದ ಮಹಿಳೆಯ ಕೈ ಕೊಯ್ದು, ಕುತ್ತಿಗೆಗೆ ಚಾಕು ಇಟ್ಟು ಸುಲಿಗೆ ಮಾಡಿದ್ದ. ಕೊನೆಗೆ ಮಹಿಳೆ ಕಣ್ಣಿಗೆ ಖಾರದಪುಡಿ ಎರಚಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯನ್ನು ಹಿಂಬಾಲಿಸಿ ಬಂದಿದ್ದ ಆರೋಪಿ

ಮಕ್ಕಳನ್ನು ಏರಿಯಾದ ಪ್ರತಿಷ್ಟಿತ ಶಾಲೆಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆ ಬಳಿ ಮನೆ ಕೀ ಇರುವುದನ್ನು ಸುಲಿಗೆಕೋರ ಜೋಶ್ವಾ ಗಮನಿಸಿದ್ದ. ಮಹಿಳೆ ಒಂಟಿ ಇರುವುದು ತಿಳಿಯುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿದ್ದಾನೆ. ಬಳಿಕ ಮಹಿಳೆ ಒಳಗೆ ಹೋಗುತ್ತಿದ್ದಂತೆ ಮನೆ ಬಾಗಿಲು ತಟ್ಟಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ನಿಮ್ಮ ಪತಿ 5 ಲಕ್ಷ ಹಣ ಕೊಡಬೇಕು ಈಗಲೇ ಕೊಡಬೇಕು ಎಂದು ಗಾಬರಿಪಡಿಸಿದ್ದಾನೆ. ಏನಾಗ್ತಿದೆ ಎಂದು ಮಹಿಳೆ ಗ್ರಹಿಸುವಷ್ಟರಲ್ಲಿ ಚಾಕು ತೋರಿಸಿ ಬೆದರಿಸಿದ್ದಾನೆ. ಮಹಿಳೆ ಧರಿಸಿದ್ದ ಚಿನ್ನಾಭರಣ ಕಸಿದು, ಹಲ್ಲೆ ಮಾಡಿ ಖಾರದ ಪುಡಿ ಎರಚಿ ಎಸ್ಕೇಪ್ ಆಗಿದ್ದಾನೆ. ಖತರ್ನಾಕ್ ಸುಲಿಗೆಕೋರ ಮನೆಯಿಂದ ಎಸ್ಕೇಪ್ ಆಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮಾರ ದೃಶ್ಯ ಆಧರಿಸಿ HSR ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಮಾವಾಸ್ಯೆಯಂದು ಚಂದ್ರನಿಗೆ ಪೂಜೆ ಮಾಡಿ ಲೂಟಿ ಮಾಡುವ ಬಾವರಿಯಾ ಗ್ಯಾಂಗ್​, ಟಾರ್ಗೆಟ್ ಮಾಡಿರುವ ಮನೆಯ ಸುತ್ತ 15 ದಿನ ಸುತ್ತುತ್ತಾರೆ

ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಮಾರಾಟ ಮಾಡಲು ರೌಡಿಶೀಟರ್​ಗಳ ಸಾಥ್

ಇನ್ನು ಸುಲಿಗೆಕೋರ ಜೋಶ್ವಾ ತಾನು ದರೋಡೆ ಮಾಡಿದ ಚಿನ್ನಾಭರಣಗಳ ಮಾರಾಟ ಮಾಡಲು ರೌಡಿಶೀಟರ್​ಗಳ ಸಹಾಯ ಪಡೆಯುತ್ತಿದ್ದ. ಇನ್ನು ಮಹಿಳೆಯನ್ನು ಬೆದರಿಸಿ ದರೋಡೆ ಮಾಡಿದ್ದ ಚಿನ್ನಾಭರಣವನ್ನು ಸುದ್ದಗುಂಟೆಪಾಳ್ಯದ ರವೀಂದ್ರನ್ ಹಾಗೂ ಅಕ್ಷಯ್ ಎಂಬ ಇಬ್ಬರು ರೌಡಿಶೀಟರ್​ಗಳ ಬಳಿ ಅಡವಿಟ್ಟಿದ್ದ. ಈ ಹಣದಲ್ಲೇ ಹೊಸ ಕಂಪೆನಿ ಕೂಡ ತೆರೆದಿದ್ದ. ಸುಲಿಗೆ ಮಾಡಿದ್ದ ಚಿನ್ನಾಭರಣ ಅಡವಿಟ್ಟು 40 ಸಾವಿರ ಹಣ ನೀಡಿ Great Job ಕಂಪೆನಿ ರಿಜಿಸ್ಟರ್ ಮಾಡಿಸಿದ್ದನಂತೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಹೊಸ ಕಂಪೆನಿ ತೆರೆಯಲು ಬಂಡವಾಳದ ಹಣಕ್ಕಾಗಿ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚಿನ್ನಾಭರಣ ಅಡವಿಡಲು ಸಹಕರಿಸಿದ್ದ ರೌಡಿಶೀಟರ್​ಗಳಿಗಾಗಿ ಶೋಧ ನಡೆಯುತ್ತಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:21 pm, Tue, 29 August 23

ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ