AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾನಿಟೈಸರ್ ಎಂದು ಮೌತ್ ವಾಶ್ ಮಾರುತ್ತಿದ್ದವರು ಪೊಲೀಸ್ ವಶಕ್ಕೆ

ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮೊದಲು ಹಣ ಹಾಕಿಸಿಕೊಂಡು ನಂತರ ಡೆಲಿವರಿ ಕೊಡುತ್ತಿದ್ದರು. ಸಾಹಿಲ್ ಎಂಬುವವರಿಗೆ ಈ ಹಿಂದೆ ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಇಟ್ಟು ಮಾರಾಟ ಮಾಡಿದ್ದರ ಆರೋಪವೂ ಈ ವ್ಯಕ್ತಿಗಳ ಮೇಲಿತ್ತು.

ಸ್ಯಾನಿಟೈಸರ್ ಎಂದು ಮೌತ್ ವಾಶ್ ಮಾರುತ್ತಿದ್ದವರು ಪೊಲೀಸ್ ವಶಕ್ಕೆ
ಪ್ರಾತಿನಿಧಿಕ ಚಿತ್ರ
guruganesh bhat
|

Updated on: May 09, 2021 | 4:46 PM

Share

ಬೆಂಗಳೂರು: ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಿನ್ನೆ ತಡರಾತ್ರಿ ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಾಸಿಪಾಳ್ಯದ ಹ್ಯಾರೀಸ್ ಎಂಬುವವರಿಗೆ ಸ್ಯಾನಿಟೈಸರ್ ಮಾರಾಟ ಮಾಡಲು ಬಂದಿದ್ದ ಇಬ್ಬರು ಯುವಕರು ಐದು ಲೀಟರ್ ಸ್ಯಾನಿಟೈಸರ್ ಬಾಟಲಿಗೆ 10 ಸಾವಿರ ಹಣವನ್ನು ನಿಗದಿಪಡಿಸಿದ್ದರು. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮೊದಲು ಹಣ ಹಾಕಿಸಿಕೊಂಡು ನಂತರ ಡೆಲಿವರಿ ಕೊಡುತ್ತಿದ್ದರು. ಸಾಹಿಲ್ ಎಂಬುವವರಿಗೆ ಈ ಹಿಂದೆ ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಇಟ್ಟು ಮಾರಾಟ ಮಾಡಿದ್ದರ ಆರೋಪವೂ ಈ ವ್ಯಕ್ತಿಗಳ ಮೇಲಿತ್ತು.

ಈ ಹಿಂದೆ ಮೋಸಹೋಗಿದ್ದ ಸಾಹಿಲ್, ಸುಧಾಮನಗರ ಮಾಜಿ ಕಾರ್ಪೊರೇಟರ್ ಆರ್.ವಿ ಯುವರಾಜ್​ಗೆ ಸ್ಯಾನಿಟೈಸರ್ ಹೆಸರಲ್ಲಿ ಮೌತ್ ವಾಶ್ ಮಾರಾಟ ಮಾಡ್ತಿರುವ ಬಗ್ಗೆ ವಿಷಯ ತಿಳಿಸಿದ್ದರು. ನಿನ್ನೆಯೂ ಇದೇ ರೀತಿ ನಕಲಿ ಸ್ಯಾನಿಟೈಸರ್ ಮಾರಾಟ ಮಾಡಲು ಕಲಾಸಿಪಾಳ್ಯಕ್ಕೆ ಆರೋಪಿಗಳು ಬಂದ ವೇಳೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೈಸೂರು ರಸ್ತೆಯ ಫ್ಯಾಕ್ಟರಿಯಿಂದ ನಕಲಿ ಸ್ಯಾನಿಟೈಸರ್ ತಂದು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೂಡಲೇ ದೇಶ ತೊರೆಯಿರಿ! ಕೋವಿಡ್-19 ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ವಿರುದ್ಧ ಸಿಟ್ಟಾದ ಮಾಲ್ಡೀವ್ಸ್‌ ಕ್ರೀಡಾ ಸಚಿವ

ಬೆಂಗಳೂರು ಸಂಕಷ್ಟದಲ್ಲಿದೆ, ಹೆಚ್ಚುವರಿ ಬೆಡ್, ಆಕ್ಸಿಜನ್ ಅಗತ್ಯ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

(Bengaluru Police arrest 2 people who sale mouth wash in the name of sanitiser)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ