ಬೆಂಗಳೂರಿಗರಿಗೆ ಗುಡ್ನ್ಯೂಸ್: ಬಡಾವಣೆಗಳಿಂದ ಮೆಟ್ರೋಗೆ ಸಂಪರ್ಕ ಕಲ್ಪಿಸಲು 200 ಹೊಸ ಎಸಿ ಮಿನಿ ಬಸ್!
ವಾಣಿಜ್ಯ ಪ್ರಯಾಣಿಕರ ವಾಹನಗಳಿಗೂ ಇನ್ಮುಂದೆ ನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0 ಲಭ್ಯವಾಗಲಿದೆ. ಆ ಮೂಲಕ ಓಲಾ, ಊಬರ್ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಾವು ಇಳಿಯುವ ಸ್ಥಳಗಳಿಗೆ ಹೋಗುವ ಬಿಎಂಟಿಸಿ ಬಸ್ಗಳ ಸಂಚಾರ ಮಾಹಿತಿಯನ್ನು ಪಡೆಯಬಹುದಾಗಿದೆ. ಇನ್ನು ಮೆಟ್ರೋ ಪ್ರಯಾಣಿಕರಿಗಾಗಿ 200 ಹೊಸ ಎಸಿ ಮಿನಿ ಬಸ್ ಮೀಸಲಿಡಲು ಬಿಎಂಟಿಸಿ ಮುಂದಾಗಿದೆ.
- Kiran Surya
- Updated on: Sep 8, 2026
- 7:51 pm
ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾದ್ರೂ 20 ನಿಲ್ದಾಣಗಳಿಗಿಲ್ಲ ದೊಡ್ಡ ಮಟ್ಟದ ಪ್ರಯಾಣಿಕರ ಸಂಖ್ಯೆ!
ಬೆಂಗಳೂರಿನಲ್ಲಿ ಪ್ರತಿದಿನ 11 ರಿಂದ 12 ಲಕ್ಷ ಜನರು 'ನಮ್ಮ ಮೆಟ್ರೋ' ಬಳಸುತ್ತಿದ್ದರೂ, ಮೂರೂ ಮಾರ್ಗಗಳ ಒಟ್ಟು 20 ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರಯಾಣಿಕರ ಸಂಚಾರವಿಲ್ಲ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗಗೊಂಡಿದೆ. ಯೆಲ್ಲೋ ಲೈನ್ನ 9, ಗ್ರೀನ್ ಲೈನ್ನ 7 ಮತ್ತು ನೇರಳೆ ಮಾರ್ಗದ ನಾಲ್ಕು ನಿಲ್ದಾಣಗಳು ಈ ಪಟ್ಟಿಗೆ ಸೇರಿವೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Kiran Surya
- Updated on: Sep 8, 2026
- 9:42 am
ಕ್ಯಾಬ್ ಅಗ್ರಿಗೇಟರ್ಗಳ ಮನಸೋಇಚ್ಛೆ ದರ ವಸೂಲಿಗೆ ಬ್ರೇಕ್: ಬೆಂಗಳೂರಲ್ಲಿ ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳಿಗೂ ಫೇರ್ ಮೀಟರ್ ಕಡ್ಡಾಯ
ಬೆಂಗಳೂರಿನಲ್ಲಿ ಸಂಚರಿಸುವ ಎಲ್ಲ ಯೆಲ್ಲೋ ಬೋರ್ಡ್ ಕ್ಯಾಬ್ಗಳಿಗೆ ಫೇರ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅಗ್ರಿಗೇಟರ್ ಕಂಪನಿಗಳು ಹಾಗೂ ಕ್ಯಾಬ್ ಮಾಲೀಕರು ಪ್ರಯಾಣಿಕರಿಂದ ಅನಿಯಮಿತ ದರ ವಸೂಲಿ ಮಾಡುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ. ಹೊಸ ಕ್ಯಾಬ್ಗಳ ನೋಂದಣಿ ಮತ್ತು ಹಳೆಯ ಕ್ಯಾಬ್ಗಳ ಎಫ್ಸಿ (FC) ಗೆ ಫೇರ್ ಮೀಟರ್ ಅಗತ್ಯವಾಗಿದೆ.
- Kiran Surya
- Updated on: Sep 6, 2026
- 9:40 pm
ಸೋಲಾರ್ ನಿಂದ ನಮ್ಮ ಮೆಟ್ರೋ ರೈಲು ಓಡಿಸಲು ಪ್ಲ್ಯಾನ್: ಕೋಟ್ಯಂತರ ರೂ ಉಳಿತಾಯ
ಅದು ಸಿಲಿಕಾನ್ ಸಿಟಿ ಬೆಂಗಳೂರಿನ ಬಹುನಿರೀಕ್ಷಿತ ಮೆಟ್ರೋ ಮಾರ್ಗ,ಈ ವರ್ಷ ಡಿಸೆಂಬರ್ ನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಳ್ತಿದೆ ಆದರೆ ಐಐಎಸ್ಸಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳನ್ನು ಸಂಪೂರ್ಣವಾಗಿ ಸೋಲಾರ್ ನಲ್ಲೇ ರನ್ ಮಾಡಬಹುದು ಎಂದು ವರದಿ ನೀಡಿದ್ದಾರೆ. ಹಾಗಾದ್ರೆ, ಈ ಸೋಲಾರ್ ಬಳಕೆಯಿಂದ ಏನೆಲ್ಲಾ ಲಾಭ ಎನ್ನುವ ಡಿಟೇಲ್ಸ್ ಇಲ್ಲಿದೆ.
- Kiran Surya
- Updated on: Sep 4, 2026
- 9:00 pm
ರಾಜ್ಯದ ಜನತೆಗೆ ಮತ್ತೊಂದು ಶಾಕ್: ಶೀಘ್ರವೇ ಬಸ್ ಟಿಕೆಟ್ ದರ ಹೆಚ್ಚಳ?; ಸಾರಿಗೆ ಸಚಿವರಿಂದಲೇ ಮಾಹಿತಿ
ಕರ್ನಾಟಕದಲ್ಲಿ ಶೀಘ್ರವೇ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸುಳಿವು ನೀಡಿದ್ದು, ಜೊತೆಗೆ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಬಿಎಂಟಿಸಿಗೆ 4,500 ಇ-ಬಸ್ ಸೇರ್ಪಡೆಗೊಳಿಸುವುದಾಗಿ ತಿಳಿಸಿದ್ದಾರೆ. ಇವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
- Kiran Surya
- Updated on: Sep 4, 2026
- 5:46 pm
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 2027 ದಿನಾಂಕ: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2027ರ ದಿನಾಂಕಗಳನ್ನು ಘೋಷಿಸಲಾಗಿದೆ. 2027ರ ಫೆಬ್ರವರಿ 8 ರಿಂದ 12ರ ವರೆಗೆ ನಡೆಯಲಿರುವ ಈ 16ನೇ ಆವೃತ್ತಿಯ ಏರ್ ಶೋಗೆ ಸಿದ್ಧತೆಗಳು ಶುರುವಾಗಿವೆ. ಇದು ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು, ತಜ್ಞರು ಹಾಗೂ ನೀತಿ ನಿರೂಪಕರು ಒಂದೇ ಸೂರಿನಡಿ ಸೇರುವ ಹೆಮ್ಮೆಯ ಸಂಗತಿಯಾಗಿದೆ.
- Kiran Surya
- Updated on: Sep 3, 2026
- 2:04 pm
ಬೆಂಗಳೂರಿನಲ್ಲಿ ಇಂದು, ನಾಳೆ 2 ದಿನ ಚಿಕನ್ ಅಂಗಡಿಗಳು ಬಂದ್; ತ್ಯಾಜ್ಯ ಶುಲ್ಕದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು ಚಿಕನ್ ಅಂಗಡಿ ಬಂದ್: ಬೆಂಗಳೂರಿನಲ್ಲಿ BSWML ವಿಧಿಸಿರುವ ಚಿಕನ್ ತ್ಯಾಜ್ಯ ವಿಲೇವಾರಿ ಶುಲ್ಕ ವಿರೋಧಿಸಿ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಎರಡು ದಿನ ಬಂದ್ಗೆ ಕರೆ ನೀಡಿದೆ. ಇಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಳೆ ನಗರದಾದ್ಯಂತ ಚಿಕನ್ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ.
- Kiran Surya
- Updated on: Sep 3, 2026
- 10:10 am
ಬಿಎಂಟಿಸಿ ಬಸ್ಸುಗಳಲ್ಲಿ ಸ್ಪೇರ್ ಪಾರ್ಟ್ಸ್ ಅಭಾವ: ನಡುರಸ್ತೆಯಲ್ಲೇ ಬಸ್ ಕೆಟ್ಟು ಚಾಲಕರು-ಪ್ರಯಾಣಿಕರ ಪರದಾಟ
ಬೆಂಗಳೂರು ಬಿಎಂಟಿಸಿಯಲ್ಲಿ ಬಿಡಿಭಾಗಗಳ ತೀವ್ರ ಕೊರತೆಯಿಂದ ಬಸ್ಸುಗಳು ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಹೊಸ ಬಿಡಿಭಾಗಗಳ ಪೂರೈಕೆಯಾಗದ ಕಾರಣ, ಕೆಎಸ್ಆರ್ಟಿಸಿಯ ಹಳೆಯ ಬಸ್ಸುಗಳ ಬಿಡಿಭಾಗಗಳನ್ನು ಬಳಸಿ ಓಡಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ತೊಂದರೆ ಹಾಗೂ ಚಾಲಕರಿಗೆ ಸುರಕ್ಷತಾ ಅಪಾಯವನ್ನುಂಟುಮಾಡಿದೆ. ಮೆಕ್ಯಾನಿಕ್ಗಳಿಗೂ ಕೆಲಸ ಮಾಡಲು ಬಿಡಿಭಾಗಗಳಿಲ್ಲದೆ ಕಷ್ಟವಾಗಿದೆ. ಸಂಸ್ಥೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವದ ಜೊತೆ ಆಟವಾಡಲಾಗುತ್ತಿದೆ ಎಂಬ ಆರೋಪವಿದೆ.
- Kiran Surya
- Updated on: Sep 3, 2026
- 8:52 am
ಟನಲ್ ರಸ್ತೆ ಯೋಜನೆಗೆ ಐಐಎಸ್ಸಿ ಆಕ್ಷೇಪ, ರಾಜ್ಯಪಾಲರಿಗೆ ವರದಿ ಸಲ್ಲಿಕೆ: ಮೆಟ್ರೋವೇ ಟ್ರಾಫಿಕ್ಗೆ ಪರಿಣಾಮಕಾರಿ ಎಂದ ತಜ್ಞರು
ಬೆಂಗಳೂರಿನ ಹೆಬ್ಬಾಳ ಟನಲ್ ರಸ್ತೆ ಯೋಜನೆಗೆ ಐಐಎಸ್ಸಿ ತಜ್ಞರ ತಂಡ ಆಕ್ಷೇಪ ವ್ಯಕ್ತಪಡಿಸಿದೆ. ಟನಲ್ನಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ರಾಜ್ಯಪಾಲರಿಗೆ ವರದಿ ನೀಡಿದ್ದು, ದೀರ್ಘಾವಧಿಗೆ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಬಲಪಡಿಸಲು ಶಿಫಾರಸು ಮಾಡಿದೆ. ಇದರೊಂದಿಗೆ, ಸುರಂಗ ರಸ್ತೆ ವಿಚಾರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
- Kiran Surya
- Updated on: Sep 3, 2026
- 8:42 am
ಬೆಂಗಳೂರಿನಲ್ಲಿ ಮತ್ತೊಮ್ಮೆ ಏರ್ಶೋ ಧಮಾಕಾ: ‘ಏರೋ ಇಂಡಿಯಾ-2027’ ದಿನಾಂಕ ಘೋಷಣೆ
ಬೆಂಗಳೂರಿನಲ್ಲಿ ಏರೋ ಇಂಡಿಯಾ ೨೦೨೭ ರ ೧೬ನೇ ಆವೃತ್ತಿಯು ಫೆಬ್ರವರಿ ೮ ರಿಂದ ೧೨ ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. HAL ಆಯೋಜಿಸುವ ಈ ಜಾಗತಿಕ ಏರೋಸ್ಪೇಸ್ ಪ್ರದರ್ಶನವು ರಕ್ಷಣಾ ಕಂಪನಿಗಳು, ತಜ್ಞರು ಮತ್ತು ನವೋದ್ಯಮಿಗಳನ್ನು ಒಂದೇ ಸೂರಿನಡಿ ತರಲಿದೆ. ಯುದ್ಧ ವಿಮಾನಗಳ ಪ್ರದರ್ಶನ ಹಾಗೂ ವೈಮಾನಿಕ ಸಾಹಸಗಳು ಕಣ್ಣಿನ ಹಬ್ಬವಾಗಲಿವೆ.
- Kiran Surya
- Updated on: Sep 2, 2026
- 10:38 pm
ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ!
ಕಚ್ಚಾ ವಸ್ತುಗಳ ವೆಚ್ಚ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹುಂಡೈ, ಟಾಟಾ ಮೋಟಾರ್ಸ್ ಹಾಗೂ ಎಂಜಿ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಿವೆ. ಸೆಪ್ಟೆಂಬರ್ 1 ರಿಂದ ಕ್ರೆಟಾ, ವೆನ್ಯೂ, ನೆಕ್ಸಾನ್, ಹ್ಯಾರಿಯರ್ ಸೇರಿದಂತೆ ಪ್ರಮುಖ ಮಾಡೆಲ್ಗಳ ದರ 15 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಹೆಚ್ಚಾಗಲಿದ್ದು, ಕಾರು ಕೊಳ್ಳುವ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ.
- Kiran Surya
- Updated on: Sep 2, 2026
- 7:21 am
ನಾನ್ ವೆಜ್ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್!
BSWML ಚಿಕನ್ ಅಂಗಡಿ ತ್ಯಾಜಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ದರ ನಿಗದಿ ಮಾಡಿದ್ದು, ಇದರ ವಿರುದ್ಧ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಹೋರಾಟ ಮಾಡಲು ಮುಂದಾಗಿದೆ. ಹೌದು... ಸೆಪ್ಟೆಂಬರ್ 3 ಹಾಗೂ 4 ರಂದು ಬೆಂಗಳೂರಿನ (Bengaluru) ಕೋಳಿ ಮಾಂಸದ ಅಂಗಡಿಗಳು ಬಂದ್ ಆಗಲಿದೆ. ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಪ್ರತಿ ಕೆಜಿಗೆ 5 ರೂಪಾಯಿ ಶುಲ್ಕ ನಿಗದಿ ಮಾಡಿದೆ. ಈ ಕ್ರಮವನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರತಿಭಟನೆಗೆ (Protest) ಮುಂದಾಗಿದ್ದು, ಅಂಗಡಿ ಬಂದ್ ಮಾಡಿ ಹೋರಾಟಕ್ಕೆ ಇಳಿಯಲಿದ್ದಾರೆ.
- Kiran Surya
- Updated on: Sep 1, 2026
- 5:52 pm