AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು

ಬಿಎಂಟಿಸಿಯ ಇವಿ ಬಸ್​​ಗಳು ಟೋಲ್ ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೆ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು
ಬಿಎಂಟಿಸಿ ಬಸ್​ (ಎಡಚಿತ್ರ) ಟೋಲ್​ (ಬಲಚಿತ್ರ)
ವಿವೇಕ ಬಿರಾದಾರ
|

Updated on: Mar 08, 2023 | 4:59 PM

Share

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಲಿಕಾನ್​ ಸಿಟಿ (Silicon City) ಜನರ ಪಾಲಿಗೆ ಜೀವನಾಡಿಯಾಗಿದೆ. ನಗರದ ಯಾವುದೇ ಭಾಗಗಕ್ಕು ಸಂಪರ್ಕ ಕಲ್ಪಿಸತ್ತಿದ್ದು, ಸಾಕಷ್ಟು ಅನುಕೂಲಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಪರಿಸರ ಸ್ನೇಹಿ ಬಸ್​ಗಳು (ಎಲೆಕ್ಟ್ರಿಕ್​ ಬಸ್)ಗಳು ಸಂಚರಿಸುತ್ತಿವೆ.  ಬಿಎಂಟಿಸಿಯ ಇವಿ ಬಸ್​​ಗಳು (Electric Bus) ಟೋಲ್ (Toll) ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೇ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಖಾಸಗಿಯವರ ಸಹಭಾಗಿತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಬಸ್​ಗಳು (EV Bus​) ನಿನ್ನೆ (ಮಾ.7) ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದವು. ಮಾರಸಂದ್ರ ಟೋಲ್​ ಬಳಿ ಬರುತ್ತಿದ್ದಂತೆ ಬಸ್​ ನಿಂತುಹೋಗಿವೆ. ಬಸ್​ನ ಎಲ್ಲ ಭಾಗಗಳು ಮತ್ತು ಬ್ಯಾಟರಿ ಚಾರ್ಜ್​​ ಸರಿಯಾಗಯೇ ಇತ್ತು. ಆದರೆ ಟೋಲ್​​ಗೆ ಹಣ ತುಂಬಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣ ಖಾಲಿಯಾಗಿತ್ತು. ಈ ರೀತಿ ಒಂದೆರಡು ಬಸ್​ಗಳಲ್ಲ ಸರಿ ಸುಮಾರು 15ಕ್ಕೂ ಹೆಚ್ಚು ಬಸ್​ಗಳು ಟೋಲ್​​ ಪಾಸ್​ ಆಗಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣವಿಲ್ಲದೆ ಟೋಲ್​ ಬಳಿಯೇ ನಿಂತಿವೆ.

ಬಸ್​ಗಳು ಹೀಗೆ ಟೋಲ್​ ಬಳಿ ನಿಂತುಕೊಳ್ಳುತ್ತಿದ್ದಂತೆ, ಪ್ರಯಾಣಿಕರು ಕೆಲ ಕಾಲ ಕಾದು ವಿಧಿಯಿಲ್ಲದೆ ಬೇರೆ ಬಸ್​​ಗೆ ಹತ್ತಿಕೊಂಡು ತಮ್ಮ ಮುಂದಿನ ಪ್ರಯಾಣ ಬೆಳಸಿದ್ದಾರೆ. ಬಿಎಂಟಿಸಿಯ ಈ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ