AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆ, ಜನರಿಗೆ 4 ಕೋಟಿ ರೂ. ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್

ರೈಸ್ ಪುಲ್ಲಿಂಗ್ ಯಂತ್ರ ಖರೀದಿಗೆ ಯುಕೆ ಸರ್ಕಾರದೊಂದಿಗೆ ಒಪ್ಪಂದ ಆಗಿದೆ ಎಂದು ನಂಬಿಸಿ ಜನರಿಗೆ 4 ಕೋಟಿ ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್.

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆ, ಜನರಿಗೆ 4 ಕೋಟಿ ರೂ. ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್
ಬಂಧನ
ಆಯೇಷಾ ಬಾನು
|

Updated on:Apr 19, 2023 | 8:19 AM

Share

ಬೆಂಗಳೂರು: ವೈಜ್ಞಾನಿಕ ತನಿಖೆಗಾಗಿ ಯುನೈಟೆಡ್ ಕಿಂಗ್‌ಡಮ್(UK) ಸರ್ಕಾರವು ತನ್ನಿಂದ ರೈಸ್ ಪುಲ್ಲಿಂಗ್ ಯಂತ್ರವನ್ನು ಖರೀದಿಸುತ್ತಿದೆ ಎಂದು ಹೇಳಿ ಸುಮಾರು 4 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಮಾಜಿ ಪೊಲೀಸ್ ಪೇದೆ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರದ ನಿವಾಸಿ ನಟೇಶ್ ವಿ ಆರ್ (44) ಪ್ರಮುಖ ಆರೋಪಿಯಾಗಿದ್ದು ರಾಮನಗರ ನಿವಾಸಿಗಳಾದ ವೆಂಕಟೇಶ್ ಮತ್ತು ಸೋಮಶೇಖರ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಯುಕೆ ಸರ್ಕಾರವು ನನ್ನ ಜೊತೆ ರೈಸ್ ಪುಲ್ಲಿಂಗ್ ಮಷೀನ್ ಖರೀದಿ ಒಪ್ಪಂದ ಮಾಡಿಕೊಂಡಿದ್ದು ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಲ್ಲಿ 60,000 ಕೋಟಿ ರೂಪಾಯಿಗಳನ್ನು ಹಾಕಿದೆ. ಇದನ್ನು ಪಡೆಯಲು ದಾಖಲೆ ಪ್ರಕ್ರಿಯೆ ಆರಂಭಿಸಬೇಕು. ಹೀಗಾಗಿ ನನಗೆ ಹಣ ಬೇಕು ಎಂದು ಸಂತ್ರಸ್ತರನ್ನು ನಂಬಿಸಿ ಅವರಿಂದ ಆರೋಪಿ ನಟೇಶ್ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಅಧಿಕಾರಿಗಳ ಪ್ರಕಾರ, ನಟೇಶ್ ಮತ್ತು ಅವರ ಸಹಚರರು ಯಂತ್ರವನ್ನು ಮಾರಾಟ ಮಾಡಿದ ನಂತರ ನಾಲ್ವರು ಸಂತ್ರಸ್ತರಿಗೆ, ಇಬ್ಬರು ಉದ್ಯಮಿಗಳು, ವೈದ್ಯರು ಮತ್ತು ಎಂಜಿನಿಯರ್‌ಗಳಿಗೆ ತಲಾ 5 ಕೋಟಿ ರೂಪಾಯಿ ಪಾವತಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಪುಲಿಕೇಶಿನಗರ ಪೊಲೀಸರಿಂದ ರೈಸ್ ಪುಲ್ಲಿಂಗ್ ದಂಧೆ ಡೀಲ್ ಪ್ರಕರಣ; ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್ತು

ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಆರೋಪಿ ನಟೇಶ್

ಸಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ನಟೇಶ್ ಕೆಲಸದ ನಡುವೆಯೂ ಹಣ ಮಾಡುವ ಆಸೆಗೆ ಬಿದ್ದಿದ್ದರು. ರೈಸ್ ಪುಲ್ಲಿಂಗ್ ದಂಧೆಯ ಆಮಿಷಕ್ಕೆ ಬಲಿಯಾಗಿದ್ದರು. ನಂತರ ಹಣಕಾಸು ಹೊಡೆತಕ್ಕೆ ಸಿಕ್ಕ ಈತ ಪೊಲೀಸ್ ಕೆಲಸ ಬಿಟ್ಟು ತಾನೇ ರೈಸ್ ಪುಲ್ಲಿಂಗ್ ದಂಧೆಗೆ ಇಳಿದು ಹಣ ಮಾಡಲು ಮುಂದಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಈ ಮೂವರು ಆರೋಪಿಗಳು ಅದೃಷ್ಟದ ವಸ್ತು ಕೊಡೊದಾಗಿ ಆಮಿಷವೊಡ್ಡಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ರು. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ಜನರಿಂದ ಲಕ್ಷಾಂತರ ಹಣ ಪಡೆಯುತ್ತಿದ್ರು. ನಂತರ ಒಂದು ಮೆಷಿನ್ ಮೂಲಕ ಡೆಮೊ ಕೊಟ್ಟು ಸುಲಭವಾಗಿ ಯಾಮಾರಿಸ್ತಿದ್ರು. ಅದಕ್ಕು ಹೆಚ್ಚಾಗಿ ಡೀಲ್ ನಡೆಸುವಾಗ ಇವರೇ ಆ ವಸ್ತುವನ್ನು ಸರ್ಟಿಫಿಕೇಟ್ ನೀಡುವಂತೆ ಬಿಂಬಿಸುತಿದ್ರು. ಅದಕ್ಕೆ ಸ್ಪೇಸ್ ಇಂಡಸ್ಟ್ರೀಸ್ ನಲ್ಲಿ ಕೋಟ್ಯಾಂತರ ರೂ ಮಾರ್ಕೆಟ್ ಇದೆ ಎಂದು ನಬಿಸುತಿದ್ರು. ಹೀಗೆ ಸುಮಾರು 28 ಲಕ್ಷ ಹಣ ವಂಚನೆ ಮಾಡಿದ್ದ ಈ ಮೂವರು ಹಲವರಿಂದ ಹಣ ಪಡೆದು ರೈಸ್ ಪುಲ್ಲಿಂಗ್ ಮೆಷಿನ್ ಕೊಡದೆ ವಂಚಿಸುತ್ತಿದ್ದರು.

ಇನ್ನೂ ಬಂಧಿತ ಆರೋಪಿಗಳ ಬಳಿ 28 ಲಕ್ಷ ನಗದು, ಒಂದೂವರೆ ಕೆಜಿ ಅಷ್ಟು ಚಿನ್ನಾಭರಣ ಹಾಗೂ ಮೂರು ಐಷಾರಾಮಿ ಕಾರುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:19 am, Wed, 19 April 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್