AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು

ಬಿಎಂಟಿಸಿಯ ಇವಿ ಬಸ್​​ಗಳು ಟೋಲ್ ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೆ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು
ಬಿಎಂಟಿಸಿ ಬಸ್​ (ಎಡಚಿತ್ರ) ಟೋಲ್​ (ಬಲಚಿತ್ರ)
Follow us
ವಿವೇಕ ಬಿರಾದಾರ
|

Updated on: Mar 08, 2023 | 4:59 PM

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಲಿಕಾನ್​ ಸಿಟಿ (Silicon City) ಜನರ ಪಾಲಿಗೆ ಜೀವನಾಡಿಯಾಗಿದೆ. ನಗರದ ಯಾವುದೇ ಭಾಗಗಕ್ಕು ಸಂಪರ್ಕ ಕಲ್ಪಿಸತ್ತಿದ್ದು, ಸಾಕಷ್ಟು ಅನುಕೂಲಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಪರಿಸರ ಸ್ನೇಹಿ ಬಸ್​ಗಳು (ಎಲೆಕ್ಟ್ರಿಕ್​ ಬಸ್)ಗಳು ಸಂಚರಿಸುತ್ತಿವೆ.  ಬಿಎಂಟಿಸಿಯ ಇವಿ ಬಸ್​​ಗಳು (Electric Bus) ಟೋಲ್ (Toll) ಹಣ ಕಟ್ಟಲು, ಫಾಸ್ಟ್​​ ಟ್ಯಾಗ್​ನಲ್ಲಿ ಚಾರ್ಜ್​​​​ ಇಲ್ಲದೆ ಟೋಲ್‌ ​ಬಳಿಯೇ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್​ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ

ಖಾಸಗಿಯವರ ಸಹಭಾಗಿತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಬಸ್​ಗಳು (EV Bus​) ನಿನ್ನೆ (ಮಾ.7) ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದವು. ಮಾರಸಂದ್ರ ಟೋಲ್​ ಬಳಿ ಬರುತ್ತಿದ್ದಂತೆ ಬಸ್​ ನಿಂತುಹೋಗಿವೆ. ಬಸ್​ನ ಎಲ್ಲ ಭಾಗಗಳು ಮತ್ತು ಬ್ಯಾಟರಿ ಚಾರ್ಜ್​​ ಸರಿಯಾಗಯೇ ಇತ್ತು. ಆದರೆ ಟೋಲ್​​ಗೆ ಹಣ ತುಂಬಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣ ಖಾಲಿಯಾಗಿತ್ತು. ಈ ರೀತಿ ಒಂದೆರಡು ಬಸ್​ಗಳಲ್ಲ ಸರಿ ಸುಮಾರು 15ಕ್ಕೂ ಹೆಚ್ಚು ಬಸ್​ಗಳು ಟೋಲ್​​ ಪಾಸ್​ ಆಗಲು ಫಾಸ್ಟ್​​ ಟ್ಯಾಗ್​ನಲ್ಲಿ ಹಣವಿಲ್ಲದೆ ಟೋಲ್​ ಬಳಿಯೇ ನಿಂತಿವೆ.

ಬಸ್​ಗಳು ಹೀಗೆ ಟೋಲ್​ ಬಳಿ ನಿಂತುಕೊಳ್ಳುತ್ತಿದ್ದಂತೆ, ಪ್ರಯಾಣಿಕರು ಕೆಲ ಕಾಲ ಕಾದು ವಿಧಿಯಿಲ್ಲದೆ ಬೇರೆ ಬಸ್​​ಗೆ ಹತ್ತಿಕೊಂಡು ತಮ್ಮ ಮುಂದಿನ ಪ್ರಯಾಣ ಬೆಳಸಿದ್ದಾರೆ. ಬಿಎಂಟಿಸಿಯ ಈ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ