ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್ಸಿಎಲ್ ಕಸರತ್ತು
ಕಳೆದ ಮೂರು ವರ್ಷಗಳಲ್ಲಿ ಬಿಎಂಆರ್ಸಿಎಲ್ಗೆ 1,614 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿರುವ ನಿಗಮ, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ರಷ್ಟು ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂತಿಮ ನಿರ್ಧಾರಕ್ಕೆ ಸರ್ಕಾರಗಳ ಒಪ್ಪಿಗೆ ಅಗತ್ಯವಾಗಿದೆ. ಒಂದು ವೇಳೆ ಟಿಕೆಟ್ ದರ ಏರಿಕೆಯಾದರೆ, ಪ್ರಯಾಣಿಕರಿಗೆ ಮತ್ತೊಂದು ಹೊರೆಯಾಗಲಿದೆ.
- Kiran Surya
- Updated on: Jul 29, 2026
- 6:54 am
ಚಾಲಕರ ಕೊರತೆಯಿಂದ ಸಂಚಾರ ಮಾಡ್ತಿಲ್ಲ ಬಿಎಂಟಿಸಿಯ 500ಕ್ಕೂ ಹೆಚ್ಚು ಇವಿ ಬಸ್! ಸಮಯಕ್ಕೆ ಬಸ್ ಸಿಗದೆ ಪ್ರಯಾಣಿಕರ ಪರದಾಟ
Bangalore News: ಬೆಂಗಳೂರು ನಗರದಲ್ಲಿ ಬಿಎಂಟಿಸಿಯ 500ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳು ಪ್ರತಿದಿನ ಕಾರ್ಯಾಚರಣೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಾಲಕರ ಕೊರತೆ, ವೇತನ ಸಮಸ್ಯೆ ಹಾಗೂ ಗುತ್ತಿಗೆ ಸಂಸ್ಥೆಗಳ ಕಾರ್ಯವೈಖರಿಯಿಂದ ಪ್ರಯಾಣಿಕರು ಸಮಯಕ್ಕೆ ಬಸ್ ಸಿಗದೆ ಪರದಾಡುತ್ತಿದ್ದಾರೆ. ಅಧಿಕಾರಿಗಳ ಲಂಚಗುಳಿತನವೂ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಆರೋಪವೂ ಇದೆ.
- Kiran Surya
- Updated on: Jul 28, 2026
- 9:34 am
ಮೆಟ್ರೋ ರೈಲ್ವೆ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
Bangaluru Metro News: ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ದುರಂತವೊಂದು ಸಂಭವಿಸಿದೆ. 35 ವರ್ಷದ ವ್ಯಕ್ತಿ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರೈಲಿನ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಟು ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.
- Kiran Surya
- Updated on: Jul 27, 2026
- 8:55 pm
ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಗುಡ್ನ್ಯೂಸ್: 4,500 ಹೊಸ ಬಸ್ಗಳ ಖರೀದಿಗೆ ಭೈರತಿ ಸುರೇಶ್ ಸೂಚನೆ
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ಸಂಚರಿಸುತ್ತಿದ್ದು, ತೀವ್ರ ಜನಸಂದಣಿ ಉಂಟಾಗುತ್ತಿದೆ. ಈ ನಡುವೆ ನಾಲ್ಕೂ ಸಾರಿಗೆ ನಿಗಮಗಳಿಂದ ಈ ವರ್ಷ ಬರೋಬ್ಬರಿ 6,000 ಹಳೆಯ ಬಸ್ಗಳು ಗುಜರಿ ಸೇರಲಿವೆ. ಹೀಗಾಗಿ ಸಾರಿಗೆ ಅಭಾವ ತಪ್ಪಿಸಲು ತಕ್ಷಣವೇ 4,500 ಹೊಸ ಬಸ್ಗಳ ಖರೀದಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವ ಭೈರತಿ ಸುರೇಶ್ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.
- Kiran Surya
- Updated on: Jul 26, 2026
- 9:32 pm
ಬೆಂಗಳೂರಿನಲ್ಲಿ ಹೆಚ್ಚಿದ ಚಿರತೆ ಭೀತಿ: ಬ್ಯಾಡರಹಳ್ಳಿಯಲ್ಲಿ ಚಿರತೆ ಇದೆ ಎಚ್ಚರಿಕೆ ಬೋರ್ಡ್, ಬನಶಂಕರಿಯಲ್ಲೂ ಪ್ರತ್ಯಕ್ಷ!
Leopard spotted in Bangaluru: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಭಾರತ ನಗರ 2ನೇ ಹಂತದಲ್ಲಿ ಕಳೆದ ಹದಿನೈದು ದಿನಗಳಿಂದ ಒಂಟಿ ಚಿರತೆಯೊಂದು ಸತತವಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ. ಜನರು ತಮ್ಮ ಮನೆ ಮುಂದೆ ಚಿರತೆ ಇದೆ ಎಚ್ಚರಿಕೆ ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಈ ಮಧ್ಯೆ ಇತ್ತ ಬನಶಂಕರಿಲ್ಲೂ ಚಿರತೆ ಪ್ರತ್ಯಕ್ಷವಾಗಿದೆ.
- Kiran Surya
- Updated on: Jul 26, 2026
- 8:27 pm
ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಬೆಲೆ ಭಾರೀ ಏರಿಕೆ: ಈ ತಿಂಗಳೇ ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!
Car Price Hike: ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಆಗಸ್ಟ್ನಿಂದ ಹೊಸ ಕಾರುಗಳ ಬೆಲೆ 50-60 ಸಾವಿರ ರೂ. ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದೆ ಜಿಎಸ್ಟಿ 2.0 ಜಾರಿಯಾದಾಗ ಕಡಿಮೆಯಾಗಿದ್ದ ಕಾರು ಬೆಲೆ, ಈಗ ಮತ್ತೆ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಹೊರೆ ಆಗಲಿದೆ. ಹೀಗಾಗಿ ಗ್ರಾಹಕರು ಈಗಲೇ ಕಾರು ಬುಕ್ ಮಾಡುತ್ತಿದ್ದಾರೆ.
- Kiran Surya
- Updated on: Jul 24, 2026
- 8:58 pm
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!
Namma Metro Fare Hike: ಈ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಮುಂದಾಗಿತ್ತು. ಆದರೆ ಪ್ರಯಾಣಿಕರಿಂದ ಆಕ್ರೋಶ ಬೆನ್ನಲ್ಲೇ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಟಿಕೆಟ್ ದರ ಏರಿಕೆ ಮಾಡಲು ನಮ್ಮ ಮೆಟ್ರೋ ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Kiran Surya
- Updated on: Jul 23, 2026
- 9:55 pm
ಆ 15ಕ್ಕೆ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಆಗೋದು ಡೌಟ್! ಇಲ್ಲಿದೆ ಅಸಲಿ ಕಾರಣ
Pink Line Metro Delayed: ಪಿಂಕ್ ಲೈನ್ ಮೆಟ್ರೋ ಪ್ರಯಾಣಿಕರ ಬಹುನಿರೀಕ್ಷಿತ ಮಾರ್ಗಗಳಲ್ಲಿ ಒಂದು. ಸದ್ಯ ಆರ್ಡಿಎಸ್ಓ ಸಂಸ್ಥೆಯಿಂದ ಅಂತಿಮ ಅನುಮತಿ ದೊರೆಯದ ಕಾರಣ ಆಗಸ್ಟ್ 15ಕ್ಕೆ ಮಾರ್ಗ ಓಪನ್ ಆಗುವುದು ಡೌಟು ಎನ್ನಲಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಪ್ರಯಾಣಿಕರಿಗೆ ಮೆಟ್ರೋ ನಿರಾಸೆ ಮೂಡಿಸಿದೆ.
- Kiran Surya
- Updated on: Jul 22, 2026
- 10:48 pm
ಮತ್ತಿಕೆರೆಯಲ್ಲಿ ನಿರ್ಮಾಣವಾಗಲಿದೆ 199 ಕೋಟಿ ರೂ. ವೆಚ್ಚದ ಬೃಹತ್ ‘ಡಬಲ್ ಡೆಕ್ಕರ್’ ಫ್ಲೈ ಓವರ್!
ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಯಡಿ ಮತ್ತಿಕೆರೆಯಲ್ಲಿ 199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಬೃಹತ್ 'ಡಬಲ್ ಡೆಕ್ಕರ್' ಫ್ಲೈ ಓವರ್ ನಿರ್ಮಾಣಕ್ಕೆ ಕೆ-ರೈಡ್ ನಿರ್ಧರಿಸಿದೆ. ನಮ್ಮ ಮೆಟ್ರೋ ಮಾದರಿಯಲ್ಲೇ ಕೆಳಗೆ ರಸ್ತೆ, ಮಧ್ಯೆ ಮೇಲ್ಸೇತುವೆ ಹಾಗೂ ಮೇಲ್ಭಾಗದಲ್ಲಿ ರೈಲು ಸಂಚರಿಸಲಿದ್ದು, ಯಶವಂತಪುರ-ಮತ್ತಿಕೆರೆ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ.
- Kiran Surya
- Updated on: Jul 22, 2026
- 7:34 am
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!
ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಯಶವಂತಪುರದವರೆಗೆ ಮಾತ್ರ ಶಾರ್ಟ್-ಲೂಪ್ನಲ್ಲಿ ರೈಲುಗಳು ಸಂಚರಿಸುತ್ತಿದ್ದು, ಯಶವಂತಪುರದಿಂದ ಮಾದಾವರ ನಡುವಿನ 10 ನಿಲ್ದಾಣಗಳಲ್ಲಿ ಸೇವೆ ಸ್ಥಗಿತಗೊಂಡಿದೆ. ಸಮಸ್ಯೆ ಸರಿಪಡಿಸಲು ತಾಂತ್ರಿಕ ತಂಡ ಕಾರ್ಯನಿರತವಾಗಿದ್ದು, ಬಿಎಂಆರ್ಸಿಎಲ್ ಪ್ರಯಾಣಿಕರ ಅನಾನುಕೂಲತೆಗೆ ವಿಷಾದಿಸಿದೆ.
- Kiran Surya
- Updated on: Jul 21, 2026
- 9:09 am
ಬೆಂಗಳೂರಿಗೂ ಲಗ್ಗೆ ಇಟ್ಟ ಚಿರತೆ: ಬೀದಿ ನಾಯಿ ಮೇಲೆ ಅಟ್ಯಾಕ್, ಬೆಚ್ಚಿಬಿದ್ದ ಸ್ಥಳೀಯರು
ಕಾಡಂಚಿನಲ್ಲಿರುವ ಹಳ್ಳಿಗಳಲ್ಲಿ ಚಿರತೆ ಕಾಟ ಇರುವುದು ಸಾಮಾನ್ಯ ಆದ್ರೆ, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಚಿರತೆ ಲಗ್ಗೆ ಇಟ್ಟಿದ್ದು, ಬೀದಿ ನಾಯಿ ಮೇಲೆ ದಾಳಿ ಮಾಡಿದೆ. ಹನ್ನೊಂದು ದಿನದಲ್ಲಿ 4 ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಬೆಂಗಳೂರಿಗರಿಗೂ ಚಿರತೆ ಭಯ ಶುರುವಾಗಿದೆ. ಹಾಗಾದ್ರೆ, ಬೆಂಗಳೂರಿನ ಯಾವ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Kiran Surya
- Updated on: Jul 20, 2026
- 10:42 pm
ಬೆಂಗಳೂರಿಗರೇ ಎಚ್ಚರ! ನೀವು ತಿನ್ನುವ ಸೊಪ್ಪು, ತರಕಾರಿಯಲ್ಲೂ ಇದೆ ಸೀಸದ ಅಂಶ!
ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ 70 AQI ದಾಟಿದ್ದು, ನಗರದ ಸುತ್ತಮುತ್ತ ಬೆಳೆಯುವ ಸೊಪ್ಪು ಹಾಗೂ ತರಕಾರಿಗಳಲ್ಲಿ ಅಪಾಯಕಾರಿ ಸೀಸ (Lead) ಮತ್ತು ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷೆಯಲ್ಲಿ ಬದನೆ, ತೊಂಡೆಕಾಯಿ ಹಾಗೂ ಹಸಿರೆಲೆ ತರಕಾರಿಗಳು ಅಸುರಕ್ಷಿತ ಎಂದು ತಿಳಿದುಬಂದಿದ್ದು, ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ.
- Kiran Surya
- Updated on: Jul 20, 2026
- 7:35 am