ಮಳೆಯಿಂದ ತಪ್ಪಿಸಿಕೊಳ್ಳಲು ಸ್ಪೀಡ್ ಆಗಿ ವಾಹನ ಚಲಾಯಿಸುವ ಸವಾರರೇ ಎಚ್ಚರ! ಈ ರಸ್ತೆಗಳಲ್ಲಿ ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು

ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಆರಂಭವಾಗಿದೆ. ಮಳೆ ಬರುವ ವೇಳೆ ಬೈಕ್ ಮತ್ತು ವಾಹನ ಸವಾರರು ಬೇಗ ಮನೆ ತಲುಪಬೇಕು ಎಂದು ಸ್ಪೀಡ್ ಆಗಿ ವಾಹನ ಚಲಾಯಿಸುತ್ತಾರೆ. ಆದರೆ ವಾಹನ ಸವಾರರೇ ಎಚ್ಚರ ವಹಿಸಿ. ಏಕೆಂದರೆ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿವೆ ನೂರಾರು ಡೆಡ್ಲಿ ಗುಂಡಿಗಳು.

ಮಳೆಯಿಂದ ತಪ್ಪಿಸಿಕೊಳ್ಳಲು ಸ್ಪೀಡ್ ಆಗಿ ವಾಹನ ಚಲಾಯಿಸುವ ಸವಾರರೇ ಎಚ್ಚರ! ಈ ರಸ್ತೆಗಳಲ್ಲಿ ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು
ಬಾಯ್ತೆರೆದು ಕಾಯುತ್ತಿವೆ ಗುಂಡಿಗಳು
Edited By: ಆಯೇಷಾ ಬಾನು

Updated on: May 13, 2024 | 10:12 AM

ಬೆಂಗಳೂರು, ಮೇ.13: ಈಗಾಗಲೇ ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru Rain) ಜೋರಾಗಿ ಗಾಳಿ ಮಳೆ ಆರಂಭವಾಗಿದೆ. ರಾತ್ರಿ ವೇಳೆ ಮಳೆ ಸುರಿಯುವಾಗ ಬೈಕ್ ಸವಾರರು ಮಳೆಯಲ್ಲಿ ನೆನೆಯುವ ಮುನ್ನ ಮನೆ ಸೇರಿಕೊಳ್ಳಬೇಕೆಂದು ಸ್ಪೀಡ್ ಆಗಿ ವಾಹನ ಓಡಿಸಲು ಮುಂದಾಗ್ತಾರೆ. ಆದರೆ ನಗರದಲ್ಲಿರುವ ಡೆಡ್ಲಿ ಗುಂಡಿಗಳು (Potholes) ಗೊತ್ತಾಗದೆ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚು. ನಾವಿಲ್ಲಿ ನೀಡಿರುವ ಈ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಈ ರಸ್ತೆಗಳಲ್ಲಿ ಸಂಚರಿಸುವಾಗ ಕೊಂಚ ಎಚ್ಚರ ವಹಿಸಿ.

ಹೊಸೂರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದ್ರೆ ಈ ಗುಂಡಿಗಳಲ್ಲಿ ಯಾರಾದರೂ ಬಿದ್ರೆ ಖಂಡಿತವಾಗಿ ಕೈಕಾಲು ಮುರಿದುಕೊಳ್ಳುತ್ತಾರೆ ಅನ್ಸುತ್ತೆ.‌ ಇತ್ತ ಚಿನ್ನಯನಪಾಳ್ಯ ತಿರುವು ರೋಡ್ ನಲ್ಲಿರುವ ಗುಂಡಿಯ ಬಗ್ಗೆಯಂತು ಹೇಳೋದೆ ಬೇಡ ನೋಡಿದ್ರೆ ಗೊತ್ತಾಗುತ್ತದೆ ಅಮಾಯಕರ ಪ್ರಾಣ ತೆಗೆಯಲು ಈ ಗುಂಡಿ ಕಾಯ್ಕೊಂಡಿದೆ ಎಂದು. ಇನ್ನೂ ಲಕ್ಕಸಂದ್ರ ಜಂಕ್ಷನ್ ನಲ್ಲಿರುವ ಗುಂಡಿಗಳಂತೋ ವಾಹನ ಸವಾರರು ಯಾವ ಕಡೆ ಹೋಗಬೇಕೆಂದು ಗೊತ್ತಾಗದಷ್ಟು ಆ್ಯಂಗಲ್​ನಲ್ಲಿ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಲ್ಲಿ ವಾಹನ ಚಾಲನೆ ಮಾಡಬೇಕಾದ್ರೆ ಚೂರು ನಿರ್ಲಕ್ಷ್ಯ ಮಾಡಿದ್ರು ಆಸ್ಪತ್ರೆ ಸೇರುವುದು ಗ್ಯಾರೆಂಟಿ. ಪ್ರತಿದಿನ ಈ ರೋಡ್ ನಲ್ಲಿ ಓಡಾಡುತ್ತೀನಿ ಯಾವಾಗಲೂ ಯಾರಾದರೂ ವಾಹನ ಸವಾರರು ಈ ಗುಂಡಿಗಳಲ್ಲಿ ಬೀಳುತ್ತಾನೆ ಇರುತ್ತಾರೆ. ದಯವಿಟ್ಟು ಇದನ್ನು ಮೊದಲು ಸರಿ ಪಡಿಸಿ ಎಂದು ಬೈಕ್ ಸವಾರ ಭರತ್ ಮನವಿ ಮಾಡುದ್ರು.

ಇದನ್ನೂ ಓದಿ: ವಯಸ್ಸಿಗೂ ಮೀರಿದ ಸಾಧನೆ; ವಿಶ್ವ ದಾಖಲೆ ಬರೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದ

ಒಟ್ನಲ್ಲಿ ಮಳೆ ಬರುವಾಗ ರೋಡ್ ಮೇಲೆ ನೀರು ಕಮ್ಮಿ ಆದ ಮೇಲೆ ಬೈಕ್ ಚಲಾಯಿಸುವುದು ಒಳ್ಳೆಯದು. ಇಲ್ಲಾಂದ್ರೆ ಗುಂಡಿಗಳು ಕಾಣದೆ ಅದರಲ್ಲಿ ಬೀಳ್ಬೋದು. ಇನ್ನು ಬೈಕ್​ನಲ್ಲಿ ಹಿಂದೆ ಹೆಂಡತಿ, ಮಕ್ಕಳು, ವಯಸ್ಸಾದವರು ಇದ್ರಂತೂ ಬೀ ಕೇರ್ ಫುಲ್. ನಿಮ್ಮ ವೇಗಕ್ಕೆ ಹಿಂದೆ ಕುಳಿತವ್ರು ಮುಗ್ಗರಿಸಿ ಬೀಳಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us