ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಅಸೋಸಿಯೇಷನ್​ ದೂರು

ಆರ್​​ಸಿಬಿ ವಿಜಯೋತ್ಸವಕ್ಕೆ ಹರಿದು ಬಂದಿದ್ದ ಅಭಿಮಾನಿಗಳ ದಂಡು ಮಾಡಿದ್ದ ಅವಾಂತರಗಳು ಒಂದೆರಡಲ್ಲ. ಸಿಕ್ಕಸಿಕ್ಕ ಕಡೆಗಳಲ್ಲಿ ನುಗ್ಗಿ ದಾಂಧಲೆ ಮಾಡಿದ್ದರು. ಅಭಿಮಾನಿಗಳ ರಂಪಾಟದಿಂದ ಕಬ್ಬನ್ ಪಾರ್ಕ್‌ನ ಗಿಡಗಳಿಗೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಕಬ್ಬನ್​ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್​ರಿಂದ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕಾಲ್ತುಳಿತದಿಂದ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಅಸೋಸಿಯೇಷನ್​ ದೂರು
ಮರವೇರಿದ ಅಭಿಮಾನಿ
Updated By: ಗಂಗಾಧರ​ ಬ. ಸಾಬೋಜಿ

Updated on: Jun 08, 2025 | 1:26 PM

ಬೆಂಗಳೂರು, ಜೂನ್​ 08: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣವನ್ನು ಸದ್ಯ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರ್​ಸಿಬಿ (RCB) ವಿಜಯೋತ್ಸವಕ್ಕೆ ಬಂದ್ದಿದ್ದ ಫ್ಯಾನ್ಸ್, ಅಭಿಮಾನದ ಹೆಸರಿನಲ್ಲಿ ಅತಿರೇಕ, ಹುಚ್ಚಾಟ ಮೆರೆದಿದ್ದರು. ಅವರ ರಂಪ, ರಾಮಾಯಣದಿಂದ ಸಾವು-ನೋವುಗಳೊಂದಿಗೆ ಪರಿಸರಕ್ಕೂ ಹಾನಿ ಆಗಿತ್ತು. ಜನರ ಕಾಲ್ತುಳಿತದಿಂದ ನೆಲಮಟ್ಟದ ಗಿಡಗಳು ನೆಲಸಮವಾಗಿವೆ. ಕಬ್ಬನ್​ ಪಾರ್ಕ್​​ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ಕಬ್ಬನ್​ಪಾರ್ಕ್ ನಡಿಗೆದಾರರ ಸಂಘದ (Park Walkers Association) ಅಧ್ಯಕ್ಷ ಉಮೇಶ್​ರಿಂದ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಆರ್​ಸಿಬಿ ಐಪಿಎಲ್​​ನಲ್ಲಿ ಕಪ್​​ ಗೆಲ್ಲುವ ಮೂಲಕ ಕನ್ನಡಿಗರ 18 ವರ್ಷದ ಕನಸು ನನಸಾಗಿತ್ತು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನ ಅಮಾಯಕರು‌ ಪ್ರಾಣ ತೆತ್ತರು. ಆದರೆ ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದಲ್ಲಿ ‌ಸೇರಿದ ಭಾರಿ ಜನರ ದಟ್ಟಣೆಯಿಂದಾಗಿ ಬ್ಯಾರಿಕೇಡ್​ಗಳು, ನೆಲಮಟ್ಟದ ಗಿಡಗಳನ್ನು ಅಥವಾ ಆರ್ನಮೆಂಟಲ್ ಪ್ಲಾಂಟ್ಸ್​ಗಳನ್ನು ಜನ ತುಳಿದು ಹಾಕಿದ್ದಾರೆ. ಇದರಿಂದಾಗಿ ಗಿಡಗಳೆಲ್ಲಾ ಮುರಿದು ಒಣಗಿ ಹೋಗಿ ಸರ್ವನಾಶವಾಗಿವೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ DPRA ನಿರ್ಲಕ್ಷ್ಯ ಬಯಲು, ಅಪಾಯದ ಎಚ್ಚರಿಕೆ ನೀಡಿದ್ದ ಡಿಸಿಪಿ..!

ಇದನ್ನೂ ಓದಿ
Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಳ
Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು
ತನಿಖೆಗಿಳಿದ ಸಿಐಡಿ: ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಕುನ್ಹಾ ಆಯೋಗಕ್ಕೆ ಸೂಚನೆ

ಕೇವಲ ವಿಧಾನಸೌಧ ಮುಂಭಾಗದ ಗಿಡಗಳಿಗೆ ಮಾತ್ರ ಹಾನಿಯಾಗಿಲ್ಲ. ಎದುರುಗಡೆ ಇರುವ ಕಬ್ಬನ್ ಪಾರ್ಕ್​​ನ ಗೇಟ್​ನ್ನು ಹಾರಿ ಜನ ಬಂದಿದ್ದರು. ಜೊತೆಗೆ ಪ್ರಾಣವನ್ನು ಲೆಕ್ಕಿಸದೇ ಮರವೇರಿ ಕುಳಿತ್ತಿದ್ದರು. ಇದರಿಂದ ಸಾಕಷ್ಟು ಮರಗಳಿಗೂ ಡ್ಯಾಮೇಜ್​ ಉಂಟಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್​ಸಿಬಿ, ಕೆಎಸ್ ಸಿಎ, ಡಿಎನ್​ಎ ವಿರುದ್ದ ಸಿಡಿ ಸಾಕ್ಷಿ ಸಮೇತ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಧಾನಸೌಧದ ಗಾರ್ಡನ್ ಏರಿಯಾ, ಫೆನ್ಸಿಂಗ್ ಪೀಸ್ ಪೀಸ್

ಆರ್​ಸಿಬಿ ಸಮಾರಂಭ ವೀಕ್ಷಣೆಗೆ ವಿಧಾನಸೌಧದ ಬಳಿ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರಿದ್ದರು. ಸಿಕ್ಕ ಸಿಕ್ಕ ಜಾಗಕ್ಕೆ ನುಗ್ಗಿದ್ದರು. ಆದರೆ ಹೀಗೆ ಬಂದೋರು ಹಾಗೇ ಸುಮ್ಮನೆ ಹೋಗ್ಲಿಲ್ಲ. ಬದಲಾಗಿ ವಿಧಾನಸೌಧದ ಗಾರ್ಡನ್ ಏರಿಯಾ, ಕೆಂಪೇಗೌಡ ಪ್ರತಿಮೆ ಬಳಿ ಫೆನ್ಸಿಂಗ್​ನ ಪೀಸ್ ಪೀಸ್ ಮಾಡಿದ್ದರು. ಆಕರ್ಷಕ ವಿದ್ಯುತ್ ದೀಪಗಳನ್ನೂ ಧ್ವಂಸ ಮಾಡಿದ್ದರು.

ಇದನ್ನೂ ಓದಿ: Bengaluru stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಮಹತ್ವದ ತೀರ್ಮಾನ ಕೈಗೊಂಡ ಬಿಸಿಸಿಐ

ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳು ಗೇಟ್​ಗಳನ್ನೇ ಮುರಿದು ಹಾಕಿದ್ದರು. ಗೇಟ್ ನಂ.3ನ್ನು ಮುರಿದು ಹಾಕಿದ್ದ ಅಭಿಮಾನಿಗಳು, ಸ್ಟೇಡಿಯಂ ಒಳಗೂ ದಾಂದಲೆ ಸೃಷ್ಟಿಸಿದ್ದರು. ಹೂ ಕುಂಡಗಳನ್ನೂ ಹೊಡೆದು, ಧ್ವಂಸ ಗೊಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:42 pm, Sun, 8 June 25